ಆಟೋ ರಿಕ್ಷಾದಲ್ಲಿ ಬಾಡಿಗೆಗೆ ಬಂದ ಚಿಕ್ಕಮಗಳೂರು ನಿವಾಸಿಯ ಮೇಲೆ ಹಲ್ಲೆ , ದರೋಡೆ : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ : ಚಿಕ್ಕಮಗಳೂರು ನಿವಾಸಿ ಈಶ್ವರ ರವರು ಬೆಳ್ತಂಗಡಿಯ ಗುತ್ಯಡ್ಕ ಎಂಬಲ್ಲಿಗೆ ಆಟೋ ರಿಕ್ಷಾದಲ್ಲಿ ಬಾಡಿಗೆಗೆ ಬಂದು ಕೆಲಸ ಮುಗಿಸಿ, ರಿಕ್ಷಾದಲ್ಲಿ ಹೋಗುತ್ತಿರುವಾಗ ಉಕ್ಕುಡ ಎಂಬಲ್ಲಿ ಪ್ರವೀಣ್‌ ಗೌಡ ಹಾಗೂ ಇತರ ಇಬ್ಬರೂ ಆಟೋವನ್ನು ಅಡ್ಡಗಟ್ಟಿ ಈಶ್ವರರವರಿಗೆ ಮಾರಕಾಯುಧ ತೋರಿಸಿ, ಕೈಯಿಂದ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ರೂ 1450/- ನ್ನು ದರೋಡೆ ಮಾಡಿರುವುದಾಗಿ ನೀಡಿದ ದೂರಿನಂತೆ ಜ.23 ರಂದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಸೆ ಗ್ರಾಮ ಅಂಚೆ ಕಳಸ ತಾಲೂಕು ಚಿಕ್ಕಮಗಳೂರು ನಿವಾಸಿ ಈಶ್ವರ (52) ಎಂಬವರ ದೂರಿನಂತೆ, ಜ.23 ರಂದು ರಾತ್ರಿ ಬೆಳ್ತಂಗಡಿ ತಾಲೂಕು ಗುತ್ಯಡ್ಕ ಎಂಬಲ್ಲಿಗೆ ಆಟೋ ರೀಕ್ಷಾದಲ್ಲಿ ಬಾಡಿಗೆಗೆ ಬಂದು ಕೆಲಸ ಮುಗಿಸಿ, ತನ್ನ ಬಾಬ್ತು ರೀಕ್ಷಾದಲ್ಲಿ ಹೋಗುತ್ತಿರುವಾಗ ಉಕ್ಕುಡ ಎಂಬಲ್ಲಿ ಪ್ರವೀಣ್‌ ಗೌಡ ಹಾಗೂ ಇತರ ಇಬ್ಬರೂ ಆಟೋವನ್ನು ಅಡ್ಡಗಟ್ಟಿ ಮಾರಕಾಯುಧ ತೋರಿಸಿ, ಕೈಯಿಂದ ಹಲ್ಲೆ ನಡೆಸಿದ್ದು, ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ರೂ 1450/- ನ್ನು ದರೋಡೆ ಮಾಡಿರುತ್ತಾರೆ ಹಾಗೂ ಪಿರ್ಯಾದಿರವರ ಬಳಿಯಿದ್ದ ಅಡುಗೆ ಸಾಮಾನುಗಳನ್ನು ಕದ್ದುಕೊಂಡು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣಾ ಅಕ್ರ ನಂ 08/2024 ಕಲಂ: 341,323,504,392, 379,, ಐಪಿಸಿ ಕಲಂ: 3(1)(S) ,3(2)(va) SC/ST ACT 2015 ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Comment

error: Content is protected !!