July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನವರದಿ

ಮೂರು ದಿನದ ಅಂತರದಲ್ಲಿ ಸಹೋದರರಿಬ್ಬರ ಸಾವು

ಆನಂದ ಪೂಜಾರಿ

ಬೆಳ್ತಂಗಡಿ: ನಾಲ್ಕೂರು ಗ್ರಾಮದ ಹಟ್ಟೆಮಾರ್ ಹೊಸಮನೆ ನಿವಾಸಿ ಕೃಷಿಕ ಆನಂದ ಪೂಜಾರಿ (62 ವ) ಹೃದಯಾಘಾತದಿಂದ ಇಂದು ಬೆಳಗ್ಗಿನ ಜಾವ (ಜ. 15) ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಕೃಷಿಕರಾಗಿದ್ದು ಎಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು.

ಮೂರು ದಿನದ ಹಿಂದೆ ಆನಂದ ಪೂಜಾರಿಯವರ ಸಹೋದರ ನಾವೂರು ಬಂಗ್ಲೆ ಮನೆ ನಿವಾಸಿ, ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಚಂದ್ರಹಾಸ ಪೂಜಾರಿ (60ವ)ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದರು. ಸಹೋದರರಿಬ್ಬರ ಸಾವಿನಿಂದ ಕುಟುಂಬ, ಬಂಧು ಬಳಗ ಶೋಕ ಸಾಗರದಲ್ಲಿ ಮುಳುಗಿದೆ.

ಮೃತ ಆನಂದ ಪೂಜಾರಿಯವರು ಪತ್ನಿ ಗುಲಾಬಿ, ಮೂವರು ಮಕ್ಕಳಾದ ಯೋಗೀಶ್ ಪೂಜಾರಿ, ಪ್ರಮೀಳಾ, ಹರೀಶ್ ಅವರನ್ನು ಆಗಲಿದ್ದಾರೆ. ಮೃತ ಚಂದ್ರಹಾಸ ಪೂಜಾರಿಯವರು ಪತ್ನಿ ಪ್ರೇಮಾ, ಮೂವರು ಮಕ್ಕಳಾದ ಪ್ರಸನ್ನ, ಪ್ರಸಾದ್, ಪ್ರತಿಮಾ, ಸಹೋದರರಾದ ಕೃಷ್ಣಪ್ಪ ಪೂಜಾರಿ,ಬಾಬು ಪೂಜಾರಿ, ದೇವದಾಸ ಪೂಜಾರಿ,ದಾಮೋದರ ಪೂಜಾರಿ,ಶಶಿಧರ ಪೂಜಾರಿ ಹಾಗೂ ಕಟುಂಬ ವರ್ಗದವರನ್ನು ಅಗಲಿದ್ದಾರೆ.

Related posts

ಸಂತ ತೆರೇಸಾ ಸಂಯುಕ್ತ ಪ.ಪೂ. ಕಾಲೇಜಿನಲ್ಲಿ ಶಾಲಾ ಮಂತ್ರಿ ಮಂಡಲದ ಉದ್ಘಾಟನಾ ಸಮಾರಂಭ

Suddi Udaya

ನಾವೂರು ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಅರಸಿನಮಕ್ಕಿ : 33ನೇ ಉಚಿತ ಟೈಲರಿಂಗ್‌ ತರಬೇತಿ ಶಿಬಿರ ಉದ್ಘಾಟನೆ

Suddi Udaya

ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಂಜನಾ ಎಂ.ಡಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಮೊಗ್ರು: ಕೋರಿಯಾರು ಎಂಬಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಬೆಳ್ತಂಗಡಿಯಲ್ಲಿ 12 ನೇ ವರ್ಷದ ಕೋಟಿ ಚೆನ್ನಯ ಕ್ರೀಡಾಕೂಟ, ಸಮಾಜದ 6 ಜೋಡಿ ಅವಳಿಗಳಿಗೆ ಗೌರವಾರ್ಪಣೆ

Suddi Udaya
error: Content is protected !!