September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶಿಬರಾಜೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

ಕಳೆಜ: ಇಲ್ಲಿಯ ಶಿಬರಾಜೆ ಅಂಗನವಾಡಿ ಕೇಂದ್ರದಲ್ಲಿ ನ.27 ರಂದು ಮಕ್ಕಳ ದಿನಾಚರಣೆ ಕಾರ್ಯಕ್ರಮವು ಗ್ರಾಮಾಭ್ಯುದಯ ಕಾರ್‍ಯಕ್ರಮ ಅನುಷ್ಠಾನ ಸಮಿತಿ ಶಿಬರಾಜೆ, ಪಾದೆ ಕಛೇರಿಯ ಮುಂಭಾಗದಲ್ಲಿ ನಡೆಸಲಾಯಿತು.

ಕಾರ್‍ಯಕ್ರಮ ಅಧ್ಯಕ್ಷರಾಗಿ ಅಂಗನವಾಡಿಯ ಪುಟಾಣಿ ವೈಷ್ಣವಿ ವಹಿಸಿದ್ದರು. ಶಾಲಾ ಮಕ್ಕಳು ದೀಪ ಬೆಳಗಿಸಿ ಕಾರ್‍ಯಕ್ರಮಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಕಳೆಂಜ ಗ್ರಾ.ಪಂ. ಸದಸ್ಯರಾದ ಟಿ.ಎಸ್ ನಿತ್ಯಾನಂದ ರೈ, ಪ್ರೇಮಾ ಬಿ.ಎಸ್, ಗ್ರಾಮಾಭ್ಯುದಯ ಕಾರ್‍ಯಕ್ರಮ ಅನುಷ್ಠಾನ ಸಮಿತಿಯ ಅಧ್ಯಕ್ಷ ಪಿ.ಟಿ ಸಬಾಸ್ಟಿನ್ , ಶಾಲೆತ್ತಡ್ಕ ಶಾಲೆಯ ಹೆಚ್.ಎಮ್ ಶ್ರೀಮತಿ ರತ್ನಾ , ಸಿಹೆಚ್.ಒ ನಿಖಿತಾ, ಮಾಜಿ ಅಂಗನವಾಡಿ ಕಾರ್‍ಯಕರ್ತೆ ಪಿ.ಟಿ ಏಲಿಯಮ್ಮ , ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಪ್ರತಿಮಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹರೀಶ್ ಒಳಗುಡ್ಡೆರವರು ಅಂಗನವಾಡಿಗೆ ಹೂವಿನ ಗಿಡಗಳನ್ನು ಕೊಡುಗೆಯಾಗಿ ನೀಡಿದರು.

ಮಕ್ಕಳ ಆಟೋಟ, ಸಾಂಸ್ಕೃತಿಕ ಚಟುವಟಿಕೆಯ ಬಹುಮಾನವನ್ನು ವಿತರಿಸಲಾಯಿತು.ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್‍ಯಕ್ರಮ ನೆರವೇರಿತು. ಅಂಗನವಾಡಿ ಕಾರ್‍ಯಕರ್ತೆ ಶ್ರೀಮತಿ ಪ್ರಿಯಾ ಕಾರ್‍ಯಕ್ರಮ ನಿರೂಪಿಸಿದರು. ಸಹಾಯಕಿ ಅನ್ನಿಲ್ಲಾ ರೋಶ್ನಿ ವಂದಿಸಿದರು. ಮಕ್ಕಳ ಫೋಷಕರು ಹಾಗೂ ಊರಿನ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಪಟ್ಟಣದಲ್ಲಿ ನಿಲ್ಲದ ಚಿರತೆ ಹಾವಳಿ: ದಾಳಿಗೆ ಸುದೆಮುಗೇರುವಿನಲ್ಲಿ ನಾಯಿ ಬಲಿ

Suddi Udaya

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ವಿಶ್ವ ಯೋಗ ದಿನಾಚರಣೆ

Suddi Udaya

ಕೊಕ್ಕಡ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಸಮುದಾಯ ಭವನಕ್ಕೆ ಶಿಲಾನ್ಯಾಸ

Suddi Udaya

ಗುಂಡೂರಿ: ಬ್ರಹ್ಮೋಪದೇಶದ ಪ್ರಯುಕ್ತ ಸೇವಾಶ್ರಮದಲ್ಲಿ ಆಶ್ರಮ‌ವಾಸಿಗಳಿಗೆ ಉಟೋಪಚಾರ, ಪ್ರತಿಭಾವಂತ ವಿದ್ಯಾರ್ಥಿನಿಗೆ ಗೌರವ ಧನ ವಿತರಣೆ

Suddi Udaya

ಎಲ್.ಸಿ. ಆರ್. ಇಂಡಿಯನ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಗೆ ಆಯ್ಕೆ

Suddi Udaya

ಬೆಳ್ತಂಗಡಿ ಸ.ಪ್ರಥಮ ದರ್ಜೆ ಕಾಲೇಜಿನಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ

Suddi Udaya
error: Content is protected !!