ಪಾರೆಂಕಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯಕ್ರಮ

Suddi Udaya

ಪಾರೆಂಕಿ: ಮಡಂತ್ಯಾರು ಪಾರೆಂಕಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಜ.24ರಂದು ವಾರ್ಷಿಕ ಜಾತ್ರಾಮಹೋತ್ಸವ ಮತ್ತು ಚಂಡಿಕಾ ಯಾಗ ಜರಗಲಿದ್ದು, ಕ್ಷೇತ್ರದ ಸುತ್ತಮುತ್ತ ಸ್ವಚ್ಚತಾ ಕಾರ್ಯಕ್ರಮವು ಜ.21ರಂದು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ. ವಿಠಲ ಶೆಟ್ಟಿ ಮೂಡಯೂರು, ಶೌರ್ಯ ತಂಡದ ಸಂಯೋಜಕ ಸತೀಶ್ ಆಚಾರ್ಯ, ಮೇಲ್ವಿಚಾರಕ ವಸಂತ ಕುಮಾರ್, ವಿರೇಂದ್ರ ಕುಮಾರ್, ಪ್ರಶಾಂತ್ ಶೆಟ್ಟಿ, ಜಯಂತ ಶೆಟ್ಟಿ, ಅಜೆಯ್, ಭರತ್ ಶೆಟ್ಟಿ, ಯಶವಂತ ಶೆಟ್ಟಿ, ಗ್ರಾ ಪಂ ಸದಸ್ಯ ವಿಶ್ವನಾಥ ಪೂಜಾರಿ ಹಾರಬೆ. ಸೇವಾ ಪ್ರತಿನಿಧಿ ಹರಿಣಾಕ್ಷಿ, ಶೋಭ, ತಂಡದ ಸದಸ್ಯರು, ವಿದ್ಯಾಸರಸ್ವತಿ ಭಜನಾ ಮಂಡಳಿ ಸದಸ್ಯರು, ಮಹಿಳಾ ಭಜನಾ ಮಂಡಳಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Comment

error: Content is protected !!