25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ: ರಾಜ್ಯಹ್ಯಾಂಡ್ ಬಾಲ್ ತಂಡಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತರಬೇತಿ

ಉಜಿರೆ: 35 ನೇ ರಾಷ್ಟ್ರೀಯ ಸಬ್ ಜೂನಿಯರ್ ವಯೋಮಿತಿ 15 ರ ಬಾಲಕರ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾದ ಎಸ್.ಡಿ.ಎಂ ಶಾಲಾ ಕ್ರೀಡಾಪಟುಗಳಿಗೆ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆ ಉಜಿರೆಯ ವತಿಯಿಂದ ಉಚಿತ ಊಟ ವಸತಿ ನೀಡಿ, ಸುದೀನ ಪೂಜಾರಿ ಹ್ಯಾಂಡ್ ಬಾಲ್ ತರಬೇತುದಾರ ಇವರು 10ದಿನ ತರಬೇತಿ ನೀಡಿರುತ್ತಾರೆ. ಈ ರಾಷ್ಟ್ರೀಯ ಕ್ರೀಡಾಕೂಟವು ರಾಜಸ್ಥಾನದ ಗಾಂಗ್ರ ದಲ್ಲಿ ಫೆಬ್ರವರಿ 7 ರಿಂದ 12 ರವರೆಗೆ ನಡೆಯಲಿದೆ , ಈ ಆಯ್ಕೆ ಪಕ್ರಿಯೆಗೆ ರಾಜ್ಯ ವಿವಿಧ ಜಿಲ್ಲೆಯ ಒಟ್ಟು 36 ಕ್ರೀಡಾಪಟುಗಳು ಭಾಗವಸಿದ್ದರು, ಅಂತಿಮವಾಗಿ ಕರ್ನಾಟಕ ಹ್ಯಾಂಡ್ ಬಾಲ್ ಅಸೋಸಿಯೇಷನ್ ನ ಆಯ್ಕೆ ಸಮಿತಿಯ ಅಧಿಕಾರಿಗಳು 18 ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ರಾಜ್ಯ ತಂಡವನ್ನು ಪ್ರಕಟ ಮಾಡಿದರು,

ಈ ಸಂದರ್ಭದಲ್ಲಿ ಶ್ರೀಧರ್ಮಸ್ಥಳ ಶಿಕ್ಷಣ ಸಂಸ್ಥೆಯ ಕ್ರೀಡಾ ಕ್ಲಬ್ ಕಾರ್ಯದರ್ಶಿಯಾದ ರಮೇಶ್, ಉಪಸ್ಥಿತರಿದ್ದರು ಇವರೊಂದಿಗೆ ಆಯ್ಕೆ ಸಮಿತಿಯ ಸದಸ್ಯರು, ತರಬೇತಿಯ ಉಸ್ತುವಾರಿ ದಾರರು ಹೆಮೋಧರ ಹಾಗೂ ಹ್ಯಾಂಡ್ ಬಾಲ್ ತರಬೇತಿದಾರ ಸುದೀನ ಪೂಜಾರಿ ಇದ್ದರು.ಈ ಸಂದರ್ಭ ದಲ್ಲಿ ಕರ್ನಾಟಕ ಹ್ಯಾಂಡ್ ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಲೋಕೇಶ್, ಹಾಗೂ ಪ್ರಕಾಶ್ ನರಗಟ್ಟಿ ರಾಜ್ಯ ತಂಡ ಪ್ರಕಟಿಸಿದ್ದರು.
ರಾಜ್ಯ ತಂಡದಲ್ಲಿ ಮಿಹಿರ್ ಬಿ ಸುವರ್ಣ( ಬ್ರಹ್ಮವರ ) ಸುಮಿತ್ ದೇಸಾಯಿ (ಬೆಳಗಾವಿ) ಯದು ನಂದನ್ (SDM )
ಗೋಪಿಕೃಷ್ಣ (ಕೊಪ್ಪಳ) ಬಸವರಾಜ್ (ಬೆಳಗಾವಿ )ವೆಂಕಟೇಶ್ (ಹಾಸನ) ಪ್ರೀತಮ್ ಬೆಂಗಳೂರು ಪ್ರಶಾಂತ್ ಕಾಮತ್ (ಉಡುಪಿ) ಕಿಶನ್ (SDM) ರೋಷನ್ ರೋಷನ್ (ವಿಜಯಪುರ) ಅಬ್ದುಲ್ ಅಜೀಜ್ (ವಿಜಯಪುರ )ತರುಣ್ ಶೆಟ್ಟಿ (ಚಿಕ್ಕಮಗಳೂರು)ಸುಭಾಷ್ ಜೋಶಿ(ಗೋಕಾಕ್ )ಹರಿಪ್ರಕಾಶ್( ಬಳ್ಳಾರಿ )ನಿಶ್ಚಯ್ ಗೌಡ (ತುಮಕೂರು) ಶ್ರೇಯಸ್ ಗೌಡ ಸಂತೋಷ್ (ಚಿತ್ರದುರ್ಗ.) ಮಹಾಂತೇಶ್ (ದಾವಣಗೆರೆ )ತರಬೇತುದಾರ ಹೇಮೋದರ್, ತಂಡದ ವ್ಯವಸ್ಥಾಪಕರು ಪ್ರಶಾಂತ್ ನಾಯಕ್.

Related posts

ಬಿ.ಎನ್. ವೈ.ಎಸ್ ಪದವಿ ಪರೀಕ್ಷೆ: ಉಜಿರೆ ಶ್ರೀ ಧ.ಮಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಕಾಲೇಜಿಗೆ 9ನೇ ರ್‍ಯಾಂಕ್

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಸನ್: ಅತ್ಯುತ್ತಮ ವಲಯ ಪ್ರಶಸ್ತಿಯಲ್ಲಿ ಬೆಳ್ತಂಗಡಿ ವಲಯ ತೃತೀಯ ಸ್ಥಾನ

Suddi Udaya

ಅಳದಂಗಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಕುರಾಯ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಸ್ವಚ್ಛತಾ ಶ್ರಮದಾನ

Suddi Udaya

ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಧ್ವಜಾರೋಹಣದೊಂದಿಗೆ ಪ್ರಾರಂಭ

Suddi Udaya

ಎಸ್‌ಡಿಪಿಐ ಸಂಸ್ಥಾಪನಾ ದಿನ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಧ್ವಜಾರೋಹಣ

Suddi Udaya
error: Content is protected !!