April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ಹೊಸ ಡಯಾಲಿಸಿಸ್ ಯಂತ್ರಗಳ ಅಳವಡಿಕೆಯಿಂದ ಪ್ರಯೋಜನ: ಪತ್ರಿಕಾಗೋಷ್ಠಿಯಲ್ಲಿ ಪುರಂದರ ದಾಸ್ ಹೇಳಿಕೆ

ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೊಸ ಡಯಾಲಿಸಿಸ್ ಯಂತ್ರಗಳು ಅಳವಡಿಕೆಯಾದ್ದರಿಂದ ರೋಗಿಗಳಿಗೆ ಉತ್ತಮವಾಗಿ ಡಯಾಲಿಸಿಸ್ ಆಗುತ್ತಿದೆ. ಸರಿಯಿಲ್ಲದ ಡಯಾಲಿಸಿಸ್ ಯಂತ್ರಗಳಿಂದ ಸಮಸ್ಯೆಗಳ ಅಗರವಾಗಿದ್ದ ಆಸ್ಪತ್ರೆಗೆ ಹೊಸ ಯಂತ್ರಗಳನ್ನು ತರಿಸಿಕೊಂಡು ಸಹಕರಿಸಿದ ಉಸ್ತುವಾರಿ ಸಚಿವರು ಹಾಗೂ ಮಾಜಿ ಶಾಸಕ ಕೆ.ವಸಂತ ಬಂಗೇರರರವರು ಡಯಾಲಿಸಿಸ್ ಸಂತ್ರಸ್ತರಾದ ನಮ್ಮ ಪಾಲಿನ ಆಪತ್ಪಾಂಧವರು ಎಂದು ಡಯಾಲಿಸಿಸ್ ಗೆ ಪಡೆಯುತ್ತಿರುವ ಕುವೆಟ್ಟು ಗ್ರಾಮದ ಪಿಲಿಚಾಮುಂಡಿ ನಿವಾಸಿ ಪುರಂದರ ದಾಸ್ ಹೇಳಿದರು.

ಅವರು ಜ.23 ರಂದು ಬೆಳ್ತಂಗಡಿ ಪ್ರವಾಸಿ ಬಂಗಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಹಿಂದೆ ಏಜೆನ್ಸಿ ವಹಿಸಿಕೊಂಡಿದ್ದ ಕಂಪನಿಯವರು ಹಳೆಯ ಕೆಟ್ಟು ಹೋಗಿದ್ದ ಡಯಾಲಿಸಿಸ್ ಯಂತ್ರಗಳಲ್ಲಿ ಡಯಾಲಿಸಿಸ್ ಮಾಡುತ್ತಿದ್ದರು. ಮೂರು ತಿಂಗಳಿಗೊಮ್ಮೆ ಮಿಷಿನ್ ನ ಸರ್ವಿಸ್ ಮಾಡಬೇಕು. ಅವರು ಯಾವುದೇ ಸರ್ವೀಸ್ ಮಾಡದೇ ಇರುವುದರಿಂದ ನಮಗೆ ಹಲವಾರು ತೊಂದರೆಗಳಾಗಿವೆ. ಮಾಜಿ ಶಾಸಕ ವಸಂತ ಬಂಗೇರರವರ ವಿಶೇಷವಾದ ಪ್ರಯತ್ನದಿಂದ ಪ್ರಸ್ತುತ ಡಯಾಲಿಸಿಸ್ ಘಟಕದ ಹೊಸ ಏಜೆನ್ಸಿಯವರಾದ ನೆಫ್ರೋ ಕಂಪನಿಯವರು ಹೊಸದಾಗಿ ಯಂತ್ರಗಳನ್ನು ಅಳವಡಿಸಿದ್ದಾರೆ. ಅಲ್ಲದೆ ಎಲ್ಲಾ ಚುಚ್ಚುಮದ್ದುಗಳು ಮತ್ತು ಮಾತ್ರೆಗಳು ಆರೋಗ್ಯ ಕೇಂದ್ರದಲ್ಲಿಯೇ ದೊರಕುತ್ತಿರುವುದು ನಮ್ಮ ಪಾಲಿಗೆ ಪ್ರಯೋಜನವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪುರಂದರ ದಾಸ್ ಅವರ ಪತ್ನಿ ಗಾಯತ್ರಿ, ಪುಷ್ಪ ಮಾಯಿಲಪ್ಪ ಗೌಡ ಕೌಕ್ರಾಡಿ, ಕಡಬ ಉಪಸ್ಥಿತರಿದ್ದರು.

Related posts

ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳಿಗೆ ಜಯ

Suddi Udaya

ಉಜಿರೆಗೆ ಹೋಗಿ ಬರುತ್ತೇನೆ ಎಂದ ನಿಡ್ಲೆಯ ವ್ಯಕ್ತಿ ನಾಪತ್ತೆ

Suddi Udaya

ಮಾ.30 ರಂದು ವೇಣೂರು-ಪೆರ್ಮುಡ ಸೂರ್ಯ- ಚಂದ್ರ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Suddi Udaya

ಅರಸಿನಮಕ್ಕಿ: ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಸದಸ್ಯರಿಗೆ ಸಮವಸ್ತ್ರ ವಿತರಣೆ

Suddi Udaya

ಬೆಳ್ತಂಗಡಿ ಶ್ರೀ ಧ. ಆಂ.ಮಾ. ಶಾಲೆಗೆ ರಾಷ್ಟ್ರೀಯ ಸಂಸ್ಥೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ನಿರ್ದೇಶಕ ಡಾ. ಕೆ. ಶರ್ಮ ಭೇಟಿ

Suddi Udaya

ಡಿ.26-27: ಬಳಂಜ ಬದಿನಡೆ ಶ್ರೀ ನಾಗಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ

Suddi Udaya
error: Content is protected !!