25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನವರದಿ

ಮೊಗ್ರು: ಕೋರಿಯಾರು ಎಂಬಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಬೆಳ್ತಂಗಡಿ: ಮೊಗ್ರು ಗ್ರಾಮದ ಕೋರಿಯಾರು ಎಂಬಲ್ಲಿ ಯಾರು ಇಲ್ಲದ ವೇಳೆ ಮಾನಸಿಕ ಖಿನ್ನತೆಯಿಂದ ಬಳಲಿ ಹರೀಶ್ ಎಂಬುವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ. 16 ರಂದು ನಡೆದಿದೆ.ಬಂದಾರು ನಿವಾಸಿ ಹರೀಶ್ ರವರ ಪತ್ನಿ ಲೋಲಾಕ್ಷಿ.ಕೆ.ಎಂ ರವರ ದೂರಿನಂತೆ ಹರೀಶ್ ರವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದವರು, ಕೊರೋನ ಅವಧಿ ಬಳಿಕ ಊರಿಗೆ ಬಂದು ಪದ್ಮುಂಜದ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದು, ಲೋಲಾಕ್ಷಿ ಅವರ ತವರು ಮನೆಯಲ್ಲಿದ್ದು, ಹರೀಶ್‌ ರವರು ತಾಯಿ ಮನೆಯಾದ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಕೋರಿಯಾರು ಎಂಬಲ್ಲಿದ್ದು, ಆಗಾಗ ಪತ್ನಿ ಮನೆಗೆ ಬಂದು ಹೋಗುತ್ತಿದ್ದವರು ಫೆ.15 ರಂದು ಕೆಲಸಕ್ಕೆ ಹೋಗದೆ ಮಧ್ಯಾಹ್ನ ವೇಳೆಗೆ ಪತ್ನಿ ಮನೆಗೆ ಬಂದು ಹೋಗಿದ್ದು ಬಳಿಕ ಅವರ ತಾಯಿ ಮನೆಯಲ್ಲೆ ಇದ್ದವರು ಫೆ. 16 ರಂದು ಬೆಳಗ್ಗೆ ಹರೀಶರವರ ತಾಯಿ ಭವಾನಿ ಮತ್ತು ಅತ್ತಿಗೆ ಉಮಾ ರವರು ತೋಟಕ್ಕೆ ಕೆಲಸಕ್ಕೆ ಹೋದ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯಲ್ಲಿ ಹರೀಶ್ ಮಲಗುವ ಕೋಣೆಯಲ್ಲಿ ಮಾಡಿನ ಕಬ್ಬಿಣದ ಅಡ್ಡಕ್ಕೆ ನೈಲಾನ್ ಹಗ್ಗವನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಸಮಯದ ಹಿಂದೆ ಹರೀಶ್‌ ರವರು ಖರೀದಿ ಮಾಡಿದ ಜಮೀನಿನ ದಾಖಲೆ ಪತ್ರ ಸರಿ ಇಲ್ಲವೆಂದು ಮತ್ತು ಹರೀಶ್‌ರವರ ಮನೆಯಲ್ಲಿ ಬ್ಯಾಂಕ್ ಲೋನ್ ಮಾಡಿದ ವಿಚಾರದಲ್ಲಿ ತೀವ್ರ ಚಿಂತಿತರಾಗಿ ಖಿನ್ನತೆಯಿಂದ ಇದ್ದವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಯುಡಿಆರ್ ನಂಬ್ರ 04/2024 ಕಲಂ:174 ಸಿ ಆರ್‌ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

Related posts

ಓಡಿಲ್ನಾಳ : ಮೈರಲ್ಕೆ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರಥಮ ವರ್ಷದ ಶ್ರೀ ಶಾರದೋತ್ಸವ: ಧಾರ್ಮಿಕ ಸಭೆ

Suddi Udaya

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಪ್ರೋತ್ಸಾಹಕ ಪ್ರಶಸ್ತಿಯ ಗೌರವ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ಘಟಕದಿಂದ ಸರ್ವ ಧರ್ಮ ಪ್ರಾರ್ಥನೆ

Suddi Udaya

ನಿಡ್ಲೆ : ಬೂಡುಜಾಲು ನಿವಾಸಿ ಸತೀಶ್ ಹೃದಯಾಘಾತದಿಂದ ನಿಧನ

Suddi Udaya

ಡಿ.7 : ಗುರುವಾಯನಕೆರೆ ಪಿಲಿಚಾಮುಂಡಿಕಲ್ಲಿನಲ್ಲಿ ದೊಂಪದಬಲಿ ಉತ್ಸವ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್ ಕಾಲೇಜಿನಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಣೆ

Suddi Udaya
error: Content is protected !!