22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ಒಂದೇ ದಿನ 3 ಕಡೆಗಳಲ್ಲಿ ಕಾಳಿಂಗ ಸರ್ಪ ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಧರ್ಮಸ್ಥಳದ ಸ್ನೇಕ್ ಪ್ರಕಾಶ್

ಬೆಳ್ತಂಗಡಿ: ಒಂದೇ ದಿನ 3 ಕಡೆಗಳಲ್ಲಿ ಕಾಳಿಂಗ ಸರ್ಪವು ಪತ್ತೆಯಾಗಿದ್ದು ಕಳೆಂಜ ಗ್ರಾಮ ಕರ್ಮಾಜೆ ಶೌರ್ಯ ಸ್ವಯಂ ಸೇವಕರಾದ ಆನಂದ ಎಂಬವರ ಮನೆಯ ಬಾವಿಯಲ್ಲಿ, ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಳದ ಅರ್ಚಕರ ಮನೆಯಲ್ಲಿ, ಹಾಗೂ ಕೊಕ್ಕಡ ಪೊಟ್ಲಡ್ಕ ಎಂಬಲ್ಲಿ ಮನೆಯ ಅಟ್ಟದಲ್ಲಿ ಮಾ.3 ರಂದು ಕಾಳಿಂಗ ಸರ್ಪವು ಪತ್ತೆಯಾಗಿದ್ದು , ಧರ್ಮಸ್ಥಳದ ಸ್ನೇಕ್ ಪ್ರಕಾಶ್ ರವರು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು.

ಕಳೆಂಜ ಗ್ರಾಮ ಕರ್ಮಾಜೆಯಲ್ಲಿ ಮನೆಯ ಬಾವಿಯಲ್ಲಿ, ಕಾಳಿಂಗ ಸರ್ಪವನ್ನು ನೋಡಿ ನಿಡ್ಲೆ ಘಟಕದ ಸಂಯೋಜಕರಾದ ಗಿರೀಶ್ ಗೌಡ ರವರು ಸ್ನೇಕ್ ಪ್ರಕಾಶ್ ರಿಗೆ ಕರೆ ಮಾಡಿ ತಿಳಿಸಿದಾಗ ಕೂಡಲೇ ಸ್ಥಳಕ್ಕೆ ಧಾವಿಸಿ ಕಾಳಿಂಗ ಸರ್ಪ ಹಾವನ್ನು ಹಿಡಿದು ಕಾಡಿಗೆ ಬಿಡಲಾಯಿತು. ಈ ಸಂದರ್ಭ ಕಳೆಂಜ ಘಟಕದ ಸಂಯೋಜಕಿಯಾದ ಆಶಾಲತಾ ಇದ್ದರು.


ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಳದ ಅರ್ಚಕರ ಮನೆಯಲ್ಲಿ ಕಾಳಿಂಗ ಸರ್ಪವು ಕಂಡು ಬಂದಿದ್ದು ಕೂಡಲೇ ಕೊಕ್ಕಡದ ಕಮಲಾಕ್ಷ ಗೌಡರವರು ಸ್ನೇಕ್ ಪ್ರಕಾಶ್ ರವರಿಗೆ ತಡರಾತ್ರಿ 1 ಗಂಟೆಗೆ ಕರೆ ಮಾಡಿ ತಿಳಿಸಿದಾಗ , ಪಿ ಜೆ ಪಾಪಚನ್ ರವರ ಜೊತೆ ಸ್ಥಳಕ್ಕೆ ತೆರಳಿ ಹಾವುವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು.

Related posts

ವೇಣೂರು ಎಸ್‌.ಡಿ.ಎಂ. ಐಟಿಐ ನಲ್ಲಿ ಪದವಿ ಪ್ರದಾನ ಸಮಾರಂಭ

Suddi Udaya

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದಿಂದ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅವಹೇಳನ ಮತ್ತು ಅಪಪ್ರಚಾರ ಮಾಡುವವರ ವಿರುದ್ಧ ಜಾನ್ ಡೋ ಆದೇಶ

Suddi Udaya

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನಮ್ಮ ಮನೆ ಶಾಖೆಯ ವಾರ್ಷಿಕೋತ್ಸವ

Suddi Udaya

ಕಕ್ಯಪದವು ಎಲ್.ಸಿ.ಆರ್ ಪ.ಪೂ. ಕಾಲೇಜು: ವಾಣಿಜ್ಯ ವಿಭಾಗದಲ್ಲಿ 100% ಫಲಿತಾಂಶ

Suddi Udaya

ಬೌದ್ಧ ಮಹಾಸಭಾ ಮಾಲಾಡಿ ಇದರ ವತಿಯಿಂದ ಬುದ್ಧ ಪೂರ್ಣಿಮೆ ಆಚರಣೆ

Suddi Udaya

ಬೆಳ್ತಂಗಡಿ : ವಿಕಲಚೇತನ ವ್ಯಕ್ತಿಯನ್ನು ಮನೆಯವರು ಎತ್ತಿಕೊಂಡು ಮತಗಟ್ಟೆಗೆ ಹೋಗಿ ಮತ ಚಲಾವಣೆ

Suddi Udaya
error: Content is protected !!