24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಡಾಮರೀಕರಣ ಭಾಗ್ಯಕ್ಕಾಗಿ ಕಾಯುತ್ತಿರುವ ಬಂಗೇರಕಟ್ಟೆ- ನೆತ್ತರ ರಸ್ತೆ

ಮಚ್ಚಿನ ಗ್ರಾಮ ಹಾಗೂ ಮಡಂತ್ಯಾರು ಗ್ರಾಮ ಪಂಚಾಯತ್‌ಗೆ ಸೇರಿದ ಜಂಟಿ ರಸ್ತೆ ಬಂಗೇರಕಟ್ಟೆ, ನೆತ್ತರ ರಸ್ತೆ ಡಾಮರೀಕರಣ ಎದ್ದು ಮಣ್ಣಿನ ರಸ್ತೆಯಾಗಿರುವ ಈ ರಸ್ತೆಗೆ ಡಾಮರೀಕರಣದ ಭಾಗ್ಯ ಎಂದು ಸ್ವಾಮಿ ಈ ಭಾಗದ ಜನರು ಚುನಾವಣೆಯ ಸಂದರ್ಭದಲ್ಲಿ ಭರವಸೆಯನ್ನು ನಂಬಿ ಕಾದು ಕಾಲ ಕಳೆದು ಪಡುವ ಕಷ್ಟ ಇಷ್ಟಲ್ಲ. ಇತ್ತೀಚೆಗೆ ನೆತ್ತರ ಶಾಲೆಯು ಬೆಳ್ಳಿಹಬ್ಬ ಆಚರಿಸಿಕೊಂಡು ಸಂಭ್ರಮ ಪಟ್ಟರು. ಈ ಶಾಲೆಗೆ ಮಾತ್ರ ತೆರಳಲು ಹೊರಲಾಡಿಕೊಂಡೆ ತೆರಳುವಂತಾಯಿತು. ನೆತ್ತರದಿಂದ ಬಂಗೇರ ಕಟ್ಟೆಯವರೆಗೆ ರಸ್ತೆಯ ಚರಂಡಿ, ಪೊದೆಗಳ ಸ್ವಚ್ಛತೆಯನ್ನು ಪ್ರತಿ ವರ್ಷ ಭಾಗ್ಯಶ್ರೀ ಮಿತ್ರಮಂಡಳಿ ಹಾಗೂ ಸ್ಥಳೀಯರ ಸಹಕಾರದಿಂದ ಶ್ರಮಾದಾನದಿಂದ ಮಾಡುತ್ತಿರುವುದು ಸಂತೋಷಕರ ಆದರೆ ಈ ರಸ್ತೆಯ ಸ್ಥಿತಿ ನೋಡುವವರಿಲ್ಲದಂತಾಗಿದೆ.

ಈ ರಸ್ತೆಯು ಬಂಗೇರಕಟ್ಟದಿಂದ ನೆತ್ತರ, ಮಾಣ್ಯ, ಮುಂದಿಲ, ತಣ್ಣೀರುಪಂಥ, ಬಿಜಿಲ, ಪಾಲೆದು, ಪಾಂಡವರಕಲ್ಲು ಪರಿಸರಗಳಿಗೆ ಸಂಪರ್ಕಕೊಂಡಿಯಂತಿರುವ ಈ ರಸ್ತೆ ಇನ್ನೂ ಡಾಮರೀಕರಣ ನಡೆಯದೆ ಇರುವುದು ಶೋಚನಿಯ. ಈ ಭಾಗದ ಜನರಿಗೆ ತುರ್ತು ಆರೋಗ್ಯದ ಸಮಸ್ಯೆಗಳು ಬಂದಾಗ ವಾಹನಗಳು ಬರಲು ಹಿಂದೇಟು ಹಾಕುವಂತ ಸ್ಥಿತಿ ನಿರ್ಮಾಣಗೊಂಡಿದೆ. ದಿನ ನಿತ್ಯ ಕೂಲಿ ಕೆಲಸಗಳಿಗೆ ಶಾಲಾ ಮಕ್ಕಳು ಶಾಲೆಗೆ ತೆರಳಲು ಸಮಯಕ್ಕಿಂತ ಮುಂಚಿತವಾಗಿ ಸಿದ್ದರಾಗಬೇಕಾಗಿದೆ. ಎಷ್ಟೆ ಅಪಘಾತಗಳು ಈ ರಸ್ತೆಯಲ್ಲಿ ನಡೆದರು ಕಣ್ಣ ಮುಂದೆ ಕೂತಿರುವ ಈ ರಸ್ತೆಯ ಜಂಟಿ ಪಂಚಾಯತ್‌ಗಳು ಸಂಬಂಧ ಪಟ್ಟ ಇಲಾಖೆಗಳು, ಜನಪ್ರತಿನಿಧಿಗಳು, ಇನ್ನಾದರು ತಾವು ಈ ಮಕ್ಕಳ, ವೃದ್ಧರ, ಜನರ ಕಷ್ಟಗಳನ್ನು ಪರಿಹರಿಸಿ ಶೀಘ್ರದಲ್ಲಿ ಡಾಮರೀಕರಣ ನಡೆಸಿ ಈ ಭಾಗದ ಜನರು, ಶಾಲಾ ಮಕ್ಕಳು ಪಡುವಂತಾ ಕಷ್ಟಗಳಿಗೆ ಮುಕ್ತಿ ದೊರೆಯಲಿ ಎಂದು ಗ್ರಾಮಸ್ಥರ ಆಗ್ರಹ.
ವರದಿ- ಹರ್ಷ ಬಳ್ಳಮಂಜ

Related posts

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಭೇಟಿ

Suddi Udaya

ರಾಜ್ಯಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾಟ :ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ತಂಡ ಚಾಂಪಿಯನ್

Suddi Udaya

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರ ನೇತೃತ್ವದಲ್ಲಿ ಅಬಲೆಯರ ಪುನರ್ವಸತಿ ಕೇಂದ್ರ “ಸೇವಾಶ್ರಮ”ದಲ್ಲಿ ಪ್ರಧಾನಿ ನರೇಂದ್ರ ಮೋದಿರವರ ಹುಟ್ಟುಹಬ್ಬ ಆಚರಣೆ

Suddi Udaya

ಉಜಿರೆ ಅನುಗ್ರಹ ಪಿ.ಯು ಕಾಲೇಜಿಗೆ ನುಗ್ಗಿದ್ದ ಕಳ್ಳರು: ಸಿಸಿ ಕ್ಯಾಮೆರಾ, ಎನ್ ವಿಆರ್, ಹಾರ್ಡ್ ಡಿಸ್ಕ್ ಕಳ್ಳತನ

Suddi Udaya

ಧರ್ಮಸ್ಥಳ ಸೊಸೈಟಿಗೆ ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ

Suddi Udaya

ಮಾಲಾಡಿ ನಿವಾಸಿ ಅನಿಲ್ ಪ್ರವೀಣ ಪಿರೇರಾ ನಾಪತ್ತೆ: ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!