July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ಶ್ರೀ ಗುರುದೇವ ಪಿಯು ಕಾಲೇಜಿನಲ್ಲಿ ಪಾಳೇಗಾರಿಕೆ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಮುಂದಿರುವ ಸವಾಲುಗಳು ವಿಚಾರ ಸಂಕಿರಣ

ಬೆಳ್ತಂಗಡಿ: ಡಿವೈಎಫ್ಐ ರಾಜ್ಯ ಸಮ್ಮೇಳನದ ಅಂಗವಾಗಿ ಹಾಗೂ ಗಣರಾಜ್ಯೋತ್ಸವ ಪ್ರಯುಕ್ತ ಡಿವೈಎಫ್ಐ ಬೆಳ್ತಂಗಡಿ ತಾಲೂಕು ಸಮಿತಿ ಹಾಗೂ ಶ್ರೀ ಗುರುದೇವ ಪಿಯು ಕಾಲೇಜು ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ಶ್ರೀಗುರುದೇವ ಪಿಯು ಕಾಲೇಜಿನಲ್ಲಿ ಪಾಳೆಗಾರಿಕೆ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಮುಂದಿರುವ ಸವಾಲುಗಳು ಎಂಬ ಕುರಿತು ವಿಚಾರ ಸಂಕಿರಣ ನಡೆಯಿತು.


ಸಭೆಯ ಅದ್ಯಕ್ಷತೆ ಹಿರಿಯ ವಕೀಲರು, ಕಾರ್ಮಿಕ ನಾಯಕರು ಬಿ.ಎಂ.ಭಟ್ ವಹಿಸಿದ್ದರು. ಉದ್ಘಾಟನೆಯನ್ನು ಬೆಳ್ತಂಗಡಿಯ ಮಾಜಿ ಶಾಸಕ ಕೆ .ವಸಂತ ಬಂಗೇರ ಅವರ ಅನುಪಸ್ಥಿತಿಯಲ್ಲಿ ಕಾಲೇಜು ಪ್ರಾಂಶುಪಾಲರು ಸುಕೇಶ್ ಕುಮಾರ್ ಅವರು ನೆರವೇರಿಸಿದರು. ವಿಚಾರ ಮಂಡನೆಯನ್ನು ಹಿರಿಯ ವಕೀಲರು, ಚಿಂತಕರೂ ಆದ ಸುದೀರ್ ಕುಮಾರ್ ಕೊಪ್ಪ, ಮತ್ತು ಸಮಾಜ ಚಿಂತಕರು ಡಿ.ವೈ.ಎಫ್.ಐ. ರಾಜ್ಯ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ನೆರವೇರಿಸಿದರು., ಪತ್ರಕರ್ತ ವಿಠಲ ಮಲೆಕುಡಿಯ, ಮತ್ತು ಎಸ್.ಎಫ್.ಐ ಬೆಳ್ತಂಗಡಿ ತಾಲೂಕು ಅಧ್ಯಕ್ಷ ವಿನುಶ ರಮಣ ಪ್ರತಿಕ್ರಿಯೆ ಮಿಡಿದರು.

ಮನೊಹರ ಕುಮಾರ್ ಇಳಂತಿಲ ವಕೀಲರು, ಸ್ವಾಗತಿಸಿದರು. ಉಪ ಪ್ರಾಂಶುಪಾಲ ಧನ್ಯವಾದವಿತ್ತರು. ಸಭೆಯ ಬಳಿಕ ಪ್ರಶ್ನೋತ್ತರ ನಡೆಯಿತು. ಸಭೆಯ ಪ್ರಾರಂಭದಲ್ಲಿ ಈಶ್ವರಿ, ಜಯಶ್ರಿ, ಅಭಿಶೇಕ್, ಶ್ಯಾಮರಾಜ್ ತಂಡ ಸಂವಿಧಾನ ಸದಾಶಯ ಹಾಡು ಹಾಡಿದರು.

Related posts

ಎಸ್‌ಐಆ‌ರ್ ವೇಳಾಪಟ್ಟಿ ಪರಿಷ್ಕರಣೆ: ಆ.8ರ ತನಕ ವಿಸ್ತರಣೆ

Suddi Udaya

ಶಿಶಿಲ : 9 ವರ್ಷದ ಬಾಲಕ ಅಶ್ವಿನ್ ನಿಧನ

Suddi Udaya

ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಅಂಬುಲೆನ್ಸ್ ಚಾಲಕ ಅಬ್ದುಲ್ ರಝಾಕ್ ರವರಿಗೆ ವಿದಾಯ ಕೂಟ

Suddi Udaya

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್: ಆರೋಪಿ ಕಿಲ್ಲೂರು ನಿವಾಸಿ ಮೊಹಮ್ಮದ್ ಕೈಫ್ ತಮಿಳುನಾಡಿನಲ್ಲಿ ಬಂಧನ

Suddi Udaya

ಮುಂಡಾಜೆ ಜಮಲುಲ್ಲೈಲಿ ಸುನ್ನಿ ಮಸ್ಜಿದ್ ಮೇಲಂತಸ್ತಿನ ಕಾಮಗಾರಿಗೆ ಚಾಲನೆ

Suddi Udaya

ಬದನಾಜೆ ಹೈಸ್ಕೂಲ್ ನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya
error: Content is protected !!