24.4 C
ಪುತ್ತೂರು, ಬೆಳ್ತಂಗಡಿ
August 31, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎ.10-19: ಉಜಿರೆ ಪ್ರಗತಿ ಮಹಿಳಾ ಮಂಡಲದಿಂದ ಮಕ್ಕಳ ಆಕರ್ಷಕ ಬೇಸಿಗೆ ಶಿಬಿರ “ಚಿಲಿಪಿಲಿ”

ಉಜಿರೆ : ಪ್ರಗತಿ ಮಹಿಳಾ ಮಂಡಲ ಉಜಿರೆ ಪ್ರಸ್ತುತಪಡಿಸುವ ಶ್ರೀಮತಿ ಭವ್ಯಶ್ರೀ ಕೀರ್ತಿರಾಜ್‌ ಇವರ ನೇತೃತ್ವದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಮಕ್ಕಳ ಆಕರ್ಷಕ ಬೇಸಿಗೆ ಶಿಬಿರ ಚಿಲಿಪಿಲಿ -2024 ಎ.10 ರಿಂದ 19 ರ ವರೆಗೆ ಉಜಿರೆ ಅನುಗ್ರಹ ಪ್ರೈಮರಿ ಶಾಲೆ ಸಭಾಂಗಣದಲ್ಲಿ ನಡೆಯಲಿದೆ.

ಬೆಳಿಗ್ಗೆ 9.30 ರಿಂದ ಸಂಜೆ 4.30ರವರೆಗೆ ಶಿಬಿರವು ನಡೆಯಲಿದ್ದು, 5ರಿಂದ 9 ವರ್ಷ, 10ರಿಂದ 16 ವರ್ಷ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದು.

ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಭವ್ಯ ಕೀರ್ತಿರಾಜ್ ರವರು ಬ್ಯಾಗ್, ಪೌಚ್ ತಯಾರಿ, ಫ್ರೆಡ್ ಆರ್ಟ್, ಆರ್ಟ್ ಮತ್ತು ಕ್ರಾಫ್ಟ್ ಮತ್ತು ಗೊಂಬೆ ತಯಾರಿ ಬಗ್ಗೆ, ಶ್ರೀಮತಿ ಚೇತನ ಉಜಿರೆ ರವರು ಕಸದಿಂದ ರಸ , ಶ್ರೀಮತಿ ಅನ್ನಪೂರ್ಣ ಉಜಿರೆ ರವರು ಆರ್ಟ್ ಮತ್ತು ಕ್ರಾಫ್ಟ್ , ಡಾ| ದೀಪಾಲಿ ಡೋಂಗ್ರೆ ರವರು ದಂತ ಮಾಹಿತಿ ಮತ್ತು ತಪಾಸಣೆ, ಶ್ರೀಮತಿ ರೇವತಿ ಉಜಿರೆ ರವರು ಯೋಗದ ಬಗ್ಗೆ, ಸತೀಶ್ ಕಾನತ್ತೂರು ಸುಳ್ಯ ರವರು ವ್ಯಂಗ್ಯ ಚಿತ್ರದ ಬಗ್ಗೆ , ಧರ್ಮೇಂದ್ರ ಪೂಜೆಹಿತ್ಲು ರವರು ದೈಹಿಕ ಸಧೃಡತೆ ಯ ಬಗ್ಗೆ, ಶ್ರೀರಾಮ್ ಉಜಿರೆ ರವರು ಕ್ಲೇ ಆರ್ಟ್ ಬಗ್ಗೆ, ಶ್ರೀಮತಿ ಅರುಣ ಶ್ರೀನಿವಾಸ್ ಉಜಿರೆ ರವರು ಕಥಾ, ಕಾವ್ಯ, ಕಮ್ಮಟದ ಬಗ್ಗೆ, ಸಹನ್ ಎಂ. ಎಸ್., ಹಿಪ್ ಬಾಯ್ಸ್ ಡ್ಯಾನ್ಸ್ ಕ್ರೀವ್ ಉಜಿರೆ ರವರು ನೃತ್ಯದ ಬಗ್ಗೆ, ಅಶ್ವತ್ ಎಸ್. ಪುತ್ತೂರು ರವರು ರಂಗಭೂಮಿಯ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ.

ಸಂಪರ್ಕಿಸಿ : 9731963325 / 8277141506

Related posts

ಉದ್ಯಮಿ ಸುದೀಪ್ ರೈ ಆತ್ಮಹತ್ಯೆಗೆ ಶರಣು

Suddi Udaya

ಉಜಿರೆ ಶುಭ ಜ್ಯುವೆಲ್ಲರ್ಸ್ & ವರ್ಕ್ಸ್ ನಲ್ಲಿ “ಶುಭ-ಗೋಲ್ಡ್” ಸ್ಕೀಮ್ ಪ್ರಾರಂಭ: ಸಂಸ್ಥೆಯ ನೂತನ ರಾಯಭಾರಿ ಚಲನಚಿತ್ರ ನಟಿ ಸಿಂಚನ ಪಿ ರಾವ್ ರಿಂದ ಪೋಸ್ಟರ್ ಅನಾವರಣ

Suddi Udaya

ಬಂದಾರು : ಪೆರ್ಲ -ಬೈಪಾಡಿಯಲ್ಲಿ ನೂತನ ಶಾಖಾ ಅಂಚೆ ಕಚೇರಿ ಉದ್ಘಾಟನೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಅಕೊಲೆಡ್ಸ್ ತರಗತಿಗಳಿಗೆ ಚಾಲನೆ

Suddi Udaya

ಶ್ರೀ ಭಗವದ್ಗೀತಾ ಸ್ಪರ್ಧೆ : ಉಜಿರೆಯ ಎಸ್.ಡಿ.ಎಂ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಜೆಸಿಐ ಭಾರತದ ವಲಯ 15ರ ರಾಷ್ಟ್ರೀಯ ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕರಾಗಿ ಜೇಸಿ ಹೆಚ್.ಜಿ.ಎಫ್ ಅಶೋಕ್ ಗುಂಡಿಯಲ್ಕೆ ಆಯ್ಕೆ

Suddi Udaya
error: Content is protected !!