ಬೆಳ್ತಂಗಡಿ : ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಬೆಳ್ತಂಗಡಿ : ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮತ್ತು ಪಟ್ಟಣ ಪಂಚಾಯತ್ ಬೆಳ್ತಂಗಡಿ, ಪಿ. ಎಂ ಸ್ವ ನಿಧಿ ಮತ್ತು ಸ್ವನಿಧಿ ಸೇ ಸಮೃದ್ಧಿ ಯೋಜನೆ ಸಂಯೋಗದಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ಮತ್ತು ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ (ಕಣ್ಣಿನ ತಪಾಸಣೆ)ವು ಫೆ.08ರಂದು ಅಂಬೇಡ್ಕರ್ ಭವನ ಬೆಳ್ತಂಗಡಿಯಲ್ಲಿ ನಡೆಯಿತು.

ಪ.ಪಂ ಮುಖ್ಯಾಧಿಕಾರಿ ರಾಜೇಶ್ ಕೆ. ಉದ್ಘಾಟಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಮಂಗಳೂರು ನೇತ್ರ ಚಿಕಿತ್ಸಾಲಯ ಡಾ. ವಿಷ್ಣುಪ್ರಸಾದ್ ಶಿಬಿರದಲ್ಲಿ ದೊರೆಯುವಂತಹ ಸೌಲಭ್ಯಗಳ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಪ.ಪಂ ಮಾಜಿ ಅಧ್ಯಕ್ಷೆ ಸದಸ್ಯರಾದ ರಜನಿ ಕುಡ್ವ, ಪ.ಪಂ ಸದಸ್ಯೆ ಕು. ಗೌರಿ, ಪ.ಪಂ ಕಿರಿಯ ಅಭಿಯಂತಕರು ಮಹಾವೀರ ಆರಿಗ, ಪ.ಪಂ ಸಮುದಾಯ ಸಂಘಟಕಿ ಮೆಟಿಲ್ಡ ಡಿಕೋಸ್ಟಾ, ಪ.ಪಂ ಸದಸ್ಯ ಜಗದೀಶ್ ಡಿ ಉಪಸ್ಥಿತರಿದ್ದರು.

ಪ.ಪಂ ಸಿಬ್ಬಂದಿ ಸಚಿನ್ ಸಾಲಿಯಾನ್ ನಿರೂಪಿಸಿ ಧನ್ಯವಾದವಿತ್ತರು.

Leave a Comment

error: Content is protected !!