ನಾವೂರು: ಕುಂಬಾರ ಸ್ವಜಾತಿ ಬಾಂಧವರ ಮುಕ್ತ ಕಬಡ್ಡಿ ಪಂದ್ಯಾಟ

Suddi Udaya

ನಾವೂರು : ಧರ್ಮಶ್ರೀ ಕುಂಬಾರರ ಸೇವಾ ಸಂಘದ ಹಾಗೂ ತಾಲೂಕು ಕಬಡ್ಡಿ ಅಮೆಚೂರ್ ಅಸೋಸಿಯೇಶನ್ ಇದರ ವತಿಯಿಂದ ಕುಂಬಾರ ಸ್ವಜಾತಿ ಬಾಂಧವರ ಪ್ರೊ ಮಾದರಿಯ ಮುಕ್ತ ಕಬಡ್ಡಿ ಪಂದ್ಯಾಟ ಮಾ.16 ರಂದು ನಾವೂರು ಹೊಡಿಕ್ಕಾರು ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಡಾ. ಪ್ರದೀಪ್ ನಾವೂರು ಉದ್ಘಾಟಿಸಿ, ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಪದ್ಮಕುಮಾರ್ ಹೆಚ್, ಹರೀಶ್ ಸಾಲಿಯಾನ್ ಮೋರ್ತಾಜೆ ಹಾಗೂ ಕುಂಬಾರ ಬಾಂಧವರ ಪ್ರಮುಖರು ಉಪಸ್ಥಿತರಿದ್ದರು.

ಸುಮಾರು 34 ತಂಡಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಧರ್ಣಪ್ಪ ಮೂಲ್ಯ , ದಯಾನಂದ ಕುಲಾಲ್ ಬೆಳ್ತಂಗಡಿ, ಸಂಜೀವ ಎನ್ ಹಾಜರಿದ್ದರು.

ಧರ್ಮಶ್ರೀ ನಾವೂರು ಪ್ರಥಮ, ಕಕ್ಕಿಂಜೆ ದ್ವಿತೀಯ, ಕಡಬ ತೃತೀಯ, ಉಜಿರೆ ಚತುರ್ಥ ಸ್ಥಾನವನ್ನು ಪಡೆಯಿತು. ಕ್ವಾಟರ್ ಫೈನಲ್ ಎಂಟ್ರಿ ಪಡೆದ ಎಲ್ಲಾ ತಂಡಗಳಿಗೆ ಸ್ಮರಣಿಕೆ ನೀಡಲಾಯಿತು.

Leave a Comment

error: Content is protected !!