July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶುಭಾರಂಭ

ಬೆಳ್ತಂಗಡಿಯಲ್ಲಿ ನೂತನ ಶಾಖೆ ‘ಕೋಟಕ್ ಲೈಫ್’ ಉದ್ಘಾಟನೆ

ಬೆಳ್ತಂಗಡಿ: ಇಲ್ಲಿಯ ಮುಖ್ಯ ರಸ್ತೆ ವೈಭವ್ ಆರ್ಕೇಡ್ ನಲ್ಲಿ ನೂತನವಾಗಿ ಪ್ರಾರಂಭಗೊಂಡ ‘ಕೋಟಕ್ ಲೈಫ್’ (kotak life) ಉದ್ಘಾಟನಾ ಕಾರ್ಯಕ್ರಮವು ಜ.25 ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ನೆರವೇರಿಸಿ ಮಾತನಾಡಿ ಪ್ರಯತ್ನ, ತಾಳ್ಮೆ, ಶ್ರಮ , ನಂಬಿಕೆ, ವಿಶ್ವಾಸ ಇದ್ದಲ್ಲಿ ವ್ಯವಹಾರ ಯಶಸ್ವಿಯಾಗುವುದು ಹಾಗೂ ಜೀವನ ಭದ್ರತೆಯಲ್ಲಿ ಕೋಟಕ್ ಲೈಫ್ 2ನೇ ಸ್ಥಾನದಲ್ಲಿ ಇದೆ ಎಂದು ತಿಳಿಸಿ ಶುಭಹಾರೈಸಿದರು.

ಬೆಳ್ತಂಗಡಿ ಕೋಟಕ್ ಲೈಫ್ ಪ್ರೋವಿಜಿನಲ್ ಚೀಫ್ ಏಜೆನ್ಸಿ ಪಾಟ್ನರ್ ದಿನಕರ್ ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಂಗಳೂರು ಕೋಟಕ್ ಲೈಫ್ ರೀಜಿನಲ್ ಹೆಡ್ ಅಬ್ದುಲ್ ಗಫೂರ್, ಮಂಗಳೂರು ಕೋಟಕ್ ಲೈಫ್ ಏರಿಯಾ ಹೆಡ್ ಮೈಕಲ್ ಡಿ ಸೋಜ, ಬೆಳ್ತಂಗಡಿ ವೈಭವ್ ಆರ್ಕೇಡ್ ನ ಮಾಲಕ ಸೀತಾರಾಮ ಶೆಟ್ಟಿ, ಕೊಕ್ಕಡ ಉದ್ಯಮಿ ರಾಮಣ್ಣ ಗೌಡ ಕೆಚೋಡಿ, ಮಂಗಳೂರು ಕೋಟಕ್ ಲೈಫ್ ಚೀಫ್ ಏಜೆನ್ಸಿ ಪಾಟ್ನರ್ ಡೋಲ್ಫಿ ಮೊಂತೆರೊ, ಏರಿಯಾ ಮಾನ್ಯೇಜರ್ ಅಂಜನೇಯ, ಶಾಖಾ ಮಾನ್ಯೇಜರ್ ಗಳಾದ ನಿಸಾರ್ ಅಹಮ್ಮದ್ , ಪ್ರಜ್ವಲ್, ಪ್ರಿಮಿಯಂ ಏಜೆನ್ಸಿ ಮಾನೇಜರ್ ಕೃಪಾ ಉಪಸ್ಥಿತರಿದ್ದರು.


ಮಂಗಳೂರು ಕೋಟಕ್ ಲೈಫ್ ಎಕ್ಸಿಕ್ಯೂಟಿವ್ ಚೀಫ್ ಏಜೆನ್ಸಿ ಪಾಟ್ನರ್ ಸತ್ಯರಂಜನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ಕೊಕ್ಕಡ ಆಳಂಬಿಲ ಸ್ವಾಗತಿಸಿ, ಗಿರೀಶ್ ಧನ್ಯವಾದವಿತ್ತರು.

Related posts

ನೇಣುಬಿಗಿದು ಯುವಕ ಆತ್ಮಹತ್ಯೆಗೆ ಶರಣು: ವಿಷಯ ತಿಳಿದು ತಂದೆ ಕೂಡ ಆತ್ಮಹತ್ಯೆ ಪ್ರಯತ್ನ

Suddi Udaya

ಪಡಂಗಡಿ: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಪರ ಮತಯಾಚನೆ

Suddi Udaya

ಉಜಿರೆ ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘ ಅಧ್ಯಕ್ಷರಾಗಿ ಶ್ರೀಧರ ಜಿ. ಭಿಡೆ , ಉಪಾಧ್ಯಕ್ಷರಾಗಿ ಅನಂತ ಭಟ್ ಮಚ್ಚಿಮಲೆ ಅವಿರೋಧ ಆಯ್ಕೆ

Suddi Udaya

ಪುದುವೆಟ್ಟು : ನೂತನ ಬಸದಿಯ ಪಂಚಕಲ್ಯಾಣ ಮತ್ತು ನೂತನ ಬಿಂಬದ ಪ್ರತಿಷ್ಠಾ ಮಹೋತ್ಸವ

Suddi Udaya

ಲಾಯಿಲ: ಕಿಂಡಿ ಅಣೆಕಟ್ಟುವಿನಲ್ಲಿ ಅಡ್ಡಲಾಗಿ ಬಿದ್ದಿದ್ದ ಮರದ ದಿಮ್ಮಿಗಳ ತೆರವು ಕಾರ್ಯ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಚಿಂತನಾ ದಿನಾಚರಣೆ

Suddi Udaya
error: Content is protected !!