July 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

6300 ಕಿ.ಮೀ. ಕಾರು ಚಾಲನೆ ಮಾಡಿ ಚಾರ್‌ಧಾಮ ಯಾತ್ರೆ ಪೂರ್ಣಗೊಳಿಸಿದ ಬೆಳ್ತಂಗಡಿಯ ರತೀಶ್–ಪ್ರೀತಿ ರಾವ್ ಉದ್ಯಮಿ ದಂಪತಿ

ಬೆಳ್ತಂಗಡಿ: ಭಕ್ತಿ, ಸಾಹಸ ಹಾಗೂ ಪ್ರಕೃತಿ ಪ್ರೇಮವನ್ನು ಒಂದೇ ಪ್ರವಾಸದಲ್ಲಿ ಬೆಸೆದು ಬೆಳ್ತಂಗಡಿಯ ಉದ್ಯಮಿ ರತೀಶ್ ರಾವ್ ಹಾಗೂ ಅವರ ಪತ್ನಿ ಪ್ರೀತಿ ರಾವ್ ದಂಪತಿ ಸುಮಾರು 15 ದಿನಗಳ ಅವಧಿಯಲ್ಲಿ 6,300 ಕಿಲೋಮೀಟರ್‌ಗಳನ್ನು ಸ್ವತಃ ಕಾರು ಚಾಲನೆ ಮಾಡಿಕೊಂಡು ಉತ್ತರಾಖಂಡದ ಪ್ರಸಿದ್ಧ ಚಾರ್‌ಧಾಮ ಸೇರಿದಂತೆ ಹಲವು ಪವಿತ್ರ ಕ್ಷೇತ್ರಗಳಿಗೆ ಯಶಸ್ವಿಯಾಗಿ ಯಾತ್ರೆ ಕೈಗೊಂಡಿದ್ದಾರೆ.

ಯಾತ್ರೆಯ ವೇಳೆ ದಂಪತಿ ಯಮುನೋತ್ರಿ,ಗಂಗೋತ್ರಿ, ಕೇದಾರನಾಥ್ ಹಾಗೂ ಬದರಿನಾಥ್ ಚಾರ್‌ಧಾಮ ಕ್ಷೇತ್ರಗಳ ದರ್ಶನ ಪಡೆದರು. ಅಲ್ಲದೆ, ಪಂಚಪ್ರಯಾಗ, ಗುಪ್ತಕಾಶಿ, ಉತ್ತರಕಾಶಿ ಹಾಗೂ ಶಿವ-ವಿಷ್ಣುಗಳ ಐಕ್ಯಕ್ಕೆ ಸಾಕ್ಷಿಯಾಗಿರುವ ಪವಿತ್ರ ತ್ರಿಯುಗಿನಾರಾಯಣ ದೇವಸ್ಥಾನಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಕಷ್ಟಕರ ಪರ್ವತ ಮಾರ್ಗಗಳು, ತಿರುವು-ಮುರುವುಗಳಿಂದ ಕೂಡಿದ ಹಿಮಾಲಯದ ರಸ್ತೆಗಳಲ್ಲಿ ಯಾವುದೇ ಚಾಲಕರ ನೆರವಿಲ್ಲದೆ ಸ್ವತಃ ಕಾರು ಚಾಲನೆ ಮಾಡಿಕೊಂಡು ಯಾತ್ರೆಯನ್ನು ಪೂರ್ಣಗೊಳಿಸಿರುವುದು ವಿಶೇಷವಾಗಿದೆ.

ಸಾಹಸಮಯ ಪ್ರವಾಸಗಳು ಹಾಗೂ ಟ್ರೆಕ್ಕಿಂಗ್‌ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ರತೀಶ್ ರಾವ್ ಮತ್ತು ಪ್ರೀತಿ ರಾವ್ ದಂಪತಿ ಈ ಹಿಂದೆ ಕೂಡ ದೇಶದ ವಿವಿಧ ಭಾಗಗಳಿಗೆ ಸ್ವಯಂ ಚಾಲನೆಯ ಮೂಲಕ ಪ್ರವಾಸ ಕೈಗೊಂಡಿದ್ದು, ಪ್ರಕೃತಿಯ ಸೊಬಗು ಮತ್ತು ಆಧ್ಯಾತ್ಮಿಕ ಅನುಭವಗಳನ್ನು ಆಸ್ವಾದಿಸುವುದನ್ನು ತಮ್ಮ ಜೀವನಶೈಲಿಯ ಭಾಗವಾಗಿಸಿಕೊಂಡಿದ್ದಾರೆ.

ಭಕ್ತಿ, ಧೈರ್ಯ ಮತ್ತು ಸಾಹಸ ಮನೋಭಾವವನ್ನು ಪ್ರತಿಬಿಂಬಿಸುವ ಈ ಚಾರ್‌ಧಾಮ ಯಾತ್ರೆ ಬೆಳ್ತಂಗಡಿ ಭಾಗದ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

Related posts

ಕೊಯ್ಯೂರು ಪ್ರಗತಿಪರ ಕೃಷಿಕ ಬೆಳಿಯಪ್ಪ ಗೌಡ ಹೃದಯಾಘಾತದಿಂದ ನಿಧನ

Suddi Udaya

ಸ್ಪಂದನಾ ಲಯನ್ಸ್ ಪ್ರಾಂತೀಯ ಸಮ್ಮೇಳನ–2026 : ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉಜಿರೆ: ಬದ್ರಿಯಾ ಜುಮ್ಮಾ ಮಸೀದಿ ಆಡಳಿತ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ

Suddi Udaya

ಲಿಂಗ ಸಮಾನತೆ ಪ್ರತಿಪಾದಿಸಲು ಮಹಿಳಾ ದಿನಾಚರಣೆ ಅವಶ್ಯಕ: ಕರ್ತವ್ಯದೊಂದಿಗೆ ಮಹಿಳೆಯರೂ ಸಾಧನೆಯ ಪಥದತ್ತ ಶ್ಲಾಘನೀಯ: ಮಂಗಳೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕಿ ಸೌಮ್ಯಲತಾ ಎನ್.

Suddi Udaya

ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಅಲೆಮಾರಿ ಅಭಿವೃದ್ಧಿ ನಿಗಮದ ಜಿಲ್ಲಾ ನಾಮನಿರ್ದೇಶಿತ ಸದಸ್ಯರಾಗಿ ಜಯನಂದ್ ಪಿಲಿಕಳ ಆಯ್ಕೆ

Suddi Udaya
error: Content is protected !!