ತೆಗೆದುಕೊಂಡ ಒಡವೆಗಳನ್ನು ಯಾಕೆ ಇನ್ನು ಕೊಟ್ಟಿಲ್ಲ ಎಂದು ಪ್ರಶ್ನಿಸಿದ ಮಹಿಳೆಗೆ ಕೈಯಿಂದ ಹೊಡೆದು ಕುತ್ತಿಗೆಯನ್ನು ಹಿಚುಕಿ ಜೀವಬೆದರಿಕೆ

Suddi Udaya

ಬೆಳ್ತಂಗಡಿ: ತೆಗೆದುಕೊಂಡ ತನ್ನ ಒಡವೆಗಳನ್ನು ಯಾಕೆ ಇನ್ನು ಕೊಟ್ಟಿಲ್ಲ ಎಂದು ಕೇಳಿದ ಮಹಿಳೆಗೆ ವ್ಯಕ್ತಿಯೋರ್ವ ಕೈಯಿಂದ ಹೊಡೆದು ಕುತ್ತಿಗೆಯನ್ನು ಹಿಚುಕಿ ಉರುಡಾಟ ನಡೆಸಿ ಮಾನಕ್ಕೆ ಕುಂದುಂಟು ಮಾಡಿ ಜೀವ ಬೆದರಿಕೆ ಒಡ್ಡಿದ ಘಟನೆ ಜ.19ರಂದು ನಡೆದಿದೆ.

ಮೂಡುಬಿದಿರೆ ಮಹಾವೀರ ಕಾಲೇಜ್ ಬಳಿ,ಸುವರ್ಣ ನಗರ, ನಿವಾಸಿ  ಶ್ರೀಮತಿ ಜುಬೈದಾ ತಾಜುದ್ದೀನ್ ಶೇಕ್ ಎಂಬವರು ವೇಣೂರು ಪೊಲೀಸರಿಗೆ ನೀಡಿದ ದೂರಿನಂತೆ  ಜ.19ರಂದು ಪೆರಾಡಿ ಗ್ರಾಮದ ದುಗ್ಗನ ಬೆಟ್ಟು ಮನೆ ನಿವಾಸಿ ಸಲ್ಮಾನ್ ಫಾರೀಸ್  ಎಂಬಾತನು ಕಾಣಸಿಕ್ಕಿದಾಗ ಆತನಲ್ಲಿ ನನ್ನ ಒಡವೆಗಳನ್ನು ಯಾಕೆ ಇನ್ನು ಕೊಟ್ಟಿಲ್ಲ ಎಂದು ಹೇಳಿದಾಗ ಆತ ಏಕಾಏಕಿ ಕೋಪಗೊಂಡು ನಿನಗೆ ಚಿನ್ನ ವಾಪಾಸು ಕೊಡುವುದಿಲ್ಲ, ನೀನು ಏನು ಮಾಡುತ್ತಿಯಾ ಮಾಡಿಕೋ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕೆನ್ನೆಗೆ ಹೊಡೆದು ಕುತ್ತಿಗೆಯನ್ನು ಹಿಚುಕಿ ಉರುಡಾಟ ನಡೆಸಿ ಮಾನಕ್ಕೆ ಕುಂದುಂಟು ಮಾಡಿ ಜೀವ ಬೆದರಿಕೆ ಒಡ್ಡಿರುತ್ತಾನೆ ಎಂದು ಆರೋಪಿಸಿದ್ದಾರೆ. ವೇಣೂರು ಪೊಲೀಸ್ ಠಾಣಾ ಅ.ಕ್ರ: 08/2024 ಕಲಂ: 504 ,323, 354, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Leave a Comment

error: Content is protected !!