ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ರಚನೆ

Suddi Udaya

Updated on:

ಬೆಳ್ತಂಗಡಿ:ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ರಚನೆಯು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಗೌರವ ಸಲಹೆಗಾರರಾಗಿ ಬೆಳ್ತಂಗಡಿಯಲ್ಲಿ ಹಲವಾರು ದೇವಸ್ಥಾನದ ಬ್ರಹ್ಮಕಲಶೋತ್ಸವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶಾಸಕರಾದ ಹರೀಶ್ ಪೂಂಜ, ಅಧ್ಯಕ್ಷರಾಗಿ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ‌.ಪದ್ಮಪ್ರಸಾದ್ ಅಜಿಲರು, ಕಾರ್ಯದಕ್ಷರಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಯುವ ನಾಯಕ ಲ| ನಿತ್ಯಾನಂದ ಎನ್ ನಾವರ ಯೋಗಕ್ಷೇಮ, ಪ್ರಧಾನ ಕಾರ್ಯದರ್ಶಿಯಾಗಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಯುವ ಮುಂದಾಳು ಸಂತೋಷ್ ಕುಮಾರ್ ಕಾಪಿನಡ್ಕ ಹಾಗೂ ಕೋಶಾಧಿಕಾರಿಯಾಗಿ ಸೋಮನಾಥ್ ರಾಜಪಾದೆ ಆಯ್ಕೆಯಾಗಿದ್ದಾರೆ.

ಸಮಿತಿ ಉಪಾಧ್ಯಕ್ಷರಾಗಿ ನಿತ್ಯಾನಂದ ಶೆಟ್ಟಿ ನೊಚ್ಚ,ರಾಕೇಶ್ ಹೆಗ್ಡೆ ಬಳಂಜ,ನವೀನ್ ಕೆ ಸಾಮಾನಿ ಕರಂಬಾರು, ಸದಾನಂದ ಪೂಜಾರಿ ಉಂಗೀಲಬೈಲು, ಸುರೇಶ್ ಶೆಟ್ಟಿ ಕುರೆಲ್ಯ ನಾಲ್ಕೂರು, ಹೇಮಂತ್ ತೆಂಕಕಾರಂದೂರು, ಸುಂದರ ಶೆಟ್ಟಿ ಸುಲ್ಕೇರಿ,ಉಮೇಶ್ ದುಗ್ಗಲಚ್ಚಿಲ್ ಪಿಲ್ಯ,ಆನಂದ ಸಾಲಿಯಾನ್ ಓಡಿಮಾರು,ಶುಭಕರ ಪೂಜಾರಿ ಕುದ್ಯಾಡಿ,ವೀರೇಂದ್ರ ಕುಮಾರ್ ರಾಜಪಾದೆ ಹಾಗೂ ಜೊತೆ ಕಾರ್ಯದರ್ಶಿಯಾಗಿ ಪ್ರಶಾಂತ್ ಹಿಮರಡ್ಡ ನಾವರ ಆಯ್ಕೆಯಾಗಿದ್ದಾರೆ. ವಿವಿಧ ಸಮಿತಿಗಳನ್ನು ಇಗಾಗಲೇ ರಚಿಸಲಾಗಿದೆ.

ನಾವರ ಶ್ರೀ ಮಹಾಲಿಂಗೇಶ್ವರ ದೇಗುಲದ ಬ್ರಹ್ಮಕಲಶೋತ್ಸವವು ಮಾ.31 ರಿಂದ ಎ. 04 ರವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ನೊಚ್ಚ ತಿಳಿಸಿದರು.

Leave a Comment

error: Content is protected !!