ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ: ಗ್ರಾಮ ಪಂಚಾಯತ್ ಗ್ರಾಮ ಸಭೆ

ಬಳಂಜ : ಇಲ್ಲಿಯ ಗ್ರಾಮ ಪಂಚಾಯತದ 2023-24ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯು ಫೆ.05 ರಂದು ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಶೋಭಾ ರವರ ಅಧ್ಯಕ್ಷೆಯಲ್ಲಿ ಬಳಂಜ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಜಿತ್ ರವರು ಭಾಗವಹಿಸಿ ಗ್ರಾಮ ಸಭೆಯನ್ನು ಮುನ್ನಡೆಸುವುದರ ಮೂಲಕ ಕೃಷಿ ಇಲಾಖೆಗಳಲ್ಲಿ ಇರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ ಗ್ರಾಮ ಸಭೆಯು ಉತ್ತಮವಾಗಿ ನಡೆದಿರುವುದರ ಬಗ್ಗೆ ಅಭಿನಂದಿಸಿದರು.

ಮನೆಯ ವ್ಯಾಪ್ತಿ, ಆವರಣವನ್ನು ಸ್ವಚ್ಛತೆಯಲ್ಲಿ ಇರಿಸಿಕೊಂಡ ಗ್ರಾಮಸ್ಥರಾದ ಶಾರದಾ, ಕರ್ತೆ, ವಾರಿಜ, ಸುಮಿತ್ರಾ ರವರಿಗೆ ಸಭೆಯಲ್ಲಿ ಗೌರವಿಸಲಾಯಿತು. ಹಾಗೂ ಶ್ರಮದಾನದ ಮೂಲಕ ರಸ್ತೆ ಬದಿಯ ಗಿಡಗಂಟಿಯನ್ನು ತೆಗೆಸಿದಂತಹ ಶಶಿಧರ ಶೆಟ್ಟಿ ಯವರಿಗೆ ಅಭಿನಂದಿಸಲಾಯಿತು.

ಊರಿನ ಅಭಿವೃದ್ಧಿಯ ದೃಷ್ಟಿಯಲ್ಲಿ ಹಲವು ಸಮಯಗಳ ಕಾಲ ಚರ್ಚೆಗಳು ನಡೆದವು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಯಶೋಧರ ಶೆಟ್ಟಿ, ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಪೂಜಾರಿ, ಜಯ ಶೆಟ್ಟಿ,ರವೀಂದ್ರ ಬಿ. ಅಮೀನ್, ನಿಝಾಮ್, ಶ್ರೀಮತಿ ಬೇಬಿ,ಶ್ರೀಮತಿ ಪದ್ಮಾವತಿ, ಶ್ರೀಮತಿ ಪ್ರಸನ್ನ, ಶ್ರೀಮತಿ ಲೀಲಾವತಿ, ಶ್ರೀಮತಿ ಸುಚಿತ್ರಾ ಕೆ., ಶ್ರೀಮತಿ ಯಕ್ಷಿತಾ, ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಸ್ವಾಗತಿಸಿ, ನಿರ್ವಹಿಸಿದರು ಹಾಗೂ ಕಳೆದ ಗ್ರಾಮ ಸಭೆಯ ನಡವಳಿಗಳ ಬಗ್ಗೆ ಅನುಪಾಲನ ವರದಿ ವಾಚಿಸಿದರು.

Related posts

ಗುರುವಾಯನಕೆರೆ-ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ

Suddi Udaya

ಉಜಿರೆ: ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಯೋಗ ತರಬೇತಿ ಉದ್ಘಾಟನೆ

Suddi Udaya

ಅರಣ್ಯದ ನಡುವೆ ಬಿಟ್ಟು ಹೋದ ಮಾರುತಿ ಕಾರು-ವಾರುಸುದಾರರ ಸುಳಿವಿಲ್ಲ

Suddi Udaya

6300 ಕಿ.ಮೀ. ಕಾರು ಚಾಲನೆ ಮಾಡಿ ಚಾರ್‌ಧಾಮ ಯಾತ್ರೆ ಪೂರ್ಣಗೊಳಿಸಿದ ಬೆಳ್ತಂಗಡಿಯ ರತೀಶ್–ಪ್ರೀತಿ ರಾವ್ ಉದ್ಯಮಿ ದಂಪತಿ

Suddi Udaya

ಕುಂಟಿನಿಯ ಕಾಂಗ್ರೆಸ್ ಬೂತ್ ಸಮಿತಿಯ ಮನವಿಗೆ ಸ್ಪಂದನೆ: ಹಳೆಪೇಟೆಯಿಂದ ಕುತ್ರೋಟ್ಟು ರಸ್ತೆ ದುರಸ್ತಿ ಆರಂಭ

Suddi Udaya

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ : ಎಸ್.ಐ.ಟಿ ತನಿಖೆ ಹೆಸರಿನಲ್ಲಿ ಶ್ರೀ ಕ್ಷೇತ್ರದ ವಿರುದ್ಧ ವ್ಯವಸ್ಥಿತ ಪಿತೂರಿ: ವಿಜಯೇಂದ್ರ

Suddi Udaya
error: Content is protected !!