24 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ ಪ್ರಾರಂಭ

ನೆಲ್ಯಾಡಿ : ಬೆಳ್ತಂಗಡಿ ಧರ್ಮ ಪ್ರಾಂತ್ಯದ ಏಕೈಕ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವವು ಜ.19 ಶುಕ್ರವಾರ ಸಂತ ಅಲ್ಫೋನ್ಸ ಸ್ವರೂಪ ಕ್ಕೆ ವಿಶೇಷ ದೂಪ ಪ್ರಾರ್ಥನೆ ಸಮರ್ಪಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಯಿತು. ದೇಶ ವಿದೇಶ ಗಳಿಂದ ಸಂತ ಅಲ್ಫೋನ್ಸ ರಲ್ಲಿ ವಿಶೇಷ ಕೋರಿಕೆ ಗಳನ್ನಿಟ್ಟು ಒಂಬತ್ತು ದಿನಗಳ ನೋವೇನಾದಲ್ಲಿ ಭಾಗವಹಿಸಿ ಹರಕೆ ತೀರಿಸುವುದು ಇಲ್ಲಿನ ವಾಡಿಕೆ.

ನೂರಾರು ವಿದ್ಯಾರ್ಥಿಗಳು ಉತ್ತಮ ಫಲಿತಾಂಶಕ್ಕಾಗಿ ಸಂತ ಅಲ್ಫೋನ್ಸ ರಲ್ಲಿ ಹಬ್ಬದ ಮುಖ್ಯ ದಿನವಾದಜ.27ನೇ ಶನಿವಾರ ರಾತ್ರಿ ಪ್ರಾರ್ಥನೆಯನ್ನು ಸಲ್ಲಿಸುವರು. ಶನಿವಾರ ಸಂಜೆ 4.30ಕ್ಕೆ ಹಬ್ಬದ ಮುಖ್ಯ ಬಲಿಪೂಜೆ ನಡೆಯಲಿದೆ. ಬೆಂಗಳೂರಿನ ಸುಮನಹಳ್ಳಿ ಕ್ಲಾರಿಷನ್ ಸಭೆಯ ವಂದನಿಯ ಧ್ಯಾನ ಗುರು ಫಾ. ಟೋಮ್ ಸಿ ಎಂ ಎಫ್ ಅವರು ವಿಧಾನ ಪೂರ್ವಕ ದಿವ್ಯ ಬಲಿಪೂಜೆ ಮತ್ತು ಪೂಜಾ ವಿಧಿಗಳನ್ನು ನೆರವೇರಿಸಲಿರುವರು. ವಂದನಿಯ
ಫಾ. ವರ್ಗೀಸ್ ಕೈಪನಡ್ಕ ಫಾ. ಜೈಸನ್ ಬೆಥನಿ, ಫಾ. ಜೇಮ್ಸ್ ಬೆಥನಿ ವಿದ್ಯಾಲಯ ಇದರಲ್ಲಿ ಬಾಗವಹಿಸಲಿರುವರು. ನೆಲ್ಯಾಡಿ ಪೇಟೆ ಸುತ್ತಿ ಆಕರ್ಷಕ ಹಬ್ಬದ ಮೆರವಣಿಗೆ ನಡೆಯಲಿದೆ.
ಕೊನೆಯ ದಿನವಾದ 28ನೇ ಆದಿತ್ಯವಾರ ಅತಿವಿಧಾನ ಪೂರ್ವಕ ರಾಸ ಬಲಿಪೂಜೆ ವಂದನಿಯ ಫಾ. ಕ್ರಿಸ್ಟಿ ಸುಳ್ಯ,ಫಾ. ಜೋಸೆಫ್ ಓ ಸಿ ಡಿ ಫಾ. ಬಿಬಿನ್,ಫಾ. ಶಾಜಿ ಮಾತ್ಯು ಧರ್ಮ ಗುರುಗಳು ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ನೆಲ್ಯಾಡಿ ಭಾಗವಹಿಸಲಿದ್ದಾರೆ.

ಶನಿವಾರ ರಾತ್ರಿ ಏಶಿಯನೆಟ್ ಕೋಮೆಡಿ ಎಕ್ಸ್ ಪ್ರೆಸ್ ಪ್ರಸ್ತುತ ಪಡಿಸುವ ಹಾಸ್ಯ ಸಂಗೀತ, ರಸ ಸಂಜೆ ಅನ್ನ ಸಂತರ್ಪಣೆ ನಡೆಯಲಿದೆ.

Related posts

ನಾವೂರು : ನಾಗಜೆ ಪ್ರದೀಪ್ ರವರ ತೋಟದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆ

Suddi Udaya

ಅಶಕ್ತರ ಪಾಲಿನ ಆಶಾಕಿರಣ ದೀಪಕ್ ಜಿ. ಮಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಆಯ್ಕೆ

Suddi Udaya

ಸೆ.25 ರಿಂದ ಬೆಳ್ತಂಗಡಿ ಜೈನ್ ಮೊಬೈಲ್ ಹಾಗೂ ನ್ಯೂ ಜೈನ್ ಮೊಬೈಲ್ ನಲ್ಲಿ ಹಬ್ಬದ ಆಫರ್ : ಆಯ್ದ ಬ್ರಾಂಡೆಡ್ ಮೊಬೈಲ್ ಗಳ ಮೇಲೆ ಭರ್ಜರಿ ದರ ಕಡಿತ ಮಾರಾಟ

Suddi Udaya

ದುಬೈಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಸಚಿವ ಮಧು ಬಂಗಾರಪ್ಪರವರನ್ನು ಭೇಟಿ ಮಾಡಿದ ರಕ್ಷಿತ್ ಶಿವರಾಂ

Suddi Udaya

ಶ್ರೀರತ್ನಾತ್ರಯ ಜೈನ ಸಂಘ ದಿಂದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ರಿಗೆ ಮನವಿ: ಜೈನ ಧರ್ಮೀಯರಿಗೆ ಪ್ರತ್ಯೇಕ ನಿಗಮ ರಚನೆ ಸಚಿವರ ಭರವಸೆ

Suddi Udaya
error: Content is protected !!