ಅಯೋಧ್ಯೆ ರಾಮ ದೇವರ ಪ್ರತಿಷ್ಠಾಪನೆಯ ಪ್ರಯುಕ್ತ ಮದ್ದಡ್ಕ ಭಜನಾ ಮಂದಿರದಲ್ಲಿ ವಿಶೇಷ ಭಜನಾ ಕಾರ್ಯಕ್ರಮ: ಕರಸೇವರಿಗೆ ಗೌರವಾರ್ಪಣೆ

Suddi Udaya

ಕುವೆಟ್ಟು: ಅಯೋಧ್ಯೆ ರಾಮ ದೇವರ ಪ್ರತಿಷ್ಠ ದಿನದಂದು ವಿಶೇಷ ಭಜನಾ ಕಾರ್ಯಕ್ರಮ ಹಾಗೂ ಅಯೋಧ್ಯೆಯಲ್ಲಿ 1992 ಮತ್ತು 2003 ಈ ಸಂದರ್ಭದಲ್ಲಿ ಕರಸೇವೆಯಲ್ಲಿ ಭಾಗಿಯಾಗಿದ್ದ ಮಚ್ಚಿನ ಗ್ರಾಮದ ಪದ್ಮಾಭ ಶೆಟ್ಟಿ ಅರ್ಕಜೆ , ಮಡಂತ್ಯಾರು ಪಾರೆಂಕಿ ಗ್ರಾಮದ  ವಿಶ್ವನಾಥ ಪೂಜಾರಿ ಹಾರಬೆ, ಗುರುವಾಯನಕೆರೆ ಸೋಮಶೇಖರ ಶೆಟ್ಟಿ ದೇವಸ್ಯೆ ರವರನ್ನು ಶ್ರೀರಾಮ ಸೇವಾ ಸಮಿತಿ ಮದ್ದಡ್ಕ, ಭಜರಂಗದಳ ಮದ್ದಡ್ಕ, ವಿಶ್ವ ಹಿಂದೂ ಪರಿಷತ್‌ ಮದ್ದಡ್ಕ ಇದರ ವತಿಯಿಂದ ಜ 22 ರಂದು ಭಜನಾ ಮಂದಿರದಲ್ಲಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ ಪ್ರಭಾಕರ ಬಂಗೇರ, ರತ್ನಾಕರ ಭಟ್ ವೇದಾಶ್ರಯ ಸರಪಾಡಿ ಮದ್ದಡ್ಕ, ಶ್ರೀರಾಮ ಸೇವಾ ಸಮಿತಿ ಗೌರವಾಧ್ಯಕ್ಷ ಶೇಖರ ಶೆಟ್ಟಿ ಉಪ್ಪಡ್ಕ, ಪಧಾನ ಕಾರ್ಯದರ್ಶಿ ಮನೋಹರ ಕೇದಳಿಕೆ, ಹಿರಿಯರಾದ ಶಾಂತರಾಮ ಶೆಟ್ಟಿ , ಗಣೇಶ್ ಶೆಟ್ಟಿ ಅರ್ಕಜೆ, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಅನೂಪ್ ಬಂಗೇರ, ವಿಶ್ವ ಹಿಂದೂ ಪರಿಷತ್ ಭಜರಂಗದಳ ಘಟಕದ ಪದಾಧಿಕಾರಿಗಳಾದ ಶಿವರಾಮ ಶೆಟ್ಟಿ ಉಪ್ಪಡ್ಕ, ಯೋಗಿಶ್ ಶೆಟ್ಟಿ ಅನಿಲ, ರುದೇಶ್ ಕುಮಾರ್, ಹರೀಶ್ ಕೋಟ್ಯಾನ್ ಮದ್ದಡ್ಕ, ಸಚಿನ್ ವರ್ಧನ್ ಮದ್ದಡ್ಕ, ವಿನೋದ್ ಶೆಣೈ ಮದ್ದಡ್ಕ, ಜಯರಾಮ ಶೆಟ್ಟಿ ಕಿನ್ನಿಗೋಳಿ, ರಂಜಿತ್ ಶೆಟ್ಟಿ ಮದ್ದಡ್ಕ, ಹರೀಶ್ ಗೌಡ ಕೊತ್ತಳಮಜಲು, ಅವಿನಾಶ್ ಸಬರಬೈಲು, ದೀಕ್ಷಿತ್ ಬಳ್ಪುಂಜ, ಗಣೇಶ್ ಶೆಟ್ಟಿ ರಾಜಶ್ರೀ ಮದ್ದಡ್ಕ, ಹರೀಶ್ ಕೇದಳಿಕೆ, ಯಶೋಧರ ಶೆಟ್ಟಿ ಅರ್ಕಜೆ, ಸುಂದರ ನಾಯ್ಕ್ ಮದ್ದಡ್ಕ, ಪ್ರೀತಮ್ ಆಚಾರಿ ಮದ್ದಡ್ಕ, ಮಂಜುನಾಥ ಮದ್ದಡ್ಕ, ಸಂತೋಷ್ ಪ್ರಭು, ಅನುರಾಗ್ ಮದ್ದಡ್ಕ ಮತ್ತಿತರರು ಉಪಸ್ಥಿತರಿದ್ದರು.

Leave a Comment

error: Content is protected !!