April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ‌ ದೇವಸ್ಥಾನದ ವಾರ್ಷಿಕ ‌ಜಾತ್ರೆ: ದೀಕ್ಷಿತ್ ಅರಂತೊಟ್ಟು ಇವರ ‘ಡಿಲೈಟ್ ಡೆಕೋರೇಷನ್ಸ್’ ಉದ್ಘಾಟನೆ

ಕೊಯ್ಯೂರು : ಶ್ರೀ ಪಂಚದುರ್ಗಾಪರಮೇಶ್ವರಿ‌ ದೇವಸ್ಥಾನ ಕೊಯ್ಯೂರು ಇದರ ವಾರ್ಷಿಕ ‌ಜಾತ್ರಾ ಮಹೋತ್ಸವದಂದು ಅರಂತೊಟ್ಟು ಕಟ್ಟೆಪೂಜೆಯನ್ನು ನೆರವೇರಿಸಲಾಯಿತು.

ಮೂಲಗುಂಡದಿಂದ‌ ಭಂಡಾರದ ಆಗಮನದ ಸಂದರ್ಭ ಸಂದೇಶ್ ಮದ್ದಡ್ಕ ಇವರ ನೇತೃತ್ವದಲ್ಲಿ ಸುಮಾರು 10 ಭಜನಾ ತಂಡಗಳಿಂದ ಭಜನಾ ‌ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ದೀಕ್ಷಿತ್ ಅರಂತೊಟ್ಟು ಇವರ ಡಿಲೈಟ್ ಡೆಕೋರೇಷನ್ಸ್ (Delight Decorations) ನ್ನು ದ್ವಾರಕಾ ಡ್ರೈವಿಂಗ್ ಸ್ಕೂಲ್ ‌ಮಾಲಕರಾದ ಯಶವಂತ ಆರ್ ಬಾಳಿಗಾ ಉದ್ಘಾಟಿಸಿದರು.

ಈ ವೇಳೆ ಅರಂತೊಟ್ಟು ‌ಕುಟುಂಬಸ್ಥರ ವತಿಯಿಂದ ‌ಬೆಳ್ತಂಗಡಿ‌ ತಾಲೂಕಿನ ‌ಹೆಸರಾಂತ ಸ್ನೇಕ್‌‌ಮಾಸ್ಟರ್ ಅಶೋಕ್‌‌ಕುಮಾರ್ ಲಾಯಿಲ ಹಾಗೂ ಚಂದ್ರಶೇಖರ ‌ಗೌಡ ಮಾವಿನಕಟ್ಟೆ ಇವರಿಗೆ ಸನ್ಮಾನವನ್ನು ಯಶವಂತ ಬಾಳಿಗಾ ಹಾಗೂ ಪ್ರವೀಣ್ ಗೌಡ ನೆರವೇರಿಸಿದರು.

ಈ‌‌ ಸಂದರ್ಭದಲ್ಲಿ ಹಿತೇಶ್ ಬಳ್ಳಾಲ್ ಕೊಯ್ಯೂರು ಗುತ್ತು, ತೃಪ್ತ ಜೈನ್‌ ಉಣಿಲೆ ಗುತ್ತು, ಯಶವಂತ ಬಾಳಿಗಾ ಬೆಳ್ತಂಗಡಿ, ಪ್ರವೀಣ್ ಗೌಡ ಮಾವಿನಕಟ್ಟೆ ಹಾಗೂ ಅರಂತೊಟ್ಟು ‌ಕುಟುಂಬಸ್ಥರು ಮತ್ತು ಭಕ್ತಾದಿಗಳು ಊರ ಪರವೂರ‌ ಗಣ್ಯರು ಉಪಸ್ಥಿತರಿದ್ದರು.

Related posts

ನಡ ಸರಕಾರಿ ಪ್ರೌಢಶಾಲೆಗೆ ಕ್ರೀಡಾ ಸಮವಸ್ತ್ರ ಕೊಡುಗೆ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆ

Suddi Udaya

ಧರ್ಮಸ್ಥಳ: ದೊಂಡೋಲೆ ಪರಶುರಾಮ ದೇವಸ್ಥಾನಕ್ಕೆ ಮುಖ್ಯಮಂತ್ರಿಯವರ ಕಾರ್ಯದರ್ಶಿ ಗೋಪಾಲ್ ಪಿ. ಎ ಭೇಟಿ

Suddi Udaya

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಕೇಳದಪೇಟೆ ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಕೊಕ್ಕಡ: ಹಿಂದೂ ಜಾಗರಣ ವೇದಿಕೆ ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಕೊಕ್ಕಡ ಘಟಕ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ

Suddi Udaya

ಶಿಲಾ೯ಲು ಗ್ರಾಮ ಸಭೆಯಲ್ಲಿ ಹೊಡೆದಾಟ: ಇತ್ತಂಡಗಳಿಂದ ವೇಣೂರು ಪೊಲೀಸರಿಗೆ ದೂರು – ಪ್ರಕರಣ ದಾಖಲು

Suddi Udaya
error: Content is protected !!