July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಳಿಯ ಗ್ರಾ.ಪಂ. ಗ್ರಾಮ ಸಭೆ : ಲೋಕೋಪಯೋಗಿ ಇಲಾಖೆಯವರು ಬರುವ ತನಕ ನಿಲ್ಲುತೇವೆ: ಕೇಶವ ಪೂಜಾರಿ

ಗೇರುಕಟ್ಟೆ :ಕಳಿಯ ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷರಾದ ದಿವಾಕರ್ ಎಂ.ಇವರ ಅಧ್ಯಕ್ಷತೆಯಲ್ಲಿ ಕಳಿಯ ಸಹಕಾರಿ ಸಭಾಭವನದಲ್ಲಿ ಫೆ .3ರಂದು ನಡೆಯಿತು.
ನೋಡೆಲ್ ಅಧಿಕಾರಿಯಾಗಿ ವಲಯ ಅರಣ್ಯಧಿಕಾರಿ ಸಾಮಾಜಿಕ ಅರಣ್ಯ ಇಲಾಖೆಯ ವಿದ್ಯಾ ವಹಿಸಿದರು.

ವರದಿ ವನ್ನು ಕುಂಞ ಕೆ. ಸಭೆಗೆ ಮಂಡಿಸಿದರು. ಲೆಕ್ಕ ಪತ್ರ ವನ್ನು ಅಭಿವೃದ್ಧಿ ಅಧಿಕಾರಿ ಸಂತೋಷ ಪಾಟೀಲ್ ಸಭೆಗೆ ತಿಳಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯವರು ಗ್ರಾಮ ಸಭೆಗೆ ಬರುತ್ತಿಲ್ಲ, ಇವತ್ತಿನ ಗ್ರಾಮ ಸಭೆ ಬರುವಾಗ ತನಕ ನಿಲ್ಲುತೇವೆ ಎಂದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಪೂಜಾರಿ ಒತ್ತಾಯಿಸಿದರು

ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಮೆಸ್ಕಾಂ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಪಂಚಾಯತ್ ಇಂಜಿನಿಯರ್ ಉಪ ವಿಭಾಗ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆಯವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಇಂದಿರಾ ಬಿ. ಮತ್ತು ಸದಸ್ಯರಾದ ಸುಭಾಷಿನಿ ಗೌಡ, ವಿಜಯ್ ಗೌಡ, ಸುಧಾಕರ್ ಮಜಲು, ಯಶೋದರ ಶೆಟ್ಟಿ ಮಾಣಿಕ್ಯ, ಕುಸುಮ, ಶ್ವೇತಾ ಶ್ರೀನಿವಾಸ್, ಪುಷ್ಪಲತ, ಮರಿಟ ಪಿಂಟೋ, ಲತೀಫ್, ಅಬ್ದುಲ್ ಕರಿಂ, ಹರೀಶ್ ಕುಮಾರ್ ಹಾಗೂ ಗ್ರಾಮಸ್ಥರು ಸಿಬ್ಬಂದಿ ವರ್ಗದರು ಉಪಸ್ಥಿತರಿದ್ದರು.

Related posts

ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕಾಶಿಪಟ್ಣ ಸ.ಪ್ರೌ. ಶಾಲೆ ದ್ವಿತೀಯ ಸ್ಥಾನ

Suddi Udaya

ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಕಲ್ಮಂಜ ಗ್ರಾ.ಪಂ. ನಲ್ಲಿ ಪ್ರತಿಭಟನೆ

Suddi Udaya

ಮುಳಿಯ ಜ್ಯುವೆಲ್ಸ್‌ನಲ್ಲಿ ‘ಮುಳಿಯ ಚಿನ್ನೋತ್ಸವ’ ಪ್ರಾರಂಭ

Suddi Udaya

ಮಗನಿಂದ ತಂದೆಯ ಕೊಲೆ ಯತ್ನ ಆರೋಪಿ ಮಗನನ್ನು ಬಂಧಿಸಿದ ಪೊಲೀಸರು

Suddi Udaya

ಮುಂಡಾಜೆ : ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಯಕ್ಷಗಾನ ತರಬೇತಿ ಉದ್ಘಾಟನೆ

Suddi Udaya

ಕುಕ್ಕಾವು: ಮನೆ ಮಹಡಿಯಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೇಸ್ತ್ರಿ ಹರೀಶ್ ಮೃತ್ಯು

Suddi Udaya
error: Content is protected !!