23.5 C
ಪುತ್ತೂರು, ಬೆಳ್ತಂಗಡಿ
June 8, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಲಾಯಿಲ: ಕುಂಟಿನಿ ಅಲ್ ಬುಖಾರಿ ಜುಮಾ ಮಸೀದಿ ವಾರ್ಷಿಕ ಮಹಾಸಭೆ, ಸಮಿತಿ ರಚನೆ : ಅಧ್ಯಕ್ಷರಾಗಿ ಇಸ್ಮಾಯಿಲ್ ಸನಾ, ಕಾರ್ಯದರ್ಶಿಯಾಗಿ ಸಾಹುಲ್ ಹಮೀದ್ ಪುನರಾಯ್ಕೆ

ಲಾಯಿಲ: ಅಲ್ ಬುಖಾರಿ ಜುಮಾ ಮಸೀದಿ ಕುಂಟಿನಿ ಇದರ ವಾರ್ಷಿಕ ಮಹಾ ಸಭೆಯು ಫೆ.26ರಂದು ಮಗರಿಬ್ ನಮಾಜ್ ಬಳಿಕ ಮದರಸ ಹಾಲ್ ನಲ್ಲಿ ಕೇಂದ್ರ ಕಮಿಟಿ ಅಧ್ಯಕ್ಷ ಬಿಎಮ್ ಅಬ್ದುಲ್ ಹಮೀದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕೇಂದ್ರ ಸಮಿತಿಯ ಕಾರ್ಯದರ್ಶಿಗಳಾದ ಮೊಹಮ್ಮದ್ ಕೆಎಸ್ಆರ್ ಟಿಸಿ ಉಪಸ್ಥಿತರಿದ್ದರು. ಇಬ್ರಾಹಿಂ ಉಸ್ತಾದ್ ಅವರು ದುವಾ ಕಾರ್ಯಕ್ರಮ ನೆರವೇರಿಸಿ, ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಸಾಹುಲ್ ಹಮೀದ್ ರವರು ವಾಚಿಸಿದರು. ಹಳೆ ಕಮಿಟಿಯನ್ನು ಬರ್ಕಾಸುಗೊಳಿಸಿ ಹೊಸ ಕಮಿಟಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಇಸ್ಮಾಯಿಲ್ ಸನಾ, ಪ್ರಧಾನ ಕಾರ್ಯದರ್ಶಿಯಾಗಿ ಸಾಹುಲ್ ಹಮೀದ್, ಉಪಾಧ್ಯಕ್ಷರಾಗಿ ಸುಲೈಮಾನ್ ಎ.ಪಿ., ಇಲ್ಯಾಸ್ ನಾಡ್ಜೆ, ಕೋಶಾಧಿಕಾರಿಯಾಗಿ ರಹೀಮ್ ಪುನರಾಯ್ಕೆಗೊಂಡರು.

ಸದಸ್ಯರುಗಳಾಗಿ ಸಲಿಮ್, ರಹೀಮ್ ಯು.ಕೆ, ಅಝೀಜ್ ಯು.ಕೆ, ಅಬುಸಲಿ ಎನ್.ಆರ್., ರಹಿಮಾನ್, ಇಸುಬು ಹಲೇಜಿ ಮಯ್ಯದ್ದಿ , ಅಶ್ರಫ್ , ಅಶ್ರಫ್ ಮೋನು, ಸಂಸುಂದ್ದಿನ್ ನಾಡ್ಜೆ, ಹನೀಫ್ , ಮುಸ್ತಫಾ , ಹಸನ್ , ಆಸೀಫ್ , ಆನ್ಸರ್ ಯು ಪಿ. ಆಯ್ಕೆಗೊಂಡರು.


ನೂತನ ಮದರಸದ ಕೆಲಸ ಕಾರ್ಯಗಳು ಆದಷ್ಟು ಬೇಗ ಪೂರ್ತಿಗೊಳಿಸಲು ದಾನಿಗಳ ಸಹಕಾರ ಕೇಳುವುದೆಂದು ತೀರ್ಮಾನಿಸಿ ಆದಷ್ಟು ಬೇಗ ಮದರಸ ಪೂರ್ತಿ ಗೊಳಿಸುವ ಪ್ರಯತ್ನ ಮಾಡುವುದೆಂದು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಯಂಗ್ ಮೆನ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಹೊಸಂಗಡಿ ಗ್ರಾಮ ಪಂಚಾಯತ್ ನಲ್ಲಿ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ

Suddi Udaya

ಅಳದಂಗಡಿಯಲ್ಲೊಂದು ಅಪರೂಪದ ಕಾರ್ಯಕ್ರಮ: ಧಾರ್ಮಿಕ ಚಿಂತಕ ನಿರಂಜನ್ ಜೈನ್ ಕುದ್ಯಾಡಿ ಹಾಗೂ 20 ಮಂದಿ ಮೆಸ್ಕಾಂ ಸಿಬ್ಬಂದಿಗಳಿಗೆ ಸನ್ಮಾನ

Suddi Udaya

ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಕಾಲುಬಾಯಿ ರೋಗ ಲಸಿಕಾ ಅಭಿಯಾನ

Suddi Udaya

ಪಿಲ್ಯ ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಗ್ರಾಮ ಸಂಗ್ರಾಮ್

Suddi Udaya

ಬಂಟ್ವಾಳ ಅಬ್ದುಲ್ ರಹಿಮಾನ್‌ ಕೊಲೆ ಪ್ರಕರಣ: ಆರೋಪಿಗಳಿಬ್ಬರನ್ನು ಬೆಳ್ತಂಗಡಿಗೆ ಕರೆತಂದು ಮಹಜರು

Suddi Udaya
error: Content is protected !!