24.7 C
ಪುತ್ತೂರು, ಬೆಳ್ತಂಗಡಿ
September 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

6300 ಕಿ.ಮೀ. ಕಾರು ಚಾಲನೆ ಮಾಡಿ ಚಾರ್‌ಧಾಮ ಯಾತ್ರೆ ಪೂರ್ಣಗೊಳಿಸಿದ ಬೆಳ್ತಂಗಡಿಯ ರತೀಶ್–ಪ್ರೀತಿ ರಾವ್ ಉದ್ಯಮಿ ದಂಪತಿ

ಬೆಳ್ತಂಗಡಿ: ಭಕ್ತಿ, ಸಾಹಸ ಹಾಗೂ ಪ್ರಕೃತಿ ಪ್ರೇಮವನ್ನು ಒಂದೇ ಪ್ರವಾಸದಲ್ಲಿ ಬೆಸೆದು ಬೆಳ್ತಂಗಡಿಯ ಉದ್ಯಮಿ ರತೀಶ್ ರಾವ್ ಹಾಗೂ ಅವರ ಪತ್ನಿ ಪ್ರೀತಿ ರಾವ್ ದಂಪತಿ ಸುಮಾರು 15 ದಿನಗಳ ಅವಧಿಯಲ್ಲಿ 6,300 ಕಿಲೋಮೀಟರ್‌ಗಳನ್ನು ಸ್ವತಃ ಕಾರು ಚಾಲನೆ ಮಾಡಿಕೊಂಡು ಉತ್ತರಾಖಂಡದ ಪ್ರಸಿದ್ಧ ಚಾರ್‌ಧಾಮ ಸೇರಿದಂತೆ ಹಲವು ಪವಿತ್ರ ಕ್ಷೇತ್ರಗಳಿಗೆ ಯಶಸ್ವಿಯಾಗಿ ಯಾತ್ರೆ ಕೈಗೊಂಡಿದ್ದಾರೆ.

ಯಾತ್ರೆಯ ವೇಳೆ ದಂಪತಿ ಯಮುನೋತ್ರಿ,ಗಂಗೋತ್ರಿ, ಕೇದಾರನಾಥ್ ಹಾಗೂ ಬದರಿನಾಥ್ ಚಾರ್‌ಧಾಮ ಕ್ಷೇತ್ರಗಳ ದರ್ಶನ ಪಡೆದರು. ಅಲ್ಲದೆ, ಪಂಚಪ್ರಯಾಗ, ಗುಪ್ತಕಾಶಿ, ಉತ್ತರಕಾಶಿ ಹಾಗೂ ಶಿವ-ವಿಷ್ಣುಗಳ ಐಕ್ಯಕ್ಕೆ ಸಾಕ್ಷಿಯಾಗಿರುವ ಪವಿತ್ರ ತ್ರಿಯುಗಿನಾರಾಯಣ ದೇವಸ್ಥಾನಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಕಷ್ಟಕರ ಪರ್ವತ ಮಾರ್ಗಗಳು, ತಿರುವು-ಮುರುವುಗಳಿಂದ ಕೂಡಿದ ಹಿಮಾಲಯದ ರಸ್ತೆಗಳಲ್ಲಿ ಯಾವುದೇ ಚಾಲಕರ ನೆರವಿಲ್ಲದೆ ಸ್ವತಃ ಕಾರು ಚಾಲನೆ ಮಾಡಿಕೊಂಡು ಯಾತ್ರೆಯನ್ನು ಪೂರ್ಣಗೊಳಿಸಿರುವುದು ವಿಶೇಷವಾಗಿದೆ.

ಸಾಹಸಮಯ ಪ್ರವಾಸಗಳು ಹಾಗೂ ಟ್ರೆಕ್ಕಿಂಗ್‌ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ರತೀಶ್ ರಾವ್ ಮತ್ತು ಪ್ರೀತಿ ರಾವ್ ದಂಪತಿ ಈ ಹಿಂದೆ ಕೂಡ ದೇಶದ ವಿವಿಧ ಭಾಗಗಳಿಗೆ ಸ್ವಯಂ ಚಾಲನೆಯ ಮೂಲಕ ಪ್ರವಾಸ ಕೈಗೊಂಡಿದ್ದು, ಪ್ರಕೃತಿಯ ಸೊಬಗು ಮತ್ತು ಆಧ್ಯಾತ್ಮಿಕ ಅನುಭವಗಳನ್ನು ಆಸ್ವಾದಿಸುವುದನ್ನು ತಮ್ಮ ಜೀವನಶೈಲಿಯ ಭಾಗವಾಗಿಸಿಕೊಂಡಿದ್ದಾರೆ.

ಭಕ್ತಿ, ಧೈರ್ಯ ಮತ್ತು ಸಾಹಸ ಮನೋಭಾವವನ್ನು ಪ್ರತಿಬಿಂಬಿಸುವ ಈ ಚಾರ್‌ಧಾಮ ಯಾತ್ರೆ ಬೆಳ್ತಂಗಡಿ ಭಾಗದ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

Related posts

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಭೇಟಿ

Suddi Udaya

ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ಸಂಸ್ಥೆಗೆ ಕ್ಲಾರಿಯನ್ ಕಂಪೆನಿಯ ಏರಿಯಾ ಸೇಲ್ಸ್ ಮ್ಯಾನೇಜರ್ ಮಹೇಶ್ ಭೇಟಿ

Suddi Udaya

ಸಾವ್ಯ: ಮರದಿಂದ ಬಿದ್ದ ವ್ಯಕ್ತಿ; ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ಮುಂಡಾಜೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ, ಆಟಿ ತಿನಿಸಿನ ಸಹಭೋಜನ, ಆಟಿಕಳೆಂಜ ಪ್ರದರ್ಶನ

Suddi Udaya

ಬೆಳ್ತಂಗಡಿ ರಾಜ್ಯ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ: ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ: ನಿವೃತ್ತ ಜಯಕೀರ್ತಿ ಜೈನ್ ರವರಿಗೆ ಬೀಳ್ಕೊಡುಗೆ

Suddi Udaya

ಸೆ.7-9: ಲಾಯಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

Suddi Udaya
error: Content is protected !!