ಭೂಸೇನೆಯಲ್ಲಿ 30ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸುಬೇದಾರ್ ಮೇಜರ್ ಕೆ. ಪ್ರವೀಣ್ ಶೆಣೈ ರವರಿಗೆ ಬೆಳ್ತಂಗಡಿಯಲ್ಲಿ ಭವ್ಯ ಮೆರವಣಿಗೆ ಮೂಲಕ ಅಭಿವಂದನೆ

Suddi Udaya

Updated on:

ಬೆಳ್ತಂಗಡಿ : ಭೂಸೇನೆಯಲ್ಲಿ 30ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸುಬೇದಾರ್ ಮೇಜರ್ ಕೆ. ಪ್ರವೀಣ್ ಶೆಣೈ ರವರಿಗೆ ಮಾ.9ರಂದು ಬೆಳ್ತಂಗಡಿ ಯಲ್ಲಿ ಸಾರ್ವಜನಿಕ ಅಭಿವಂದನೆಯು ನಡೆಯಿತು.

ಸಂತೆಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಬೆಳ್ತಂಗಡಿ ಬಸ್ ನಿಲ್ದಾಣದವರೆಗೆ ಮೆರವಣಿಗೆಯ ಮೂಲಕ ಕರೆತಂದು ಗೌರವ ನೀಡಲಾಯಿತು.

ಸಮಾರಂಭದಲ್ಲಿ ಶಾಸಕ ಹರೀಶ್ ಪೂಂಜ, ನಿವೃತ್ತ ಮೇಜರ್ ಜನರಲ್ ಎಂ.ವಿ ಭಟ್, ರೋಟರಿ ಕ್ಲಬ್ ಅಧ್ಯಕ್ಷ ಮಚ್ಚಿಮಲೆ ಅನಂತ್ ಭಟ್, ಮಂಜುಶ್ರೀ ಸೀನಿಯರ್ ಛೇಬರ್ ಅಧ್ಯಕ್ಷ ಪೃಥ್ವಿ ರಂಜನ್ ರಾವ್, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಸುನೀಲ್ ಶೆಣೈ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದರು.

Leave a Comment

error: Content is protected !!