April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ ಪ್ರಾರಂಭ

ನೆಲ್ಯಾಡಿ : ಬೆಳ್ತಂಗಡಿ ಧರ್ಮ ಪ್ರಾಂತ್ಯದ ಏಕೈಕ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವವು ಜ.19 ಶುಕ್ರವಾರ ಸಂತ ಅಲ್ಫೋನ್ಸ ಸ್ವರೂಪ ಕ್ಕೆ ವಿಶೇಷ ದೂಪ ಪ್ರಾರ್ಥನೆ ಸಮರ್ಪಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಯಿತು. ದೇಶ ವಿದೇಶ ಗಳಿಂದ ಸಂತ ಅಲ್ಫೋನ್ಸ ರಲ್ಲಿ ವಿಶೇಷ ಕೋರಿಕೆ ಗಳನ್ನಿಟ್ಟು ಒಂಬತ್ತು ದಿನಗಳ ನೋವೇನಾದಲ್ಲಿ ಭಾಗವಹಿಸಿ ಹರಕೆ ತೀರಿಸುವುದು ಇಲ್ಲಿನ ವಾಡಿಕೆ.

ನೂರಾರು ವಿದ್ಯಾರ್ಥಿಗಳು ಉತ್ತಮ ಫಲಿತಾಂಶಕ್ಕಾಗಿ ಸಂತ ಅಲ್ಫೋನ್ಸ ರಲ್ಲಿ ಹಬ್ಬದ ಮುಖ್ಯ ದಿನವಾದಜ.27ನೇ ಶನಿವಾರ ರಾತ್ರಿ ಪ್ರಾರ್ಥನೆಯನ್ನು ಸಲ್ಲಿಸುವರು. ಶನಿವಾರ ಸಂಜೆ 4.30ಕ್ಕೆ ಹಬ್ಬದ ಮುಖ್ಯ ಬಲಿಪೂಜೆ ನಡೆಯಲಿದೆ. ಬೆಂಗಳೂರಿನ ಸುಮನಹಳ್ಳಿ ಕ್ಲಾರಿಷನ್ ಸಭೆಯ ವಂದನಿಯ ಧ್ಯಾನ ಗುರು ಫಾ. ಟೋಮ್ ಸಿ ಎಂ ಎಫ್ ಅವರು ವಿಧಾನ ಪೂರ್ವಕ ದಿವ್ಯ ಬಲಿಪೂಜೆ ಮತ್ತು ಪೂಜಾ ವಿಧಿಗಳನ್ನು ನೆರವೇರಿಸಲಿರುವರು. ವಂದನಿಯ
ಫಾ. ವರ್ಗೀಸ್ ಕೈಪನಡ್ಕ ಫಾ. ಜೈಸನ್ ಬೆಥನಿ, ಫಾ. ಜೇಮ್ಸ್ ಬೆಥನಿ ವಿದ್ಯಾಲಯ ಇದರಲ್ಲಿ ಬಾಗವಹಿಸಲಿರುವರು. ನೆಲ್ಯಾಡಿ ಪೇಟೆ ಸುತ್ತಿ ಆಕರ್ಷಕ ಹಬ್ಬದ ಮೆರವಣಿಗೆ ನಡೆಯಲಿದೆ.
ಕೊನೆಯ ದಿನವಾದ 28ನೇ ಆದಿತ್ಯವಾರ ಅತಿವಿಧಾನ ಪೂರ್ವಕ ರಾಸ ಬಲಿಪೂಜೆ ವಂದನಿಯ ಫಾ. ಕ್ರಿಸ್ಟಿ ಸುಳ್ಯ,ಫಾ. ಜೋಸೆಫ್ ಓ ಸಿ ಡಿ ಫಾ. ಬಿಬಿನ್,ಫಾ. ಶಾಜಿ ಮಾತ್ಯು ಧರ್ಮ ಗುರುಗಳು ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ನೆಲ್ಯಾಡಿ ಭಾಗವಹಿಸಲಿದ್ದಾರೆ.

ಶನಿವಾರ ರಾತ್ರಿ ಏಶಿಯನೆಟ್ ಕೋಮೆಡಿ ಎಕ್ಸ್ ಪ್ರೆಸ್ ಪ್ರಸ್ತುತ ಪಡಿಸುವ ಹಾಸ್ಯ ಸಂಗೀತ, ರಸ ಸಂಜೆ ಅನ್ನ ಸಂತರ್ಪಣೆ ನಡೆಯಲಿದೆ.

Related posts

ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಫ್ : 75 ಕೆ.ಜಿ ವಿಭಾಗದಲ್ಲಿ ಹೇಮಚಂದ್ರರಿಗೆ ಕಂಚಿನ‌ ಪದಕ

Suddi Udaya

ಬೆಳ್ತಂಗಡಿ: ಡಯಾಲಿಸಿಸ್ ಕೇಂದ್ರದ ಕೊರತೆಗಳಿಗೆ ಮುಕ್ತಿ : ಆರೋಗ್ಯ ಸಚಿವರು, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮತ್ತು ರೋಟರಿ ಸಂಸ್ಥೆಯವರಿಗೆ ಬಂಗೇರರವರಿಂದ ಅಭಿನಂದನೆ

Suddi Udaya

ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ಮಹಾ ರಥೋತ್ಸವ

Suddi Udaya

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ‘ಯಕ್ಷ ಶಿಕ್ಷಣ’ ಕಾರ್ಯಕ್ರಮ ಉದ್ಘಾಟನೆ

Suddi Udaya

ಓಡಿಲ್ನಾಳ ನಿವಾಸಿ ಲಕ್ಷ್ಮಿ ನಿಧನ

Suddi Udaya

ನಿಡ್ಲೆ: ಅಕ್ರಮ ವೈನ್ ದಾಸ್ತಾನು ಸ್ಟೋರ್ ಮೇಲೆ ಬೆಳ್ತಂಗಡಿ ಅಬಕಾರಿ ದಾಳಿ ರೂ.2 ಲಕ್ಷ ಮೌಲ್ಯದ ವೈನ್ ವಶ

Suddi Udaya
error: Content is protected !!