September 6, 2026
Uncategorized

ಮಡಂತ್ಯಾರು: ಬಂಗೇರಕಟ್ಟೆ ಅಕ್ಷರ ಕರಾವಳಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಬಾಲಮೇಳ ಕಾರ್ಯಕ್ರಮ

ಮಡಂತ್ಯಾರು: ಬಂಗೇರಕಟ್ಟೆ ಅಕ್ಷರ ಕರಾವಳಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಬಾಲಮೇಳ ಕಾರ್ಯಕ್ರಮ ಜ.30 ರಂದು ಆಚರಿಸಲಾಯಿತು.

ಮಡಂತ್ಯಾರು ಗ್ರಾ ಪಂ ಅಧ್ಯಕ್ಷೆ ರೂಪ ಎ ಎಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ‌ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪಡೆದ ಹರೇಕಳ ಹಾಜಬ್ಬ ಅಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅತಿಥಿಗಳಾಗಿ ಉಪಾಧ್ಯಕ್ಷ ಗೋಪಾಲಕೃಷ್ಣ, ಸದಸ್ಯರಾದ ವಿಶ್ವನಾಥ ಪೂಜಾರಿ, ಕಿಶೋರ್ ಕುಮಾರ್, ಪ್ರಗತಿಪರ‌ ಕೃಷಿಕ ಪ್ರಭಾಕರ್, ಬಂಗೇಕಟ್ಟೆ ಮಸೀದಿಯ ಮುಖ್ಯಸ್ಥರಾದ ಯಂ ಆರ್ ಹೈದರ್, ಜೇಸಿಐ ಮಡಂತ್ಯಾರು ಇದರ ಉಪಾಧ್ಯಕ್ಷೆ ಅಮಿತಾ ಬಂಡಾರಿ, ಗ್ರಾಮ ಪಂ ಸಿಬಂದಿ ಪ್ರಮೀಳಾ, ಸಮುದಾಯ ಆರೋಗ್ಯ ಕಾರ್ಯಕರ್ತೆ ಜೆಸ್ಸಿ ಫೆರ್ನಾಂಡಿಸ್, ಆಶಾ ಕಾರ್ಯಕರ್ತೆ ಜಾನಕಿ, ಹೇಮಾವತಿ, ಸುನಂದ ಉಪಸ್ಥಿತರಿದ್ದರು.

ಹನೀಫ್ ಸಾಲುಮರ, ಜಯಂತಿ ಹಾರಬೆ, ಹಕೀಂ ಬಂಗೇರಕಟ್ಟೆ, ಬಿಗ್ ಬ್ರದರ್ಸ ಸಾಲುಮರ ದಾನಿಗಳಾಗಿ ಸಹಕಾರ ನೀಡಿದರು. ಹೇಮಾವತಿ ಶೆಟ್ಟಿ, ಶ್ಯಾಮಲ ಹೆಗ್ಡೆ, ಸ್ತ್ರೀಶಕ್ತಿ ಸದಸ್ಯರು,ಮಕ್ಕಳ ಹೆತ್ತವರು ಅಂಗನವಾಡಿ ಸಹಾಯಕಿ ಊರಿನ ಯುವಕರು ಕಾರ್ಯಕ್ರಮದ ಯಶಶ್ವಿಗೆ ಸಹಕರಿಸಿದರು. ಇರ್ಪಾನ್ ಸಾಲುಮರ ಕಾರ್ಯಕ್ರಮ ನಿರೂಪಿಸಿದರು. ಸಮೀಮಾ ಸ್ವಾಗತಿಸಿ, ಸಂದ್ಯಾ ಧನ್ಯವಾದವಿತ್ತರು.

Related posts

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕರ ಸಂಘದ ಆಪತ್ಕಾಲದ 29ನೇ ಕ್ಷೇಮ ನಿಧಿ ಯೋಜನೆಯ ಸಹಾಯಧನ ವಿತರಣೆ

Suddi Udaya

ಕುಕ್ಕೇಡಿ: ಸುಡುಮದ್ದು ತಯಾರಿಕ ಘಟಕದಲ್ಲಿ ಸ್ಟೋಟ ಪ್ರಕರಣ: ಘಟನಾ ಸ್ಥಳಕ್ಕೆ ಡಿಐಜಿ ರವಿ.ಡಿ.ಚೆನ್ನಣ್ಣವರ್ ಭೇಟಿ: ಸ್ಥಳ ಪರಿಶೀಲನೆ

Suddi Udaya

ಪುದುವೆಟ್ಟು ಗ್ರಾ.ಪಂ.ನ ಗ್ರಾಮ ಸಭೆ

Suddi Udaya

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

Suddi Udaya

ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಗರ್ಭಗುಡಿ ಪ್ರಧಾನ ಅಂಗಗಳಲ್ಲೊಂದಾದ ಷಡಾಧಾರ ಪ್ರತಿಷ್ಠ ಹಾಗೂ ಗರ್ಭನ್ಯಾಸ ಕಾರ್ಯಕ್ರಮ

Suddi Udaya

ಜು.7: ಮರಳು ಮತ್ತು ಕೆಂಪು ಕಲ್ಲಿನ ಕೊರತೆಯಿಂದ ಕಾರ್ಮಿಕರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ವಿರುದ್ಧ ಪ್ರತಿಭಟನೆ

Suddi Udaya
error: Content is protected !!