ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿ

ನಾಲ್ಕೂರು ಇಕೋ ಫಾರ್ಮ್ ನಲ್ಲಿ ಪುರಾತನ ಕಾಲದ ನಾಗ ಕಲ್ಲುಗಳು ಪತ್ತೆ

ಬಳಂಜ: ಮಣ್ಣಿನ ಒಳಗೆ ಹೋಗಿದ್ದ ಪುರಾತನ ಕಾಲದ ನಾಗದೇವರ ವಿಗ್ರಹ ಬೆಳ್ತಂಗಡಿ ತಾಲೂಕಿನ ನಾಲ್ಕೂರು ಗ್ರಾಮದಲ್ಲಿ ಪತ್ತೆಯಾಗಿದೆ.

ಉದ್ಯಮಿ ರಾಕೇಶ್ ಹೆಗ್ಡೆ ಬಳಂಜ ಅವರು ತನ್ನ ಇಕೋ ಫಾರ್ಮ್ ನಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೆಡುತ್ತಿದ್ದು ನಿರಂತರ ಕೃಷಿ ಕೆಲಸ ಕಾರ್ಯಗಳು ನಡೆಯುತ್ತಿದೆ. ಜೆಸಿಬಿ ಮೂಲಕ ಮಣ್ಣು ಅಗೆಯುವ ಸಂದರ್ಭದಲ್ಲಿ ಪುರಾತನ ಕಾಲದ ನಾಗ ಕಲ್ಲುಗಳು ಸಿಕ್ಕಿರುವುದರಿಂದ ಜನರಲ್ಲಿ ಭಯ,ಭಕ್ತಿಯ ವಾತಾವರಣ ಸೃಷ್ಟಿಯಾಗಿದೆ.

ಈ ನಾಗ ಕಲ್ಲುಗಳು ಸಿಕ್ಕಿದ ಪ್ರದೇಶಕ್ಕೆ ರಾಕೇಶ್ ಹೆಗ್ಡೆಯವರು ಜ್ಯೋತಿಷ್ಯರನ್ನು ಕರೆ ತಂದಾಗ ಈ ಕಲ್ಲುಗಳು ಸುಮಾರು 400 ವರ್ಷಗಳ ಹಿಂದಿನ ಕಾಲದವು ಎಂದು ತಿಳಿಸಿದರು.

ನಮ್ಮ ಇಕೋ ಫಾರ್ಮ್ ನಲ್ಲಿ ನಾಗಬನವಿರುವುದರಿಂದ ಬರುವ ಬುಧವಾರ ನಾಗದೇವರಿಗೆ ಪೂಜೆಗಳು ನಡೆಯಲಿದ್ದು ಇದೀಗ ಮಣ್ಣು ಅಗೆಯುವಾಗ ನಾಗ ಕಲ್ಲು ಸಿಕ್ಕಿರುವುದು ನಮಗೆ ಅಚ್ಚರಿ, ಭಯ, ಭಕ್ತಿ ಮೂಡಿಸಿದೆ ಎಂದು ರಾಕೇಶ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಘಟಕದ ಸದಸ್ಯರುಗಳಿಗೆ ತರಬೇತಿ ಕಾರ್ಯಾಗಾರ

Suddi Udaya

ಬೆಳಾಲು ಮಹಾಶಕ್ತಿ ಕೇಂದ್ರದ ಯುವ ಚೌಪಾಲ್ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಮಹಿಳಾ ವೃಂದದಲ್ಲಿ ಝೇಂಕಾರ ಬೇಸಿಗೆ ಶಿಬಿರದ ಉದ್ಘಾಟನೆ

Suddi Udaya

ಬೆಳ್ತಂಗಡಿ ತಹಶೀಲ್ದಾರ್ ಟಿ.ಸುರೇಶ್ ಕುಮಾರ್ ವರ್ಗಾವಣೆ

Suddi Udaya

ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Suddi Udaya
error: Content is protected !!