ಮೂರು ದಿನದ ಅಂತರದಲ್ಲಿ ಸಹೋದರರಿಬ್ಬರ ಸಾವು

Suddi Udaya

ಆನಂದ ಪೂಜಾರಿ

ಬೆಳ್ತಂಗಡಿ: ನಾಲ್ಕೂರು ಗ್ರಾಮದ ಹಟ್ಟೆಮಾರ್ ಹೊಸಮನೆ ನಿವಾಸಿ ಕೃಷಿಕ ಆನಂದ ಪೂಜಾರಿ (62 ವ) ಹೃದಯಾಘಾತದಿಂದ ಇಂದು ಬೆಳಗ್ಗಿನ ಜಾವ (ಜ. 15) ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಕೃಷಿಕರಾಗಿದ್ದು ಎಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು.

ಮೂರು ದಿನದ ಹಿಂದೆ ಆನಂದ ಪೂಜಾರಿಯವರ ಸಹೋದರ ನಾವೂರು ಬಂಗ್ಲೆ ಮನೆ ನಿವಾಸಿ, ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಚಂದ್ರಹಾಸ ಪೂಜಾರಿ (60ವ)ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದರು. ಸಹೋದರರಿಬ್ಬರ ಸಾವಿನಿಂದ ಕುಟುಂಬ, ಬಂಧು ಬಳಗ ಶೋಕ ಸಾಗರದಲ್ಲಿ ಮುಳುಗಿದೆ.

ಮೃತ ಆನಂದ ಪೂಜಾರಿಯವರು ಪತ್ನಿ ಗುಲಾಬಿ, ಮೂವರು ಮಕ್ಕಳಾದ ಯೋಗೀಶ್ ಪೂಜಾರಿ, ಪ್ರಮೀಳಾ, ಹರೀಶ್ ಅವರನ್ನು ಆಗಲಿದ್ದಾರೆ. ಮೃತ ಚಂದ್ರಹಾಸ ಪೂಜಾರಿಯವರು ಪತ್ನಿ ಪ್ರೇಮಾ, ಮೂವರು ಮಕ್ಕಳಾದ ಪ್ರಸನ್ನ, ಪ್ರಸಾದ್, ಪ್ರತಿಮಾ, ಸಹೋದರರಾದ ಕೃಷ್ಣಪ್ಪ ಪೂಜಾರಿ,ಬಾಬು ಪೂಜಾರಿ, ದೇವದಾಸ ಪೂಜಾರಿ,ದಾಮೋದರ ಪೂಜಾರಿ,ಶಶಿಧರ ಪೂಜಾರಿ ಹಾಗೂ ಕಟುಂಬ ವರ್ಗದವರನ್ನು ಅಗಲಿದ್ದಾರೆ.

Leave a Comment

error: Content is protected !!