23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎ.10-19: ಉಜಿರೆ ಪ್ರಗತಿ ಮಹಿಳಾ ಮಂಡಲದಿಂದ ಮಕ್ಕಳ ಆಕರ್ಷಕ ಬೇಸಿಗೆ ಶಿಬಿರ “ಚಿಲಿಪಿಲಿ”

ಉಜಿರೆ : ಪ್ರಗತಿ ಮಹಿಳಾ ಮಂಡಲ ಉಜಿರೆ ಪ್ರಸ್ತುತಪಡಿಸುವ ಶ್ರೀಮತಿ ಭವ್ಯಶ್ರೀ ಕೀರ್ತಿರಾಜ್‌ ಇವರ ನೇತೃತ್ವದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಮಕ್ಕಳ ಆಕರ್ಷಕ ಬೇಸಿಗೆ ಶಿಬಿರ ಚಿಲಿಪಿಲಿ -2024 ಎ.10 ರಿಂದ 19 ರ ವರೆಗೆ ಉಜಿರೆ ಅನುಗ್ರಹ ಪ್ರೈಮರಿ ಶಾಲೆ ಸಭಾಂಗಣದಲ್ಲಿ ನಡೆಯಲಿದೆ.

ಬೆಳಿಗ್ಗೆ 9.30 ರಿಂದ ಸಂಜೆ 4.30ರವರೆಗೆ ಶಿಬಿರವು ನಡೆಯಲಿದ್ದು, 5ರಿಂದ 9 ವರ್ಷ, 10ರಿಂದ 16 ವರ್ಷ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದು.

ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಭವ್ಯ ಕೀರ್ತಿರಾಜ್ ರವರು ಬ್ಯಾಗ್, ಪೌಚ್ ತಯಾರಿ, ಫ್ರೆಡ್ ಆರ್ಟ್, ಆರ್ಟ್ ಮತ್ತು ಕ್ರಾಫ್ಟ್ ಮತ್ತು ಗೊಂಬೆ ತಯಾರಿ ಬಗ್ಗೆ, ಶ್ರೀಮತಿ ಚೇತನ ಉಜಿರೆ ರವರು ಕಸದಿಂದ ರಸ , ಶ್ರೀಮತಿ ಅನ್ನಪೂರ್ಣ ಉಜಿರೆ ರವರು ಆರ್ಟ್ ಮತ್ತು ಕ್ರಾಫ್ಟ್ , ಡಾ| ದೀಪಾಲಿ ಡೋಂಗ್ರೆ ರವರು ದಂತ ಮಾಹಿತಿ ಮತ್ತು ತಪಾಸಣೆ, ಶ್ರೀಮತಿ ರೇವತಿ ಉಜಿರೆ ರವರು ಯೋಗದ ಬಗ್ಗೆ, ಸತೀಶ್ ಕಾನತ್ತೂರು ಸುಳ್ಯ ರವರು ವ್ಯಂಗ್ಯ ಚಿತ್ರದ ಬಗ್ಗೆ , ಧರ್ಮೇಂದ್ರ ಪೂಜೆಹಿತ್ಲು ರವರು ದೈಹಿಕ ಸಧೃಡತೆ ಯ ಬಗ್ಗೆ, ಶ್ರೀರಾಮ್ ಉಜಿರೆ ರವರು ಕ್ಲೇ ಆರ್ಟ್ ಬಗ್ಗೆ, ಶ್ರೀಮತಿ ಅರುಣ ಶ್ರೀನಿವಾಸ್ ಉಜಿರೆ ರವರು ಕಥಾ, ಕಾವ್ಯ, ಕಮ್ಮಟದ ಬಗ್ಗೆ, ಸಹನ್ ಎಂ. ಎಸ್., ಹಿಪ್ ಬಾಯ್ಸ್ ಡ್ಯಾನ್ಸ್ ಕ್ರೀವ್ ಉಜಿರೆ ರವರು ನೃತ್ಯದ ಬಗ್ಗೆ, ಅಶ್ವತ್ ಎಸ್. ಪುತ್ತೂರು ರವರು ರಂಗಭೂಮಿಯ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ.

ಸಂಪರ್ಕಿಸಿ : 9731963325 / 8277141506

Related posts

ಕನಾ೯ಟಕ ದಲಿತ ಚಳುವಳಿಗೆ 50ರ ಸಂಭ್ರಮ: ಬೆಳ್ತಂಗಡಿಯಲ್ಲಿ ವಿವಿಧ ದಲಿತ ಸಂಘಟನೆಗಳ ಸಹಭಾಗಿತ್ವದಲ್ಲಿ ‘ಕನಾ೯ಟಕ ದಲಿತ ಚಳುವಳಿ 50ರ ಸಂಭ್ರಮ ಸಮಾವೇಶಕ್ಕೆ ಚಾಲನೆ; ದಲಿತ ಸಾಂಸ್ಕೃತಿಕ ವೈವಿಧ್ಯ ಕಾಯ೯ಕ್ರಮ

Suddi Udaya

ಗುರುವಾಯನಕೆರೆ ಶ್ರೀ ಕ್ಷೇ.ಧ.ಗ್ರಾ.ಯೋಜನೆಯಿಂದ ಸಹಾಯಧನ ಹಸ್ತಾಂತರ

Suddi Udaya

ಗಣೇಶ ಚತುರ್ಥಿಯ ರಜೆಯನ್ನು ಬದಲಾಯಿಸುವಂತೆ ಮನವಿ

Suddi Udaya

ಪಿಯುಸಿ ಫಲಿತಾಂಶ: ಪುತ್ತೂರಿನ ವಿವೇಕಾನಂದ ಪ.ಪೂ. ಕಾಲೇಜಿನ ವಿಜ್ಞಾನ ವಿಭಾಗದ ಅಭಿರಾಮ್ ವಿ. ಭಟ್ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್

Suddi Udaya

ಮದ್ದಡ್ಕ ಕಿನ್ನಿಗೋಳಿ ವರಕಬೆಯ ಬಳಿ ಹೂತು ಹೋದ ರಾಜ್ಯ ಹೆದ್ದಾರಿ ರಸ್ತೆ

Suddi Udaya

ಬೆಳ್ತಂಗಡಿ: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ವಿಶಾಲ್ ಹೆಗ್ಡೆ ಆಯ್ಕೆ

Suddi Udaya
error: Content is protected !!