25.4 C
ಪುತ್ತೂರು, ಬೆಳ್ತಂಗಡಿ
March 29, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮದ್ದಡ್ಕದಲ್ಲಿ ನ್ಯಾಯಬೆಲೆ ಅಂಗಡಿ ಶುಭಾರಂಭ

ಕುವೆಟ್ಟು: ಮದ್ದಡ್ಕ ಜನತೆಯ ನ್ಯಾಯಬೆಲೆ (ರೇಷನ್ )ಅಂಗಡಿಯ ಕಳೆದ 3 ವರ್ಷಗಳ ಹಿಂದಿನ ಬೇಡಿಕೆ ಈಡೇರಿದಂತಾಗಿದೆ ಕೆಲವು ವರ್ಷಗಳಲ್ಲಿ ಕುವೆಟ್ಟು, ಓಡಿಲ್ನಾಳ ಪರಿಸರದ ಜನರೀಗೆ ನ್ಯಾಯಬೆಲೆ ಅಂಗಡಿ ಮದ್ದಡ್ಕದಲ್ಲಿ ಕಾರ್ಯನಿರ್ವಸುತ್ತಿತ್ತು ಕಾರಣಾಂತರದಿಂದ ಪಿಲಿಚಾಮುಂಡಿಕಲ್ಲು ಇಲ್ಲಿಗೆ ವರ್ಗಾವಣೆಯಾಗಿ ಜನರು ರೇಷನ್ ತರಲು ಬಹಳ ಕಷ್ಟ ಪಡುತ್ತಿದ್ದರು ಇದೀಗ ಕುವೆಟ್ಟು ಗ್ರಾಮ ಪಂಚಾಯತ್ ಮತ್ತು ಆಹಾರ ಇಲಾಖೆಯ ಸಹಕಾರದಲ್ಲಿ ಮತ್ತೆ ಮದ್ದಡ್ಕದಲ್ಲಿ ಜ 18 ರಂದು ಪ್ರಾರಂಭವಾಗಿದೆ.

ಕುವೆಟ್ಟು ಗ್ರಾಮ ಪಂ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ ನ್ಯಾಯಬೆಲೆ ಅಂಗಡಿ ಉದ್ಘಾಟಿಸಿದರು. ಆಹಾರ ಇಲಾಖೆಯ ನಿರೀಕ್ಷಕ ವಿಶ್ವರವರು ಉಪಸ್ಥಿತರಿದ್ದು ನಿರ್ವಾಣೆಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾ ಪಂ ಉಪಾಧ್ಯಕ್ಷ ಗಣೇಶ್ ಕುಲಾಲ್, ಮಾಜಿ ಅಧ್ಯಕ್ಷೆ ಆಶಾಲತ, ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಗೀತಾ ಸಾಲಿಯನ್, ಗ್ರಾ ಪಂ ಸದಸ್ಯರಾದ ಸಿಲ್ವೆಸ್ಟರ್ ಮೋನಿಸ್, ಸುಮಂಗಲ ಪ್ರಭು, ಶಾಲಿನಿ, ರಿಯಾಝ್, ಆಮೀನ,ಆನಂದಿ , ಮುಸ್ತಾಫ, ಮಾಜಿ ತಾ. ಪಂ ಪ್ರಭಾಕರ ಶೆಟ್ಟಿ ಉಪ್ಪಡ್ಕ, ನ್ಯಾಯ ಬೆಲೆ ಅಂಗಡಿ ನಿರ್ವಾಹಕಿ ನಿಕ್ಷೀತಾ ಮತ್ತಿತರರು ಉಪಸ್ಥಿತರಿದ್ದರು.

Related posts

ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಜೀರ್ಣೋದ್ಧಾರ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.10 ಲಕ್ಷ ದೇಣಿಗೆ

Suddi Udaya

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿ ಮಂಡಲ ಪದಪ್ರಧಾನ

Suddi Udaya

ಪಶ್ಚಿಮಘಟ್ಟಗಳ ಸಾಲಿನ ಪ್ರವಾಸಿ ತಾಣಗಳು 6 ದಿನಗಳ ಕಾಲ ನಿರ್ಬಂಧ

Suddi Udaya

ಸಾವ್ಯ: ಅಕ್ರಮ ಮರಳು ಸಾಗಟ: ವೇಣೂರು ಪೊಲೀಸರಿಂದ ದಾಳಿ

Suddi Udaya

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಜಯವಿಕ್ರಮ್ ಕಲ್ಲಾಪು

Suddi Udaya

ಎಕ್ಸೆಲ್ ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಕಾರ್ಯಾಗಾರ

Suddi Udaya
error: Content is protected !!