24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುರುವಾಯನಕೆರೆ ಸನ್ಯಾಸಿ ಗುಳಿಗ ಕ್ಷೇತ್ರದ ಪುನರ್ ಪ್ರತಿಷ್ಠಾ ಮಹೋತ್ಸವದಲ್ಲಿ ಪರ್ವ-2024′ ತುಳುನಾಡ ದೈವಾರಾಧಕರ ಮಹಾ ಸಮ್ಮೇಳನದಲ್ಲಿ ಸರ್ವ ದೈವಾರಾಧಕರಿಗೆ ಸನ್ಮಾನ: ಸಂಪತ್ ಬಿ ಸುವರ್ಣ

ಬೆಳ್ತಂಗಡಿ:ತಾಲೂಕಿನ ಗುರುವಾಯನಕೆರೆಯ ರತ್ನಗಿರಿ ಶ್ರೀ ಸನ್ಯಾಸಿಗುಳಿಗ ಕ್ಷೇತ್ರದಲ್ಲಿ ಫೆಬ್ರವರಿ 27, 28, 29 ಮತ್ತು ಮಾರ್ಚ್ 01, 02ರಂದು ನಡೆಯಲಿರುವ ಪುನರ್‌ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ‘ಪರ್ವ- 2024’ ಎಂಬ ತುಳುನಾಡ ದೈವಾರಾಧಕರ ಮಹಾ ಸಮ್ಮೇಳನ ಏರ್ಪಡಿಸಲಾಗಿದೆ.

ಈ ಸಂದರ್ಭದಲ್ಲಿ ತುಳುನಾಡಿನ ಸರ್ವ ದೈವ ನರ್ತಕರಿಗೆ, ದೈವಸ್ಥಾನ ಹಾಗೂ ಗರೋಡಿ ಪಾತ್ರಿಗಳಿಗೆ, ದೈವದ ಆಯುಧ, ಮೊಗಮೂರ್ತಿ ಹಿಡಿಯುವ ಪೂಜಾರಿ, ಮುಕ್ಕಾಲ್ಲಿ, ಜೀಟಿಗೆ ಹಿಡಿಯುವವರಿಗೆ, ಮಧ್ಯಸ್ಥರಿಗೆ ಮತ್ತಿತರ ಸರ್ವ ಪ್ರಕಾರದ ದೈವಾರಾಧನೆಯ ಚಾಕರಿ ಮಾಡುವವರಿಗೆ, ದೈವಸ್ಥಾನದ ಆಡಳಿತ ಮಂಡಳಿ ಮುಖ್ಯಸ್ಥರಿಗೆ, ಭಂಡಾರದ ಮನೆತನದವರಿಗೆ, ಗುತ್ತು ಬರ್ಕೆಯವರಿಗೆ ಗೌರವಾರ್ಪಣೆ ಸಲ್ಲಿಕೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪರ್ವ ಮಹಾ ಸಮ್ಮೇಳನದ ಸಂಚಾಲಕ ಸಂಪತ್ ಬಿ ಸುವರ್ಣ ತಿಳಿಸಿದ್ದಾರೆ.

ದೈವಾರಾಧನೆಗೆ ಸಂಬಂಧಪಟ್ಟಂತ ಸರ್ವರೂ ಪಾಲ್ಗೊಳ್ಳುವ ಈ ಮಹೋನ್ನತ ಕಾರ್ಯಕ್ರಮದಲ್ಲಿ ತಾವೆಲ್ಲರೂ ಇರಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ. ಆದ್ದರಿಂದ ‘ಪರ್ವ-2024’ ತುಳುನಾಡ ದೈವಾರಾಧಕರ ಮಹಾ ಸಮ್ಮೇಳನಕ್ಕೆ ಸರ್ವ ದೈವಾರಾಧಕರು ಆಗಮಿಸಿ ನಮ್ಮ ಸನ್ಮಾನ ಸ್ವೀಕರಿಸಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ‘ಪರ್ವ 2024’ರ ಪ್ರಧಾನ ಸಂಚಾಲಕರಾದ ಸಂಪತ್ ಬಿ. ಸುವರ್ಣ (ಸಂಪರ್ಕ ಸಂಖ್ಯೆ 9663373940 ಅಥವಾ 9448188974)ರವರನ್ನು ಸಂಪರ್ಕಿಸಬಹುದು.

Related posts

ಬೆಳ್ತಂಗಡಿ: ರತ್ನತ್ರಯತೀರ್ಥಕ್ಷೇತ್ರದಲ್ಲಿ ಪ್ರೊ. ನಾ’ವುಜಿರೆ ಸ್ಮರಣಾರ್ಥ ಶಾಸ್ತ್ರದಾನ ಕೃತಿ ಲೋಕಾರ್ಪಣೆ

Suddi Udaya

ಬೆಳ್ತಂಗಡಿ: ಜೀವನ ಕೌಶಲ ತರಬೇತಿ ಕಾರ್ಯಾಗಾರ

Suddi Udaya

ಬಂದಾರು: ಬಟ್ಲಡ್ಕ ಜುಮಾ ಮಸೀದಿಯಲ್ಲಿ ಉರೂಸ್ ಕಾರ್ಯಕ್ರಮದ ಸಮಾರೋಪ

Suddi Udaya

ಗಾಳಿ ಮಳೆಗೆ ಮನೆ ಹಾನಿಗೊಂಡ ಕುಟುಂಬಗಳಿಗೆ ಬೆಸ್ಟ್ ಫೌಂಡೇಶನ್ ವತಿಯಿಂದ ಆರ್ಥಿಕ ನೆರವು

Suddi Udaya

ಬೆಳ್ತಂಗಡಿ ಭೂ ನ್ಯಾಯಮಂಡಳಿಗೆ ನಾಲ್ವರು ಸದಸ್ಯರ ನಾಮನಿರ್ದೇಶನ

Suddi Udaya

ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೆಳ್ತಂಗಡಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗಿ

Suddi Udaya
error: Content is protected !!