July 23, 2026
Uncategorized

ಮಡಂತ್ಯಾರು: ಬಂಗೇರಕಟ್ಟೆ ಅಕ್ಷರ ಕರಾವಳಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಬಾಲಮೇಳ ಕಾರ್ಯಕ್ರಮ

ಮಡಂತ್ಯಾರು: ಬಂಗೇರಕಟ್ಟೆ ಅಕ್ಷರ ಕರಾವಳಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಬಾಲಮೇಳ ಕಾರ್ಯಕ್ರಮ ಜ.30 ರಂದು ಆಚರಿಸಲಾಯಿತು.

ಮಡಂತ್ಯಾರು ಗ್ರಾ ಪಂ ಅಧ್ಯಕ್ಷೆ ರೂಪ ಎ ಎಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ‌ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪಡೆದ ಹರೇಕಳ ಹಾಜಬ್ಬ ಅಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅತಿಥಿಗಳಾಗಿ ಉಪಾಧ್ಯಕ್ಷ ಗೋಪಾಲಕೃಷ್ಣ, ಸದಸ್ಯರಾದ ವಿಶ್ವನಾಥ ಪೂಜಾರಿ, ಕಿಶೋರ್ ಕುಮಾರ್, ಪ್ರಗತಿಪರ‌ ಕೃಷಿಕ ಪ್ರಭಾಕರ್, ಬಂಗೇಕಟ್ಟೆ ಮಸೀದಿಯ ಮುಖ್ಯಸ್ಥರಾದ ಯಂ ಆರ್ ಹೈದರ್, ಜೇಸಿಐ ಮಡಂತ್ಯಾರು ಇದರ ಉಪಾಧ್ಯಕ್ಷೆ ಅಮಿತಾ ಬಂಡಾರಿ, ಗ್ರಾಮ ಪಂ ಸಿಬಂದಿ ಪ್ರಮೀಳಾ, ಸಮುದಾಯ ಆರೋಗ್ಯ ಕಾರ್ಯಕರ್ತೆ ಜೆಸ್ಸಿ ಫೆರ್ನಾಂಡಿಸ್, ಆಶಾ ಕಾರ್ಯಕರ್ತೆ ಜಾನಕಿ, ಹೇಮಾವತಿ, ಸುನಂದ ಉಪಸ್ಥಿತರಿದ್ದರು.

ಹನೀಫ್ ಸಾಲುಮರ, ಜಯಂತಿ ಹಾರಬೆ, ಹಕೀಂ ಬಂಗೇರಕಟ್ಟೆ, ಬಿಗ್ ಬ್ರದರ್ಸ ಸಾಲುಮರ ದಾನಿಗಳಾಗಿ ಸಹಕಾರ ನೀಡಿದರು. ಹೇಮಾವತಿ ಶೆಟ್ಟಿ, ಶ್ಯಾಮಲ ಹೆಗ್ಡೆ, ಸ್ತ್ರೀಶಕ್ತಿ ಸದಸ್ಯರು,ಮಕ್ಕಳ ಹೆತ್ತವರು ಅಂಗನವಾಡಿ ಸಹಾಯಕಿ ಊರಿನ ಯುವಕರು ಕಾರ್ಯಕ್ರಮದ ಯಶಶ್ವಿಗೆ ಸಹಕರಿಸಿದರು. ಇರ್ಪಾನ್ ಸಾಲುಮರ ಕಾರ್ಯಕ್ರಮ ನಿರೂಪಿಸಿದರು. ಸಮೀಮಾ ಸ್ವಾಗತಿಸಿ, ಸಂದ್ಯಾ ಧನ್ಯವಾದವಿತ್ತರು.

Related posts

ಹಿರಿಯ ಪುರುಷ ಮತ್ತು ಮಹಿಳಾ ಥ್ರೋಬಾಲ್ ರಾಷ್ಟ್ರೀಯ ಚಾಂಪಿಯನ್ ಶಿಪ್ ಗೆ ಕರ್ನಾಟಕವನ್ನು ಪ್ರತಿನಿಧಿಸಲು ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜಿನ ಬಿ.ಸಿ.ಎ ವಿದ್ಯಾರ್ಥಿ ಯುನಿತ್ ಕೆ. ಆಯ್ಕೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ ಓವರಾಲ್ ಚಾಂಪಿಯನ್ ಶಿಪ್

Suddi Udaya

ಇಂದಬೆಟ್ಟು: ಸ. ಹಿ. ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಅಳಕ್ಕೆ ಬ್ರೈಟ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ ರಕ್ಷಿತ್ ಶಿವರಾಮ್

Suddi Udaya

ಬರೆಂಗಾಯ ಭೂತಳಗುಡ್ಡೆ ನಿವಾಸಿ ರವೀಂದ್ರ ರಾವ್ ನಿಧನ

Suddi Udaya

ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಪ್ರಕ್ರಿಯೆಲ್ಲಿ ಲೋಪತಹಶೀಲ್ದಾರ್-ತಾ.ಪಂ ಇ.ಒಗೆ ದೂರು

Suddi Udaya
error: Content is protected !!