ಉಜಿರೆ ಶ್ರೀ ವನದುರ್ಗಾ, ಶ್ರೀ ನಾಗ ರಕ್ತೇಶ್ವರಿ ಸಾನಿಧ್ಯ ಕ್ಷೇತ್ರದಲ್ಲಿ ಅಯೋಧ್ಯೆ ಸಂಭ್ರಮಾಚರಣೆ ಕ್ಷೇತ್ರದ ದೇವರಿಗೆ ವಿಶೇಷ ಪೂಜೆ, ರಾಮನಾಮ ತಾರಕ ಮಂತ್ರ ಹೋಮ, ಭಜನೆ ಸಂಕೀರ್ಣತೆ

Suddi Udaya

ಉಜಿರೆ: ಅಯೋಧ್ಯೆಯಲ್ಲಿ ಮರ್ಯಾದ ಪುರುಷೋತ್ತಮ ಪ್ರಭು ಶ್ರೀರಾಮ ಚಂದ್ರನ ಪ್ರಾಣಪ್ರತಿಷ್ಠೆ ಹಾಗೂ ಶ್ರೀರಾಮ ಮಂದಿರದ ಲೋಕಾರ್ಪಣೆ ಸುಸಂದರ್ಭದಲ್ಲಿ ಶ್ರೀ ವನದುರ್ಗಾ,ಶ್ರೀ ನಾಗ ರಕ್ತೇಶ್ವರಿ ಸಾನಿಧ್ಯ ಕ್ಷೇತ್ರದಲ್ಲಿ ಅಯೋಧ್ಯೆ ಸಂಭ್ರಮಾಚರಣೆ ನಡೆಯಿತು.

ಕ್ಷೇತ್ರದ ದೇವರಿಗೆ ವಿಶೇಷ ಪೂಜೆ, ರಾಮನಾಮ ತಾರಕ ಮಂತ್ರ ಹೋಮ, ವಿವಿಧ ದಾನದಿ ಕಾರ್ಯಕ್ರಮ, ಭಜನೆ ಸಂಕೀರ್ಣತೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಉಜಿರೆ ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆ ಇದರ ಮಾಲಕರಾದ ಮೋಹನ್ ಕುಮಾರ್ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.

ಶತಮಾನಗಳ ಕನಸು ಸಾಕಾರಗೊಂಡಿದೆ: ಮೋಹನ್ ಕುಮಾರ್
ರಾಮನೆಂದರೆ ಧರ್ಮದ ಸಾಕಾರ ಮೂರ್ತಿ, ಕಳೆದ 500 ವರ್ಷಗಳ ಇತಿಹಾಸವನ್ನು ಪುನರ್ ಸ್ಥಾಪಿಸಲು ನಮ್ಮ ಕೋಟ್ಯಾಂತರ ಪೂರ್ವಜರ ತ್ಯಾಗ, ಬಲಿದಾನ, ಪ್ರಾರ್ಥನೆಯ ಫಲವನ್ನು ನಾವು ಗೌರವಿಸುತ್ತಿದ್ದೇವೆ. ಅಯೋಧ್ಯೆಯಲ್ಲಿ ಶ್ರೀರಾಮ‌ ದೇವರ ಭವ್ಯವಾದ ಮಂದಿರ ನಿರ್ಮಾಣಗೊಂಡು ಶತಮಾನಗಳ ಕನಸು ಸಾಕಾರಗೊಂಡಿದೆ.

Leave a Comment

error: Content is protected !!