32.1 C
ಪುತ್ತೂರು, ಬೆಳ್ತಂಗಡಿ
September 15, 2026
Uncategorized

ಜ.22: ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಯೊಂದಿಗೆಕೋಟಿ ಕೋಟಿ ರಾಮ ಭಕ್ತರ ಅಭಿಲಾಷೆ ಈಡೇರುತ್ತಿದೆ

ಬೆಳ್ತಂಗಡಿ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಗೊಂಡು ಇದೀಗ ಭಕ್ತರ ಅಭಿಲಾಷೆಯಂತೆ ಜ.22ರಂದು ರಾಮಚಂದ್ರನ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿದೆ. ಕೋಟಿ ಕೋಟಿ ರಾಮ ಭಕ್ತರ ಅಭಿಲಾಷೆ ಈಡೇರುತ್ತಿದೆ. ವಾದ – ವಿವಾದಗಳು ಏನೇ ಇರಲಿ ರಾಮ ಮಂದಿರ ನಿರ್ಮಾಣಗೊಂಡಿರುವುದು ಬಹುತೇಕರ ಕನಸು ನನಸಾಗಿದೆ. ಈ ನಿಟ್ಟಿನಲ್ಲಿ ಎಲ್ಲರಿಗೂ ಶುಭಾಶಯಗಳು.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ದಿನಗಳಿಂದ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಆದರೆ ಅದರಲ್ಲಿ ಒಂದು ವಿಚಾರಕ್ಕೆ ನನ್ನ ಸಹಮತ ಇಲ್ಲ. ರಾಮ ಮಾಂಸಹಾರಿಯಾಗಿದ್ದ ಎಂಬ ವಿಚಾರ. ಈ ವಿಚಾರ ಕೆಲವು ರಾಮಭಕ್ತರನ್ನು ಕೆರಳಿಸಿದೆ.

ಆದರೆ ನಾನು ತಿಳಿದುಕೊಂಡ ಪ್ರಕಾರ ರಾಮ ಶುದ್ಧ ಸಸ್ಯಾಹಾರಿಯಾಗಿದ್ದ. ರಾಮ ಎಂದರೆ ಆತ ಕೇವಲ ಮನುಷ್ಯನಲ್ಲ. ದೈವಾಂಶ ಸಂಭೂತ. ರಾಮಾಯಣವನ್ನು ಓದುವಾಗ ಆತ ಮಾಂಸಾಹಾರಿ ಎಂಬ ಉಲ್ಲೇಖ ಎಲ್ಲೂ ಬರುವುದಿಲ್ಲ. ರಾಮ ಮಾಂಸಾಹಾರಿಯಾಗಿರಲು ಸಾಧ್ಯವೇ ಇಲ್ಲ. ಹಣ್ಣು ಹಂಪಲುಗಳನ್ನು ತಿಂದು ಕಾಡಲ್ಲಿ ಜೀವನ ಕಳೆದ ಎಂಬ ಉಲ್ಲೇಖವೇ ಸಿಗುತ್ತದೆ.

ಹಾಗಾಗಿ ರಾಮ ಭಕ್ತರು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನಾ ಮಹೋತ್ಸವದ ಸಮಯದಲ್ಲಿಯಾದರೂ ಅಥವಾ ಮಹೋತ್ಸವದ ಸಮಯದವರೆಗಾದರೂ ಸಸ್ಯಾಹಾರಿಗಳಾಗಿ ನಿಯಮವನ್ನು ಅಳವಡಿಸಿಕೊಂಡು ರಾಮನ ಬಗ್ಗೆ ಇಲ್ಲದ ವಿಚಾರಗಳನ್ನು ಹೇಳುವವರಿಗೆ ಸೆಡ್ಡು ಹೊಡೆಯಿರಿ ಎಂದು ಮನವಿ ಮಾಡುತ್ತೇನೆ. ಹಾಗೆಯೇ ಮದ್ಯಪಾನ ಮುಂತಾದ ದುಶ್ಚಟಗಳಿಂದ ದೂರವಿದ್ದು ರಾಮ ಮಂದಿರದ ವೈಭವಕ್ಕೆ ಸಾಕ್ಷಿಯಾಗಿರಿ ಎಂದು ಮನವಿ ಮಾಡುತ್ತೇನೆ.

#ನಿರಂಜನ್ ಜೈನ್ ಕುದ್ಯಾಡಿ

Related posts

ಸುಲ್ಕೇರಿ: ರಸ್ತೆಗೆ ಬೀಳುವ ಹಂತದಲ್ಲಿದ್ದ ಮರವನ್ನು ಕೂಡಲೇ ವೇಣೂರು ಅರಣ್ಯ ಅಧಿಕಾರಿಗಳ ಮುಖಾಂತರ ತೆರವು ಕಾರ್ಯ

Suddi Udaya

ಕಕ್ಕಿಂಜೆ: ಕಾರೊಂದರ ಮೇಲೆ ಕಾಡಾನೆ ದಾಳಿ

Suddi Udaya

ಶಿರ್ಲಾಲು ಯುವವಾಹಿನಿ ಸಂಚಲನ ಸಮಿತಿ ವತಿಯಿಂದ ಆರೋಗ್ಯ ನಿಧಿ ವಿತರಣೆ

Suddi Udaya

ಮಸೀದಿ ಬಳಿ ನಿಲ್ಲಿಸಿದ್ದ ಧರ್ಮಗುರುಗಳ ಬೈಕ್ ಕಳವು : ಕಳ್ಳತನ ಕೃತ್ಯ ಸಿಸಿ ಕ್ಯಾಮರದಲ್ಲಿ ಸೆರೆ

Suddi Udaya

ಗುರಿಪಳ್ಳ: ಸಂಜೀವ ಶೆಟ್ಟಿ ನಿಧನ

Suddi Udaya

ಶಿಶಿಲ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya
error: Content is protected !!