25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿ

ತೆಂಕಕಾರಂದೂರು: ಸ.ಕಿ.ಪ್ರಾ. ಶಾಲೆಯಲ್ಲಿ ಮೆಟ್ರಿಕ್ ಮೇಳ

ತೆಂಕಕಾರಂದೂರು : ಮಾ.5 ರಂದು ಕಾಪಿನಡ್ಕ ಸ.ಕಿ.ಪ್ರಾ ಶಾಲೆಯಲ್ಲಿ ಮೆಟ್ರಿಕ್ ಮೇಳವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲೆಯ ಸ್ಥಾಪಕ ಅಧ್ಯಕ್ಷರಾದ ವಸಂತ ಸಾಲ್ಯಾನ್ ನೆರವೇರಿಸಿ ಶುಭ ಹಾರೈಸಿದರು. ನಾರಾವಿ ಮತ್ತು ಪೆರೋಡಿತ್ತಾಯ ಕಟ್ಟೆ ಕ್ಲಸ್ಟರ್ ನ ಸಿ.ಆರ್.ಪಿ ಕಿರಣ್ ಮೆಟ್ರಿಕ್ ಮೇಳದ ಉದ್ದೇಶ ಮತ್ತು ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ್ ಪೂಜಾರಿ, ಗೆಳೆಯರ ಬಳಗದ ಅಧ್ಯಕ್ಷ ಪ್ರವೀಣ್ ಮತ್ತು ಸದಸ್ಯ ಪ್ರದೀಪ್ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಶಾಂತಿವಾಸ್ ಉಪಸ್ಥಿತರಿದ್ದರು.

ಮಕ್ಕಳು, ಪೋಷಕರ ಸಹಕಾರದೊಂದಿಗೆ ತರಕಾರಿ, ಹಣ್ಣುಗಳು, ಪಾನೀಯಗಳು, ಐಸ್ ಕ್ರೀಮ್, ಅದೃಷ್ಟ ಚೀಟಿ ಆಟ, ಜೇನು ತುಪ್ಪ, ಉತ್ಪನ್ನ ವಸ್ತುಗಳು, ಲೇಖನ ಸಾಮಾಗ್ರಿ ಇತ್ಯಾದಿಗಳನ್ನು ಮಾರಾಟ ಮಾಡಿದರು. ಸಿಕ್ಕಿದ ಮೊತ್ತವನ್ನು ಎಲ್ಲಾ ಪೋಷಕರು ಶಾಲೆಗೆ ನೀಡುವುದೆಂದು ತೀರ್ಮಾನಿಸಿದರು. ಊರ ವಿದ್ಯಾಭಿಮಾನಿಗಳು ಕ್ಲಸ್ಟರ್ ಶಾಲೆಗಳ ಶಿಕ್ಷಕ ವೃಂದದವರು ಮೆಟ್ರಿಕ್ ಮೇಳದಲ್ಲಿ ಭಾಗವಹಿಸಿ ಆರ್ಥಿಕ ಸಹಕಾರವನ್ನು ನೀಡಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಮೆಟ್ರಿಕ್ ಮೇಳದಿಂದ ದೊರೆತ ಮೊತ್ತವನ್ನು ಶಾಲಾ ಅಕ್ಷರ ದಾಸೋಹ ಕೊಠಡಿಯ ಮೇಲ್ಚಾವಣಿಗೆ ಶೀಟ್ ಅಳವಡಿಸಲು ಉಪಯೋಗಿಸುವಂತೆ ತೀರ್ಮಾನಿಸಲಾಯಿತು. ಶಿಕ್ಷಕಿ ಕು. ಅನುಷಾ ನಿರೂಪಿಸಿ, ಶಿಕ್ಷಕಿ ಅನಿತಾ ವಂದಿಸಿದರು.

Related posts

ಬೆಳ್ತಂಗಡಿ: ತಾಲೂಕು ಬ್ಯೂಟಿಪಾರ್ಲರ್ ಅಸೋಶಿಯೇಶನ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಹೈಡ್ರಾ ಫೇಶಿಯಲ್ ಸೆಮಿನಾರ್

Suddi Udaya

ಗುರುವಾಯನಕರೆ: ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ಘಟಿಕೋತ್ಸವ

Suddi Udaya

ಮಚ್ಚಿನ: ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ತೆನೆ ಹಬ್ಬ

Suddi Udaya

ಬಳಂಜ: ನೆಕ್ಕಿಲ ನಿವಾಸಿ ಅಪ್ಪಿ ಶೆಟ್ಟಿ ನಿಧನ

Suddi Udaya

ಮುಗ್ಗಗುತ್ತು ದಿ | ಕೆ. ಜಿ ಬಂಗೇರರ ಪತ್ನಿ ಶ್ರೀಮತಿ ವೀರಮ್ಮ ನಿಧನ

Suddi Udaya

ಮಹಿಳಾ ಶ್ರಮಿಕರ ಸಂಗಮ – 2026 ಕಾರ್ಯಕ್ರಮ

Suddi Udaya
error: Content is protected !!