July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ‌ ದೇವಸ್ಥಾನದ ವಾರ್ಷಿಕ ‌ಜಾತ್ರೆ: ದೀಕ್ಷಿತ್ ಅರಂತೊಟ್ಟು ಇವರ ‘ಡಿಲೈಟ್ ಡೆಕೋರೇಷನ್ಸ್’ ಉದ್ಘಾಟನೆ

ಕೊಯ್ಯೂರು : ಶ್ರೀ ಪಂಚದುರ್ಗಾಪರಮೇಶ್ವರಿ‌ ದೇವಸ್ಥಾನ ಕೊಯ್ಯೂರು ಇದರ ವಾರ್ಷಿಕ ‌ಜಾತ್ರಾ ಮಹೋತ್ಸವದಂದು ಅರಂತೊಟ್ಟು ಕಟ್ಟೆಪೂಜೆಯನ್ನು ನೆರವೇರಿಸಲಾಯಿತು.

ಮೂಲಗುಂಡದಿಂದ‌ ಭಂಡಾರದ ಆಗಮನದ ಸಂದರ್ಭ ಸಂದೇಶ್ ಮದ್ದಡ್ಕ ಇವರ ನೇತೃತ್ವದಲ್ಲಿ ಸುಮಾರು 10 ಭಜನಾ ತಂಡಗಳಿಂದ ಭಜನಾ ‌ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ದೀಕ್ಷಿತ್ ಅರಂತೊಟ್ಟು ಇವರ ಡಿಲೈಟ್ ಡೆಕೋರೇಷನ್ಸ್ (Delight Decorations) ನ್ನು ದ್ವಾರಕಾ ಡ್ರೈವಿಂಗ್ ಸ್ಕೂಲ್ ‌ಮಾಲಕರಾದ ಯಶವಂತ ಆರ್ ಬಾಳಿಗಾ ಉದ್ಘಾಟಿಸಿದರು.

ಈ ವೇಳೆ ಅರಂತೊಟ್ಟು ‌ಕುಟುಂಬಸ್ಥರ ವತಿಯಿಂದ ‌ಬೆಳ್ತಂಗಡಿ‌ ತಾಲೂಕಿನ ‌ಹೆಸರಾಂತ ಸ್ನೇಕ್‌‌ಮಾಸ್ಟರ್ ಅಶೋಕ್‌‌ಕುಮಾರ್ ಲಾಯಿಲ ಹಾಗೂ ಚಂದ್ರಶೇಖರ ‌ಗೌಡ ಮಾವಿನಕಟ್ಟೆ ಇವರಿಗೆ ಸನ್ಮಾನವನ್ನು ಯಶವಂತ ಬಾಳಿಗಾ ಹಾಗೂ ಪ್ರವೀಣ್ ಗೌಡ ನೆರವೇರಿಸಿದರು.

ಈ‌‌ ಸಂದರ್ಭದಲ್ಲಿ ಹಿತೇಶ್ ಬಳ್ಳಾಲ್ ಕೊಯ್ಯೂರು ಗುತ್ತು, ತೃಪ್ತ ಜೈನ್‌ ಉಣಿಲೆ ಗುತ್ತು, ಯಶವಂತ ಬಾಳಿಗಾ ಬೆಳ್ತಂಗಡಿ, ಪ್ರವೀಣ್ ಗೌಡ ಮಾವಿನಕಟ್ಟೆ ಹಾಗೂ ಅರಂತೊಟ್ಟು ‌ಕುಟುಂಬಸ್ಥರು ಮತ್ತು ಭಕ್ತಾದಿಗಳು ಊರ ಪರವೂರ‌ ಗಣ್ಯರು ಉಪಸ್ಥಿತರಿದ್ದರು.

Related posts

ಎ.30: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನಿಂದ 15ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭ:

Suddi Udaya

ಗೇರುಕಟ್ಟೆ ಸಮೀಪದ ಪರಪ್ಪು ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ದರ್ಗಾ ಶರೀಫ್ ನ ವರ್ಷಂಪ್ರತಿ ನಡೆಯುವ ಉರೂಸ್ ಸಮಾರಂಭದ ಪೋಸ್ಟರ್ ಬಿಡುಗಡೆ

Suddi Udaya

ಸುಲ್ಕೇರಿ ಗ್ರಾ.ಪಂ. ನಲ್ಲಿ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ

Suddi Udaya

ಶಿಶಿಲ : ಕಂಚಿನಡ್ಕದಲ್ಲಿ ತೋಟಕ್ಕೆ ನುಗ್ಗಿದ್ದ ಕಾಡಾನೆ: ಅಪಾರ ಕೃಷಿ ಹಾನಿ

Suddi Udaya

ವರ್ಷ ಕಳೆದರೂ ಇನ್ನೂ ಜನರಿಗೆ ಉಪಯೋಗಕಿಲ್ಲದ ಮಚ್ಚಿನ ಶುದ್ಧ ಕುಡಿಯುವ ನೀರಿನ ಘಟಕ: ತುಕ್ಕು ಹಿಡಿಯುತ್ತಿರುವ ಮಿಷನರಿಗಳು

Suddi Udaya

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಸಿರುವಾಣಿ ಹೊರೆಕಾಣಿಕೆ ಮತ್ತು ದೈವ-ದೇವರ ಆಭರಣಗಳ ವೈಭವಯುತ ಮೆರವಣಿಗೆ ಶಾಸಕ ಹರೀಶ್ ಪೂಂಜರವರಿಂದ ಹಾಗೂ ಮುಂಬೈ ಉದ್ಯಮಿ ಸುರೇಶ್ ಪೂಜಾರಿಯವರಿಂದ ಚಾಲನೆ

Suddi Udaya
error: Content is protected !!