April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮರೋಡಿ: ಪಾಣಾಲು-ಉಚ್ಚೂರು ಸಂಪರ್ಕ ರಸ್ತೆಗೆ ದಾನಿಗಳಿಂದ ವೃತ್ತ ನಿರ್ಮಾಣ

ಮರೋಡಿ: ಪಾಣಾಲು-ಉಚ್ಚೂರು ಕೂಡುರಸ್ತೆಯು ಮರೋಡಿ-ಬಜಿಲಪಾದೆ ಮತ್ತು ಮರೋಡಿ-ನಾರಾವಿ ಎಂಬ ಎರಡು ರಸ್ತೆಗಳನ್ನು ಸಂಪರ್ಕಿಸುವ ಏಕೈಕ ಪ್ರಮುಖವಾದ ರಸ್ತೆಯಾಗಿದೆ. ಈ ಕೂಡು ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಸುಮಾರು ಒಂದು ಎಕರೆಗಳಷ್ಟು ಬೆಲೆಬಾಳುವ ಜಮೀನನ್ನು ಪದ್ಮಕ್ಕ ಹೆಗ್ಗಡ್ತಿ ಮತ್ತು ಮಕ್ಕಳು, ಉಚ್ಚೂರು ಇವರು ಉದಾರವಾಗಿ ನೀಡಿರುತ್ತಾರೆ. ಅಲ್ಲದೇ ಪಾಣಾಲು ಎಂಬಲ್ಲಿ ಸುಮಾರು 30000/- ಅಂದಾಜು ವೆಚ್ಚದಲ್ಲಿ ಆಕರ್ಷಕವಾದ ವೃತ್ತ ನಿರ್ಮಾಣ ಮಾಡಿ, ರಸ್ತೆಯ ಮಾಹಿತಿಗಳುಳ್ಳ ನಾಮಫಲಕವನ್ನು ಪದ್ಮಕ್ಕ ಹೆಗ್ಗಡ್ತಿಯವರ ಪುತ್ರ, ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ದಿವಾಕರ ಹೆಗ್ಡೆ, ಮಯೂರ ಇವರು ಅಳವಡಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಪದ್ಮಕ್ಕ ಹೆಗ್ಗಡ್ತಿ ಕುಟುಂಬವು ಸಮಾಜಮುಖಿ ಕೆಲಸಕಾರ್ಯಗಳಲ್ಲಿ ತೊಡಗಿಕೊಂಡು, ಸಮಾಜಕ್ಕೆ ಮಾದರಿಯಾಗಿ, ಎಲ್ಲರಿಗೂ ಪ್ರೇರಣೆಯಾಗಿದ್ದಾರೆ.

Related posts

ವಾಣಿ ಪ.ಪೂ. ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ಥ್ರೋಬಾಲ್ ತಂಡಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ: ಸವಾರರಿಗೆ ತೊಂದರೆಯಾದರೆ ಇಂಜಿನಿಯರ್ ರನ್ನು ನೇರ ಹೊಣೆ ಮಾಡಿ ನಿರ್ದಾಕ್ಷಿಣ್ಯ ಕ್ರಮ : ದಿನೇಶ್ ಗುಂಡೂರಾವ್

Suddi Udaya

ಮರೋಡಿ: ಅಕ್ರಮ ಕಸಾಯಿಖಾನೆಗೆ ಪೊಲೀಸರ ದಾಳಿ – ಗೋಮಾಂಸ ಮಾರಾಟಕ್ಕೆ ಯತ್ನಿಸಿದ ಅಜಿದ್ ಬಂಧನ

Suddi Udaya

ರೆಂಕೆದ ಗುತ್ತಿನಲ್ಲಿ ಗೆಜ್ಜೆಗಿರಿಯ ಆಮಂತ್ರಣ ಪತ್ರಿಕೆ ವಿತರಣೆ

Suddi Udaya

ಗುರುವಾಯನಕೆರೆ : ಪಿಎಂ ಕುಸುಮ್ -ಸಿ ಯೋಜನೆಯಡಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಯೋಜನೆ

Suddi Udaya

ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನದಲ್ಲಿ ಧರ್ಮಸ್ಥಳದ ಡಾ.ಚಿರನ್ವಿ ಜೈನ್ ಗೆ ಪದವಿ

Suddi Udaya
error: Content is protected !!