25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ‌ ದೇವಸ್ಥಾನದ ವಾರ್ಷಿಕ ‌ಜಾತ್ರೆ: ದೀಕ್ಷಿತ್ ಅರಂತೊಟ್ಟು ಇವರ ‘ಡಿಲೈಟ್ ಡೆಕೋರೇಷನ್ಸ್’ ಉದ್ಘಾಟನೆ

ಕೊಯ್ಯೂರು : ಶ್ರೀ ಪಂಚದುರ್ಗಾಪರಮೇಶ್ವರಿ‌ ದೇವಸ್ಥಾನ ಕೊಯ್ಯೂರು ಇದರ ವಾರ್ಷಿಕ ‌ಜಾತ್ರಾ ಮಹೋತ್ಸವದಂದು ಅರಂತೊಟ್ಟು ಕಟ್ಟೆಪೂಜೆಯನ್ನು ನೆರವೇರಿಸಲಾಯಿತು.

ಮೂಲಗುಂಡದಿಂದ‌ ಭಂಡಾರದ ಆಗಮನದ ಸಂದರ್ಭ ಸಂದೇಶ್ ಮದ್ದಡ್ಕ ಇವರ ನೇತೃತ್ವದಲ್ಲಿ ಸುಮಾರು 10 ಭಜನಾ ತಂಡಗಳಿಂದ ಭಜನಾ ‌ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ದೀಕ್ಷಿತ್ ಅರಂತೊಟ್ಟು ಇವರ ಡಿಲೈಟ್ ಡೆಕೋರೇಷನ್ಸ್ (Delight Decorations) ನ್ನು ದ್ವಾರಕಾ ಡ್ರೈವಿಂಗ್ ಸ್ಕೂಲ್ ‌ಮಾಲಕರಾದ ಯಶವಂತ ಆರ್ ಬಾಳಿಗಾ ಉದ್ಘಾಟಿಸಿದರು.

ಈ ವೇಳೆ ಅರಂತೊಟ್ಟು ‌ಕುಟುಂಬಸ್ಥರ ವತಿಯಿಂದ ‌ಬೆಳ್ತಂಗಡಿ‌ ತಾಲೂಕಿನ ‌ಹೆಸರಾಂತ ಸ್ನೇಕ್‌‌ಮಾಸ್ಟರ್ ಅಶೋಕ್‌‌ಕುಮಾರ್ ಲಾಯಿಲ ಹಾಗೂ ಚಂದ್ರಶೇಖರ ‌ಗೌಡ ಮಾವಿನಕಟ್ಟೆ ಇವರಿಗೆ ಸನ್ಮಾನವನ್ನು ಯಶವಂತ ಬಾಳಿಗಾ ಹಾಗೂ ಪ್ರವೀಣ್ ಗೌಡ ನೆರವೇರಿಸಿದರು.

ಈ‌‌ ಸಂದರ್ಭದಲ್ಲಿ ಹಿತೇಶ್ ಬಳ್ಳಾಲ್ ಕೊಯ್ಯೂರು ಗುತ್ತು, ತೃಪ್ತ ಜೈನ್‌ ಉಣಿಲೆ ಗುತ್ತು, ಯಶವಂತ ಬಾಳಿಗಾ ಬೆಳ್ತಂಗಡಿ, ಪ್ರವೀಣ್ ಗೌಡ ಮಾವಿನಕಟ್ಟೆ ಹಾಗೂ ಅರಂತೊಟ್ಟು ‌ಕುಟುಂಬಸ್ಥರು ಮತ್ತು ಭಕ್ತಾದಿಗಳು ಊರ ಪರವೂರ‌ ಗಣ್ಯರು ಉಪಸ್ಥಿತರಿದ್ದರು.

Related posts

ಬಂಗೇರರು ನಡೆದ ದಾರಿಯಲ್ಲಿ ನಾವೆಲ್ಲರೂ ಸಾಗುವ ಮೂಲಕ ಅವರಿಗೆ ನಿಜವಾದ ಶ್ರದ್ದಾಂಜಲಿ ಸಲ್ಲಿಸೋಣ……

Suddi Udaya

ಪಾಲೇದು ಸ.ಹಿ.ಪ್ರಾ.ಶಾಲೆಯ ಕೊಠಡಿ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

Suddi Udaya

ಎ.13-22: ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ: ಎ.25 : ಭದ್ರಕಾಳಿ ದೇವಿಯ ಪ್ರತಿಷ್ಠಾ ಮಹೋತ್ಸವ

Suddi Udaya

ಹತ್ಯಡ್ಕ ಅರಿಕೆಗುಡ್ಡೆ ವನದುರ್ಗ ದೇವಿ ಕ್ಷೇತ್ರಕ್ಕೆ ಸೋಲಾರ್ ಅಳವಡಿಸಲು ಕೆನರಾ ಬ್ಯಾಂಕಿನಿಂದ ರೂ 2 ಲಕ್ಷ ಮಂಜೂರು

Suddi Udaya

ದ.ಕ ಜಿ.ಪಂ. ನೂತನ ಸಿಇಒ ವಿನಾಯಕ್ ಕರ್ತವ್ಯಕ್ಕೆ ಹಾಜರು

Suddi Udaya

ಸವಣಾಲು, ಶಿರ್ಲಾಲು-ಕರಂಬಾರು ಗ್ರಾಮಗಳ ಪ.ಜಾತಿ ಕಾಲೋನಿಗಳಲ್ಲಿ ಸಾಮರಸ್ಯದ ಸಂಕ್ರಾತಿ ಹಬ್ಬ ಆಚರಣೆ

Suddi Udaya
error: Content is protected !!