23.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಕುಂಟಿನಿ ಮದ್ರಸದಲ್ಲಿ ಗಣರಾಜ್ಯೋತ್ಸವ ಆಚರಣೆ

ಉಜಿರೆ: ಅಲ್ ಬುಖಾರಿ ಮಸ್ಜಿದ್ ಆಡಳಿತ ಸಮಿತಿ ಹಾಗೂ ಮುಹಿಯುದ್ದೀನ್ ಅರಬಿಕ್ ಮದ್ರಸ ಕುಂಟಿನಿ ಇದರ ಸಹಭಾಗಿತ್ವದಲ್ಲಿ ಇಂದು ಮದ್ರಸ ಮೈದಾನದಲ್ಲಿ 75 ವರ್ಷದ ಗಣರಾಜ್ಯೋತ್ಸವ ನಡೆಸಲಾಯಿತು.

ಇಬ್ರಾಹಿಂ ಉಸ್ತಾದ್ ದುವಾ ನೇತ್ರತ್ವ ನೀಡಿದರು. ಉದ್ಘಾಟನೆಯನ್ನು ಸ್ಥಳೀಯ ಖತೀಬ್ ಇಸ್ಮಾಯಿಲ್ ಹನೀಫಿ ಉಸ್ತಾದ್ ನಡೆಸಿ ಸಂವಿಧಾನದ ಮಹತ್ವ ಹಾಗೂ ಗೌರವವನ್ನು ವಿವರಿಸಿದರು.

ಆಡಳಿತ ಸಮೀತಿಯ ರಹೀಂ ಪೈಂಟರ್,ಝಕರಿಯ್ಯಾ ಎಸ್.ಎಲ್.ಬಿ, ಯೂಸುಫ್ ಹಲೇಜಿಜಿ., ಅಬೂಬಕ್ಕರ್ ಪಂಡಿತ್, ಅಶ್ರಫ್ ಮೇಸ್ತ್ರಿ, ಮುಹಮ್ಮದ್ ದಿಡುಪೆ, ನವಾಝ್ ಬರ್ನ, ಹಾರೀಸ್ ಕೃಷ್ಣಾಪುರ ಉಪಸ್ಥಿತಿ ಇದ್ದರು.

ಧ್ವಜಾರೋಹಣ ನೇರವೇರಿಸಿ ಸಿಹಿ ತಿಂಡಿ ವಿತರಿಸಲಾಯಿತು. ಮುಖ್ಯೋಪಾಧ್ಯಾಯರಾದ ಉಮರುಲ್ ಫಾರೂಖ್ ಸಅದಿ ಪದ್ಮುಂಜ ಸ್ವಾಗತಿಸಿದರು.

Related posts

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕಳೆದ 39 ವರ್ಷಗಳ ಕಾಲ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆ ಗಳಿಸಿದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು. ಶೇಖ್ ಲತೀಫ್ ಅವರಿಗೆ ಗೌರವ ಸನ್ಮಾನ

Suddi Udaya

ಬೆಳ್ತಂಗಡಿ: ಸಹಾಯಕ ಪ್ರಾಧ್ಯಾಪಕಿ ಸೌಮ್ಯಲತಾ ರವರಿಗೆ ಪಿಹೆಚ್ ಡಿ ಪದವಿ

Suddi Udaya

ಕ್ಷುಲ್ಲಕ ಕಾರಣಕ್ಕೆ ಗಲಾಟೆ: ನಾಲ್ವರ‌ ಮೇಲೆ ಪ್ರಕರಣ ದಾಖಲು

Suddi Udaya

ಸೌತಡ್ಕದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮೂಡಪ್ಪ ಸೇವೆ ನಡೆಯುತ್ತಿದ್ದ ಸಂದರ್ಭದಲ್ಲಿ ನಾಗರ ಹಾವು ಪ್ರತ್ಯಕ್ಷ

Suddi Udaya

ಪುಂಜಾಲಕಟ್ಟೆ-ಚಾರ್ಮಾಡಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಸುವ ನೌಕರರಿಗೆ 3 ತಿಂಗಳ ಸಂಬಳ ನೀಡದೆ ಸತಾಯಿಸುತ್ತಿರುವ ಡಿಪಿ ಕಂಪನಿ: ಕಾರ್ಮಿಕರ ಆಕ್ರೋಶ, ಪ್ರತಿಭಟನೆ

Suddi Udaya

ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಹೃದಯಾಘಾತ: ನ್ಯಾಯತರ್ಪು ಕೊಡಿಯಡ್ಕ ತಿಮ್ಮಪ್ಪ ಗೌಡ ನಿಧನ

Suddi Udaya
error: Content is protected !!