September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನವರದಿ

ಮೊಗ್ರು: ಕೋರಿಯಾರು ಎಂಬಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಬೆಳ್ತಂಗಡಿ: ಮೊಗ್ರು ಗ್ರಾಮದ ಕೋರಿಯಾರು ಎಂಬಲ್ಲಿ ಯಾರು ಇಲ್ಲದ ವೇಳೆ ಮಾನಸಿಕ ಖಿನ್ನತೆಯಿಂದ ಬಳಲಿ ಹರೀಶ್ ಎಂಬುವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ. 16 ರಂದು ನಡೆದಿದೆ.ಬಂದಾರು ನಿವಾಸಿ ಹರೀಶ್ ರವರ ಪತ್ನಿ ಲೋಲಾಕ್ಷಿ.ಕೆ.ಎಂ ರವರ ದೂರಿನಂತೆ ಹರೀಶ್ ರವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದವರು, ಕೊರೋನ ಅವಧಿ ಬಳಿಕ ಊರಿಗೆ ಬಂದು ಪದ್ಮುಂಜದ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದು, ಲೋಲಾಕ್ಷಿ ಅವರ ತವರು ಮನೆಯಲ್ಲಿದ್ದು, ಹರೀಶ್‌ ರವರು ತಾಯಿ ಮನೆಯಾದ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಕೋರಿಯಾರು ಎಂಬಲ್ಲಿದ್ದು, ಆಗಾಗ ಪತ್ನಿ ಮನೆಗೆ ಬಂದು ಹೋಗುತ್ತಿದ್ದವರು ಫೆ.15 ರಂದು ಕೆಲಸಕ್ಕೆ ಹೋಗದೆ ಮಧ್ಯಾಹ್ನ ವೇಳೆಗೆ ಪತ್ನಿ ಮನೆಗೆ ಬಂದು ಹೋಗಿದ್ದು ಬಳಿಕ ಅವರ ತಾಯಿ ಮನೆಯಲ್ಲೆ ಇದ್ದವರು ಫೆ. 16 ರಂದು ಬೆಳಗ್ಗೆ ಹರೀಶರವರ ತಾಯಿ ಭವಾನಿ ಮತ್ತು ಅತ್ತಿಗೆ ಉಮಾ ರವರು ತೋಟಕ್ಕೆ ಕೆಲಸಕ್ಕೆ ಹೋದ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯಲ್ಲಿ ಹರೀಶ್ ಮಲಗುವ ಕೋಣೆಯಲ್ಲಿ ಮಾಡಿನ ಕಬ್ಬಿಣದ ಅಡ್ಡಕ್ಕೆ ನೈಲಾನ್ ಹಗ್ಗವನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಸಮಯದ ಹಿಂದೆ ಹರೀಶ್‌ ರವರು ಖರೀದಿ ಮಾಡಿದ ಜಮೀನಿನ ದಾಖಲೆ ಪತ್ರ ಸರಿ ಇಲ್ಲವೆಂದು ಮತ್ತು ಹರೀಶ್‌ರವರ ಮನೆಯಲ್ಲಿ ಬ್ಯಾಂಕ್ ಲೋನ್ ಮಾಡಿದ ವಿಚಾರದಲ್ಲಿ ತೀವ್ರ ಚಿಂತಿತರಾಗಿ ಖಿನ್ನತೆಯಿಂದ ಇದ್ದವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಯುಡಿಆರ್ ನಂಬ್ರ 04/2024 ಕಲಂ:174 ಸಿ ಆರ್‌ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

Related posts

ಜೋಡುಸ್ಥಾನ ರಸ್ತೆಗೆ ಪದ್ಮವಿಭೂಷಣ ಡಾ. ಡಿ ವೀರೇಂದ್ರ ಹೆಗ್ಗಡೆ ರಸ್ತೆ ಎಂದು ನಾಮಕರಣ

Suddi Udaya

ರೆಖ್ಯ: ಸಾರ್ವಜನಿಕ ಶ್ರೀ ಕೃಷ್ಣಾ ಜನ್ಮಾಷ್ಟಮಿ ಆಚರಣಾ ಸಮಿತಿ ರಚನೆ

Suddi Udaya

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಉಪ ತಹಶೀಲ್ದಾರ್ ರವರ ಮೂಲಕ ರಾಜ್ಯಪಾಲರಿಗೆ ಮನವಿ

Suddi Udaya

ಕ್ರಾಂತಿವೀರ ಮಂಜ ಬೈದ್ಯರ ಕಂಚಿನ ಪುತ್ಥಳಿ ನಿರ್ಮಾಣ ಆಗಬೇಕು: ಕನ್ಯಾಡಿ ಶ್ರೀ

Suddi Udaya

ಬೆಳ್ತಂಗಡಿ: ಸುರೇಶ್ ಪೂಜಾರಿ ಜೈಮಾತ ನಾಲ್ಕೂರು ಬಿಜೆಪಿ ಸೇರ್ಪಡೆ

Suddi Udaya

ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಎರಡೂ ಜನರೇಟರ್ ಇದ್ದೂ ಯಾವುದೇ ಪ್ರಯೋಜನಕ್ಕಿಲ್ಲ: ಜನರು ಅಗತ್ಯ ಕೆಲಸಕ್ಕಾಗಿ ಕಾದು ವಾಪಸ್ ಹೋಗಬೇಕಾದ ಪರಿಸ್ಥಿತಿ

Suddi Udaya
error: Content is protected !!