ಬೆಳ್ತಂಗಡಿ: ಒಂದೇ ದಿನ 3 ಕಡೆಗಳಲ್ಲಿ ಕಾಳಿಂಗ ಸರ್ಪ ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಧರ್ಮಸ್ಥಳದ ಸ್ನೇಕ್ ಪ್ರಕಾಶ್

Suddi Udaya

ಬೆಳ್ತಂಗಡಿ: ಒಂದೇ ದಿನ 3 ಕಡೆಗಳಲ್ಲಿ ಕಾಳಿಂಗ ಸರ್ಪವು ಪತ್ತೆಯಾಗಿದ್ದು ಕಳೆಂಜ ಗ್ರಾಮ ಕರ್ಮಾಜೆ ಶೌರ್ಯ ಸ್ವಯಂ ಸೇವಕರಾದ ಆನಂದ ಎಂಬವರ ಮನೆಯ ಬಾವಿಯಲ್ಲಿ, ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಳದ ಅರ್ಚಕರ ಮನೆಯಲ್ಲಿ, ಹಾಗೂ ಕೊಕ್ಕಡ ಪೊಟ್ಲಡ್ಕ ಎಂಬಲ್ಲಿ ಮನೆಯ ಅಟ್ಟದಲ್ಲಿ ಮಾ.3 ರಂದು ಕಾಳಿಂಗ ಸರ್ಪವು ಪತ್ತೆಯಾಗಿದ್ದು , ಧರ್ಮಸ್ಥಳದ ಸ್ನೇಕ್ ಪ್ರಕಾಶ್ ರವರು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು.

ಕಳೆಂಜ ಗ್ರಾಮ ಕರ್ಮಾಜೆಯಲ್ಲಿ ಮನೆಯ ಬಾವಿಯಲ್ಲಿ, ಕಾಳಿಂಗ ಸರ್ಪವನ್ನು ನೋಡಿ ನಿಡ್ಲೆ ಘಟಕದ ಸಂಯೋಜಕರಾದ ಗಿರೀಶ್ ಗೌಡ ರವರು ಸ್ನೇಕ್ ಪ್ರಕಾಶ್ ರಿಗೆ ಕರೆ ಮಾಡಿ ತಿಳಿಸಿದಾಗ ಕೂಡಲೇ ಸ್ಥಳಕ್ಕೆ ಧಾವಿಸಿ ಕಾಳಿಂಗ ಸರ್ಪ ಹಾವನ್ನು ಹಿಡಿದು ಕಾಡಿಗೆ ಬಿಡಲಾಯಿತು. ಈ ಸಂದರ್ಭ ಕಳೆಂಜ ಘಟಕದ ಸಂಯೋಜಕಿಯಾದ ಆಶಾಲತಾ ಇದ್ದರು.


ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಳದ ಅರ್ಚಕರ ಮನೆಯಲ್ಲಿ ಕಾಳಿಂಗ ಸರ್ಪವು ಕಂಡು ಬಂದಿದ್ದು ಕೂಡಲೇ ಕೊಕ್ಕಡದ ಕಮಲಾಕ್ಷ ಗೌಡರವರು ಸ್ನೇಕ್ ಪ್ರಕಾಶ್ ರವರಿಗೆ ತಡರಾತ್ರಿ 1 ಗಂಟೆಗೆ ಕರೆ ಮಾಡಿ ತಿಳಿಸಿದಾಗ , ಪಿ ಜೆ ಪಾಪಚನ್ ರವರ ಜೊತೆ ಸ್ಥಳಕ್ಕೆ ತೆರಳಿ ಹಾವುವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು.

Leave a Comment

error: Content is protected !!