ಬೆಳ್ತಂಗಡಿ ವರ್ತಕರ ಸಂಘದ ಸಭೆ: ಮಾ.10 ರಂದು ಜನಸಂಪರ್ಕ ಕಾರ್ಯಕ್ರಮ ಮಾಡಿಸುವುದಾಗಿ ತೀರ್ಮಾನ

Suddi Udaya

ಬೆಳ್ತಂಗಡಿ: ವರ್ತಕರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯು ಮಾ.4ರಂದು ಬೆಳ್ತಂಗಡಿ ಲೋಬೊ ಟವರ್ಸ್ ನಲ್ಲಿ ನಡೆಯಿತು.

ಸಭೆಯಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಗೊಂದಲ ಹಾಗೂ ಪರಿಹಾರದ ಚರ್ಚೆಯ ಬಗ್ಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಮುಖ್ಯ ರಸ್ತೆಯಲ್ಲಿ ವರ್ತಕರಿಗೆ ಹಾಗೂ ಕಟ್ಟಡ ಮಾಲಿಕರ ಸಮಸ್ಯೆಯನ್ನು ಆಲಿಸಲು ಖುದ್ದಾಗಿ ಶಾಸಕರು ಕಾಮಗಾರಿ ವೀಕ್ಷಣೆ ಹಾಗೂ ಹೆದ್ದಾರಿ ಅಧಿಕಾರಿಗಳು, ಗುತ್ತಿಗೆದಾರರು, ಕಂದಾಯ ಇಲಾಖೆಯ ಅಧಿಕಾರಿಗಳು , ಜನ ಪ್ರತಿನಿಧಿಗಳೊಂದಿಗೆ ಜನ ಸಂಪರ್ಕ ಕಾರ್ಯಕ್ರಮ ಮಾ.10ರಂದು ನಡೆಸುದಾಗಿ ತೀರ್ಮಾನಿಸಲಾಯಿತು.


10:30ಗೆ ಬಂಟರ ಭವನ, 11.45ಕ್ಕೆ ವಾಣಿ ಕಾಲೇಜು ಸಮೀಪ , 12.00 ಕ್ಕೆ ಚರ್ಚ್ ರೋಡ್, 12.40 ಕ್ಕೆ ಅಯ್ಯಪ್ಪ ಮಂದಿರ ಸಮೀಪ, 1.30ಕ್ಕೆ ಮಾರಿಗುಡಿ ಸಮೀಪ. 2.O0ಕ್ಕೆ ಬೆಳ್ತಂಗಡಿ ಮೂರು ಮಾರ್ಗದ ಬಳಿ, 2.30ಕ್ಕೆ ಬೆಳ್ತಂಗಡಿ ಬಸ್ಸು ನಿಲ್ದಾಣ ಜನ ಸಂಪರ್ಕ ಕಾರ್ಯಕ್ರಮ ನಡೆಯಲಿದೆ.

ಹೆಚ್ಚಿನ ವರ್ತಕರು ಹಾಜರಿದ್ದು ತಮ್ಮ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿ ವರ್ತಕರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ತಿಳಿಸಿದ್ದಾರೆ.

Leave a Comment

error: Content is protected !!