ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ,ಸ್ವಾಮಿ ಕೊರಗಜ್ಜ ಸನ್ನಿಧಿ ಶ್ರಿ ಕ್ಷೇತ್ರ ಎರ್ನೋಡಿ:ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉಜಿರೆ: ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ,ಸ್ವಾಮಿ ಕೊರಗಜ್ಜ ಸನ್ನಿಧಿ ಶ್ರಿ ಕ್ಷೇತ್ರ ಎರ್ನೋಡಿ ಇದರ ವಾರ್ಷಿಕ ಲೆಕ್ಕ ಪತ್ರ ಮಂಡನೆ ಹಾಗೂ 2024ನೇ ವರ್ಷದ ಜಾತ್ರೋತ್ಸವ ಬಗ್ಗೆ ಸಮಾಲೋಚನೆ ಸಭೆ ಹಾಗೂ 2024ನೇ ವರ್ಷದ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜ. 28 ಭಾನುವಾರ ಬೆಳಿಗ್ಗೆ 11 ಗಂಟೆಗೆ ಕ್ಷೇತ್ರದ ಸಭಾಭವನದಲ್ಲಿ ನಡೆಯಿತು. ಆಮಂತ್ರಣ ಬಿಡಗಡೆಯನ್ನು ಟ್ರಸ್ಟಿಯಾದ ಮೋಹನ್ ಶೆಟ್ಟಿಗಾರ್ ಉಜಿರೆ ಇವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಬಾಬು ಮೊಗೇರ ಎರ್ನೋಡಿ, ಜಯಂತ ಶೆಟ್ಟಿ ಕುಂಟಿನಿ, ಸಂಜೀವ ಶೆಟ್ಟಿ ಕುಂಟಿನಿ , ಬಿ.ಕೆ ಗೋವಿಂದ ಮುಂಡಾಜೆ, ಆನಂದ ಎರ್ನೋಡಿ, ನೋಣಯ್ಯ ಪುಂಜಾಲಕಟ್ಟೆ ಹಾಗೂ ಸಲಹೆಗಾರರಾದ ವೆಂಕಪ್ಪ ಕನ್ಯಾಡಿ, ಆನಂದ ಚಾರ್ಮಾಡಿ, ತನಿಯಪ್ಪ ಅಶ್ವತ್ಥ ಕಟ್ಟೆ. ಪ್ರದೀಪ್ ಎರ್ನೋಡಿ, ದಿಲೀಪ್ ಎರ್ನೋಡಿ, ಸುಜನ್ ಪಜಿರಡ್ಕ ಮತ್ತಿತರರು ಉಪ್ಥಿತರಿದ್ದರು.

Leave a Comment

error: Content is protected !!