24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶುಭಾರಂಭ

ಬೆಳ್ತಂಗಡಿಯಲ್ಲಿ ನೂತನ ಶಾಖೆ ‘ಕೋಟಕ್ ಲೈಫ್’ ಉದ್ಘಾಟನೆ

ಬೆಳ್ತಂಗಡಿ: ಇಲ್ಲಿಯ ಮುಖ್ಯ ರಸ್ತೆ ವೈಭವ್ ಆರ್ಕೇಡ್ ನಲ್ಲಿ ನೂತನವಾಗಿ ಪ್ರಾರಂಭಗೊಂಡ ‘ಕೋಟಕ್ ಲೈಫ್’ (kotak life) ಉದ್ಘಾಟನಾ ಕಾರ್ಯಕ್ರಮವು ಜ.25 ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ನೆರವೇರಿಸಿ ಮಾತನಾಡಿ ಪ್ರಯತ್ನ, ತಾಳ್ಮೆ, ಶ್ರಮ , ನಂಬಿಕೆ, ವಿಶ್ವಾಸ ಇದ್ದಲ್ಲಿ ವ್ಯವಹಾರ ಯಶಸ್ವಿಯಾಗುವುದು ಹಾಗೂ ಜೀವನ ಭದ್ರತೆಯಲ್ಲಿ ಕೋಟಕ್ ಲೈಫ್ 2ನೇ ಸ್ಥಾನದಲ್ಲಿ ಇದೆ ಎಂದು ತಿಳಿಸಿ ಶುಭಹಾರೈಸಿದರು.

ಬೆಳ್ತಂಗಡಿ ಕೋಟಕ್ ಲೈಫ್ ಪ್ರೋವಿಜಿನಲ್ ಚೀಫ್ ಏಜೆನ್ಸಿ ಪಾಟ್ನರ್ ದಿನಕರ್ ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಂಗಳೂರು ಕೋಟಕ್ ಲೈಫ್ ರೀಜಿನಲ್ ಹೆಡ್ ಅಬ್ದುಲ್ ಗಫೂರ್, ಮಂಗಳೂರು ಕೋಟಕ್ ಲೈಫ್ ಏರಿಯಾ ಹೆಡ್ ಮೈಕಲ್ ಡಿ ಸೋಜ, ಬೆಳ್ತಂಗಡಿ ವೈಭವ್ ಆರ್ಕೇಡ್ ನ ಮಾಲಕ ಸೀತಾರಾಮ ಶೆಟ್ಟಿ, ಕೊಕ್ಕಡ ಉದ್ಯಮಿ ರಾಮಣ್ಣ ಗೌಡ ಕೆಚೋಡಿ, ಮಂಗಳೂರು ಕೋಟಕ್ ಲೈಫ್ ಚೀಫ್ ಏಜೆನ್ಸಿ ಪಾಟ್ನರ್ ಡೋಲ್ಫಿ ಮೊಂತೆರೊ, ಏರಿಯಾ ಮಾನ್ಯೇಜರ್ ಅಂಜನೇಯ, ಶಾಖಾ ಮಾನ್ಯೇಜರ್ ಗಳಾದ ನಿಸಾರ್ ಅಹಮ್ಮದ್ , ಪ್ರಜ್ವಲ್, ಪ್ರಿಮಿಯಂ ಏಜೆನ್ಸಿ ಮಾನೇಜರ್ ಕೃಪಾ ಉಪಸ್ಥಿತರಿದ್ದರು.


ಮಂಗಳೂರು ಕೋಟಕ್ ಲೈಫ್ ಎಕ್ಸಿಕ್ಯೂಟಿವ್ ಚೀಫ್ ಏಜೆನ್ಸಿ ಪಾಟ್ನರ್ ಸತ್ಯರಂಜನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ಕೊಕ್ಕಡ ಆಳಂಬಿಲ ಸ್ವಾಗತಿಸಿ, ಗಿರೀಶ್ ಧನ್ಯವಾದವಿತ್ತರು.

Related posts

ಜಯರಾಮ್ ಮೊಂಟೆತಡ್ಕರವರಿಂದ ಶಿಬಾಜೆ ಶಾಲೆಗೆ ಪ್ರಿಂಟರ್ ಕೊಡುಗೆ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಂಪೂರ್ಣ ಸುರಕ್ಷಾ ಮೊತ್ತ ವಿತರಣೆ

Suddi Udaya

ರೆಖ್ಯ: ಬೋರ್‌ವೆಲ್ ವಿಷಯದಲ್ಲಿ ಮಾತುಕತೆ ,: ಹಲ್ಲೆ ಆರೋಪ ಪೊಲೀಸ್ ಠಾಣೆಗೆ ದೂರು

Suddi Udaya

ಕುವೆಟ್ಟು: ಚಲಿಸುತ್ತಿದ್ದ ಲಾರಿ ಮೇಲೆ ಬಿದ್ದ ವಿದ್ಯುತ್ ಕಂಬ: ಲಾರಿ ಚಾಲಕ ಹಾಗೂ ಎರಡು ಬೈಕ್ ಸವಾರರು ಪ್ರಾಣಾಪಾಯದಿಂದ ಪಾರು

Suddi Udaya

ರಾಜ್ಯ ಮಟ್ಟದ ಮುಕ್ತ ಕರಾಟೆ ಪಂದ್ಯಾಟ: ಉಜಿರೆಯ ಮೋಹನ್ ರವರಿಗೆ ಕುಮಿತೆಯಲ್ಲಿ ಚಿನ್ನದ ಪದಕ

Suddi Udaya

ಪುಂಜಾಲಕಟ್ಟೆ ಕೆ ಪಿ ಎಸ್ ಪದವಿ ಪೂರ್ವ ವಿಭಾಗದ ಕಂಪ್ಯೂಟರ್ ವಿಭಾಗದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Suddi Udaya
error: Content is protected !!