23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎ.10-19: ಉಜಿರೆ ಪ್ರಗತಿ ಮಹಿಳಾ ಮಂಡಲದಿಂದ ಮಕ್ಕಳ ಆಕರ್ಷಕ ಬೇಸಿಗೆ ಶಿಬಿರ “ಚಿಲಿಪಿಲಿ”

ಉಜಿರೆ : ಪ್ರಗತಿ ಮಹಿಳಾ ಮಂಡಲ ಉಜಿರೆ ಪ್ರಸ್ತುತಪಡಿಸುವ ಶ್ರೀಮತಿ ಭವ್ಯಶ್ರೀ ಕೀರ್ತಿರಾಜ್‌ ಇವರ ನೇತೃತ್ವದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಮಕ್ಕಳ ಆಕರ್ಷಕ ಬೇಸಿಗೆ ಶಿಬಿರ ಚಿಲಿಪಿಲಿ -2024 ಎ.10 ರಿಂದ 19 ರ ವರೆಗೆ ಉಜಿರೆ ಅನುಗ್ರಹ ಪ್ರೈಮರಿ ಶಾಲೆ ಸಭಾಂಗಣದಲ್ಲಿ ನಡೆಯಲಿದೆ.

ಬೆಳಿಗ್ಗೆ 9.30 ರಿಂದ ಸಂಜೆ 4.30ರವರೆಗೆ ಶಿಬಿರವು ನಡೆಯಲಿದ್ದು, 5ರಿಂದ 9 ವರ್ಷ, 10ರಿಂದ 16 ವರ್ಷ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದು.

ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಭವ್ಯ ಕೀರ್ತಿರಾಜ್ ರವರು ಬ್ಯಾಗ್, ಪೌಚ್ ತಯಾರಿ, ಫ್ರೆಡ್ ಆರ್ಟ್, ಆರ್ಟ್ ಮತ್ತು ಕ್ರಾಫ್ಟ್ ಮತ್ತು ಗೊಂಬೆ ತಯಾರಿ ಬಗ್ಗೆ, ಶ್ರೀಮತಿ ಚೇತನ ಉಜಿರೆ ರವರು ಕಸದಿಂದ ರಸ , ಶ್ರೀಮತಿ ಅನ್ನಪೂರ್ಣ ಉಜಿರೆ ರವರು ಆರ್ಟ್ ಮತ್ತು ಕ್ರಾಫ್ಟ್ , ಡಾ| ದೀಪಾಲಿ ಡೋಂಗ್ರೆ ರವರು ದಂತ ಮಾಹಿತಿ ಮತ್ತು ತಪಾಸಣೆ, ಶ್ರೀಮತಿ ರೇವತಿ ಉಜಿರೆ ರವರು ಯೋಗದ ಬಗ್ಗೆ, ಸತೀಶ್ ಕಾನತ್ತೂರು ಸುಳ್ಯ ರವರು ವ್ಯಂಗ್ಯ ಚಿತ್ರದ ಬಗ್ಗೆ , ಧರ್ಮೇಂದ್ರ ಪೂಜೆಹಿತ್ಲು ರವರು ದೈಹಿಕ ಸಧೃಡತೆ ಯ ಬಗ್ಗೆ, ಶ್ರೀರಾಮ್ ಉಜಿರೆ ರವರು ಕ್ಲೇ ಆರ್ಟ್ ಬಗ್ಗೆ, ಶ್ರೀಮತಿ ಅರುಣ ಶ್ರೀನಿವಾಸ್ ಉಜಿರೆ ರವರು ಕಥಾ, ಕಾವ್ಯ, ಕಮ್ಮಟದ ಬಗ್ಗೆ, ಸಹನ್ ಎಂ. ಎಸ್., ಹಿಪ್ ಬಾಯ್ಸ್ ಡ್ಯಾನ್ಸ್ ಕ್ರೀವ್ ಉಜಿರೆ ರವರು ನೃತ್ಯದ ಬಗ್ಗೆ, ಅಶ್ವತ್ ಎಸ್. ಪುತ್ತೂರು ರವರು ರಂಗಭೂಮಿಯ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ.

ಸಂಪರ್ಕಿಸಿ : 9731963325 / 8277141506

Related posts

ಬಿಜೆಪಿ ತಣ್ಣೀರುಪoತ ಶಕ್ತಿಕೇಂದ್ರ ಪ್ರಮುಖ್ ಆಗಿ ಚೇತನ್ ಸುವರ್ಣ ಅಳಕ್ಕೆ ಆಯ್ಕೆ

Suddi Udaya

ಚಾರ್ಮಾಡಿ ಘಾಟಿ ಪರಿಸರದಲ್ಲಿ ಮತ್ತೆ ಒಂಟಿ ಸಲಗ ಪ್ರತ್ಯಕ್ಷ

Suddi Udaya

ಬೆಳ್ತಂಗಡಿ ಸಿಎ ಬ್ಯಾಂಕ್ ನ ನೂತನ ಮೀಟಿಂಗ್ ಹಾಲ್ ನವೀಕರಿಸಿ ಉದ್ಘಾಟನೆ; ಮಾಸಿಕ ಸಭೆ

Suddi Udaya

ಬೆಳ್ತಂಗಡಿ: ದೀಪಾ ಗೋಲ್ಡ್ ವ್ಯವಸ್ಥಾಪಕ ಪ್ರಸಾದ್ ಪೈ ಪಾಣೆಮಂಗಳೂರು ನಿಧನ

Suddi Udaya

ಗುರುವಾಯನಕೆರೆ ಶಕ್ತಿನಗರ ಜಂಕ್ಷನ್ ನಲ್ಲಿ ಸ್ಕೂಟರ್ ಗೆ ಲಾರಿ ಡಿಕ್ಕಿ : ಓರ್ವ ಮೃತ್ಯು,

Suddi Udaya

ಬಳಂಜ: ಬೊಳ್ಳಜ್ಜ ಕ್ಷೇತ್ರದಲ್ಲಿ ಸ್ವಾಮಿ ಬೊಳ್ಳಜ್ಜ ಸಮವಸ್ತ್ರ ಅನಾವರಣ

Suddi Udaya
error: Content is protected !!