ಗೋವಿಂದೂರು ಗುಡ್ಡಕ್ಕೆ ಬಿದ್ದ ಬೆಂಕಿ : ಗ್ರಾ.ಪಂ ಸದಸ್ಯ ಲತೀಫ್‌ರ ಸಮಯ ಪ್ರಜ್ಞೆ

Suddi Udaya

ಬೆಳ್ತಂಗಡಿ: ತಾಲ್ಲೂಕಿನ ಕಳಿಯ ಗ್ರಾಮದ ಗೋವಿಂದೂರು ಎಂಬಲ್ಲಿ ಗುಡ್ಡಕ್ಕೆ ಬೆಂಕಿ ಬಿದ್ದ ಮಾಹಿತಿಯನ್ನು ಸ್ಥಳೀಯರು ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಲತೀಫ್ ಪರಿಮ ರವರಿಗೆ ತಿಳಿಸಿದರು.ಕೂಡಲೇ ಇನ್ನೋರ್ವ ಗ್ರಾಮ ಪಂಚಾಯತ್ ಸದಸ್ಯರಾದ ಕರೀಮ್ ಗೇರುಕಟ್ಟೆ ರವರು ಅಗ್ನಿಶಾಮಕ ದಳದವರನ್ನು ಸಂಪರ್ಕಿಸಿ ಅಲ್ಲಿಗೆ ಕಳಿಸಿದರು.

ಸ್ಥಳದಲ್ಲಿ ಬೆಂಕಿ ನಂದಿಸಲು ಅಗ್ನಿಶಾಮಕ ದಳದವರೊಂದಿಗೆ ಲತೀಫ್ ಪರಿಮ ನೇತೃತ್ವದಲ್ಲಿ ಆದರ್ಶ್ ಕೊರೆಯ,ಸಂತೋಷ್ ಮೋರಾಸ್,ಅಝೀಝ್, ಇರ್ಫಾನ್,ಅಬ್ದುಲ್ ರಹಿಮಾನ್,ಸದ್ದಾಂ,ಫಾರೂಕ್, ಇತರರು ಸಹಕರಿಸಿದರು. ಕೂಡಲೇ ಬೆಂಕಿ ನಂದಿಸಲು ವ್ಯವಸ್ಥೆ ಮಾಡಿದ ಲತೀಫ್ ರವರನ್ನು ಊರವರು ಪ್ರಶಂಸಿದರು.

Leave a Comment

error: Content is protected !!