ಲಾಯಿಲ: ಗುರು ರಾಘವೇಂದ್ರ ಸ್ವಾಮಿಯ ಮಠದಲ್ಲಿ ಶ್ರೀರಾಮಚಂದ್ರ ಪ್ರಾಣ ಪ್ರತಿಷ್ಠೆಯ ಪ್ರಯುಕ್ತ ಸ್ವಚ್ಛತಾ ಕಾರ್ಯ

Suddi Udaya

ಲಾಯಿಲ: ಅಯೋಧ್ಯ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆಯ ಸುಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ತಮ್ಮ ಗ್ರಾಮದ ದೇವಸ್ಥಾನಗಳನ್ನು ಶುಚಿಗೊಳಿಸಬೇಕು ಎಂದು ಸೂಚಿಸಿದಂತೆ ಜ.21ರಂದು ಲಾಯಿಲದ ಗುರು ರಾಘವೇಂದ್ರ ಸ್ವಾಮಿಯ ಮಠವನ್ನು ರಾಮಭಕ್ತರು ಸೇರಿ ಶುಚಿತ್ವಗೊಳಿಸಿದರು.

ಈ ಸಂದರ್ಭ ಬಿಜೆಪಿ ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಪ್ರಸಾದ್ ಕುಮಾರ್,ಸುಗಂಧಿ ಜಗನ್ನಾಥ್, ಅರವಿಂದ್ ಲಾಯಿಲ , ಗಣೇಶ್ ಆರ್, ಗಿರೀಶ್ ಡೋಂಗ್ರೆ, ಅನಿಲ್ ಕಕ್ಕೇನ, ಮಹಾಬಲ ಶೆಟ್ಟಿ ಹಾಗೂ ಸ್ನೇಹ ಯುವಕ ಸಂಘ ಸಂಚಾಲಕರಾದ ಸುರೇಶ್ ಶೆಟ್ಟಿ ಹಾಗೂ ಸದಸ್ಯರು ಪರಿಸರದ ಮಾತೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Leave a Comment

error: Content is protected !!