ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಗುರುವಾಯನಕೆರೆ ಶಕ್ತಿ ನಗರದ ಜಂಕ್ಷನ್ ನಲ್ಲಿ ನಾಮಫಲಕ ಅಳವಡಿಕೆ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಗುರುವಾಯನಕೆರೆಯ ಶಕ್ತಿ ನಗರದ ಜಂಕ್ಷನ್ ನಲ್ಲಿ ಬೇರೆ ಬೇರೆ ಊರಿಗೆ ತೆರಳುವ ಸಾರ್ವಜನಿಕರಿಗೆ ಪ್ರಾಯೋಜನವಾಗಬೇಕೆಂಬ ಉದ್ದೇಶದಿಂದ ನಾಮಫಲಕವನ್ನು ಅಳವಡಿಸಲಾಗಿದೆ.

ಈ ಫಲಕವನ್ನು ಪ್ರಾಂತ್ಯ-12ರ ಪ್ರಾಂತ್ಯಾಧ್ಯಕ್ಷರಾದ ಲ| ಹೆರಾಲ್ಡ್ ತಾವ್ರೊ ರವರು ಅನಾವರಣಗೊಳಿಸಿ ಇದೊಂದು ಮಾದರಿ ಕಾರ್ಯ. ಇಂತಹ ಸೇವಾಕಾರ್ಯ ನಿರಂತರವಾಗಿ ಮಾಡುತ್ತಿದ್ದರೆ ನಿಜವಾದ ಅರ್ಥದಲ್ಲಿ ಸೇವೆಯೊಂದಿಗೆ ಊರು ಅಭಿವೃದ್ಧಿಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ. ಉಮೇಶ್ ಶೆಟ್ಟಿ, ಕಾರ್ಯದರ್ಶಿ ಲ. ಅನಂತಕೃಷ್ಣ, ಪ್ರಾಂತೀಯ ಸಮ್ಮೇಳನದ ಅಧ್ಯಕ್ಷರಾದ ಲ| ಜೆರಾಲ್ಡ್ ಲೋಬೊ ಅಲಂಗಾರು, ಪೂರ್ವಪ್ರಾಂತ್ಯಾಧ್ಯಕ್ಷರಾದ ಲ| ಧರಣೇಂದ್ರ ಕೆ ಜೈನ್, ಪೂರ್ವಾಧ್ಯಕ್ಷರಾದ ಲ| ರವೀಂದ್ರ ಶೆಟ್ಟಿ ಬಳಂಜ ಉಪಸ್ಥಿತರಿದ್ದರು.

Leave a Comment

error: Content is protected !!