September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ಒಂದೇ ದಿನ 3 ಕಡೆಗಳಲ್ಲಿ ಕಾಳಿಂಗ ಸರ್ಪ ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಧರ್ಮಸ್ಥಳದ ಸ್ನೇಕ್ ಪ್ರಕಾಶ್

ಬೆಳ್ತಂಗಡಿ: ಒಂದೇ ದಿನ 3 ಕಡೆಗಳಲ್ಲಿ ಕಾಳಿಂಗ ಸರ್ಪವು ಪತ್ತೆಯಾಗಿದ್ದು ಕಳೆಂಜ ಗ್ರಾಮ ಕರ್ಮಾಜೆ ಶೌರ್ಯ ಸ್ವಯಂ ಸೇವಕರಾದ ಆನಂದ ಎಂಬವರ ಮನೆಯ ಬಾವಿಯಲ್ಲಿ, ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಳದ ಅರ್ಚಕರ ಮನೆಯಲ್ಲಿ, ಹಾಗೂ ಕೊಕ್ಕಡ ಪೊಟ್ಲಡ್ಕ ಎಂಬಲ್ಲಿ ಮನೆಯ ಅಟ್ಟದಲ್ಲಿ ಮಾ.3 ರಂದು ಕಾಳಿಂಗ ಸರ್ಪವು ಪತ್ತೆಯಾಗಿದ್ದು , ಧರ್ಮಸ್ಥಳದ ಸ್ನೇಕ್ ಪ್ರಕಾಶ್ ರವರು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು.

ಕಳೆಂಜ ಗ್ರಾಮ ಕರ್ಮಾಜೆಯಲ್ಲಿ ಮನೆಯ ಬಾವಿಯಲ್ಲಿ, ಕಾಳಿಂಗ ಸರ್ಪವನ್ನು ನೋಡಿ ನಿಡ್ಲೆ ಘಟಕದ ಸಂಯೋಜಕರಾದ ಗಿರೀಶ್ ಗೌಡ ರವರು ಸ್ನೇಕ್ ಪ್ರಕಾಶ್ ರಿಗೆ ಕರೆ ಮಾಡಿ ತಿಳಿಸಿದಾಗ ಕೂಡಲೇ ಸ್ಥಳಕ್ಕೆ ಧಾವಿಸಿ ಕಾಳಿಂಗ ಸರ್ಪ ಹಾವನ್ನು ಹಿಡಿದು ಕಾಡಿಗೆ ಬಿಡಲಾಯಿತು. ಈ ಸಂದರ್ಭ ಕಳೆಂಜ ಘಟಕದ ಸಂಯೋಜಕಿಯಾದ ಆಶಾಲತಾ ಇದ್ದರು.


ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಳದ ಅರ್ಚಕರ ಮನೆಯಲ್ಲಿ ಕಾಳಿಂಗ ಸರ್ಪವು ಕಂಡು ಬಂದಿದ್ದು ಕೂಡಲೇ ಕೊಕ್ಕಡದ ಕಮಲಾಕ್ಷ ಗೌಡರವರು ಸ್ನೇಕ್ ಪ್ರಕಾಶ್ ರವರಿಗೆ ತಡರಾತ್ರಿ 1 ಗಂಟೆಗೆ ಕರೆ ಮಾಡಿ ತಿಳಿಸಿದಾಗ , ಪಿ ಜೆ ಪಾಪಚನ್ ರವರ ಜೊತೆ ಸ್ಥಳಕ್ಕೆ ತೆರಳಿ ಹಾವುವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು.

Related posts

ಸೇವಾ ನಿವೃತ್ತಿ ಅಂಗವಾಗಿ ಉಷಾ ವಿ. ರವರಿಗೆ ಬೀಳ್ಕೊಡುಗೆ

Suddi Udaya

ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ಮಣ್ಣಿನ ಹರಕೆ ಖ್ಯಾತಿಯ ಸುರ್ಯ ದೇವಸ್ಥಾನಕ್ಕೆ ಭೇಟಿ

Suddi Udaya

ಗೇರುಕಟ್ಟೆ: ಮನ್ಶರ್ ಕ್ಯಾಂಪಸ್ ನಲ್ಲಿ ನಡೆದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಭಾಗಿ

Suddi Udaya

ಎಸ್.ಡಿ.ಪಿ.ಐ ಕುವೆಟ್ಟು ಬ್ಲಾಕ್ ಸಮಿತಿ ವತಿಯಿಂದ ರಸ್ತೆ ದುರಸ್ಥಿಗೆ ಆಗ್ರಹಿಸಿ ಪ್ರತಿಭಟನೆ

Suddi Udaya

ಮೇಲಂತಬೆಟ್ಟು: ಬದಿನಡೆ ಶ್ರೀ ನಾಗಬ್ರಹ್ಮ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ-ಸಿರಿಕುಮಾರ ದರ್ಶನ ಮತ್ತು ದೈವಗಳ ನೇಮೋತ್ಸವ

Suddi Udaya

ಪುರುಷ ಮತ್ತು ಮಹಿಳಾ ವಿಭಾಗದ ನ್ಯಾಷನಲ್ ಚಾಂಪಿಯನ್ ಶಿಪ್ ಪಂದ್ಯಾಟ: ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!