26.1 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಪಾಸ್ಕ ಕಾಲದ ನಲವತ್ತನೆ ಶುಭ ಶುಕ್ರವಾರದ ಶಿಲುಬೆಯ ಹಾದಿ ದೇವಗಿರಿಯಲ್ಲಿ ಸಂಪನ್ನ

ಬೆಳ್ತಂಗಡಿ: ಕ್ರೈಸ್ತರ ಅತ್ಯಂತ ಪವಿತ್ರ ಹಬ್ಬ ವಾದ ಈಸ್ಟರ್ ಗೆ ಸಿದ್ಧತೆಯಾಗಿ ಆಚರಿಸುವ ವ್ರತಕಾಲ ಇಂದು ನಲವತ್ತನೇ ದಿನವನ್ನು ಪ್ರವೇಶಿಸಿದೆ. ಇದರ ಪ್ರಯುಕ್ತ ಬೆಳ್ತಂಗಡಿ ಧರ್ಮ ಪ್ರಾಂತ್ಯ ದ ಶಿಲುಬೆಯ ಹಾದಿಯ ಪುಣ್ಯ ಕ್ಷೇತ್ರ ಗಂಡಿಬಾಗಿಲಿನ ದೇವಗಿರಿ ಶಿಲುಬೆಯ ಹಾದಿ ಯಶಸ್ವಿಯಾಗಿ ಸಂಪನ್ನಗೊಂಡಿತು.

ಧರ್ಮ ಪ್ರಾಂತ್ಯದ ವಿವಿದ ಧರ್ಮ ಕೇಂದ್ರಗಳಿಂದ ಮುಂಜಾನೆ ಯಿಂದಲೇ ದೇವಗಿರಿಯ ಸಂತ ಜುದರ ದೇವಾಲಯದ ಅಂಗಳದಲ್ಲಿ ಸೇರಿ ಬಲಿಪೂಜೆಯನ್ನರ್ಪಿಸಿ ಕೈಗಳಲ್ಲಿ ಸಣ್ಣ ಶಿಲುಭೆಯ ಹರಕೆಯನ್ನೋತ್ತು ದೇವಗಿರಿ ಬೆಟ್ಟವನ್ನು ಲೋಕ ರಕ್ಷಕ ಯೇಸುವಿನ
ಯಾತನೆಯನ್ನು ಸ್ಮರಿಸಿ ಶಿಲುಭೆಯ ಹಾದಿಯ ಹಾಡು ಮತ್ತು ಪ್ರಾರ್ಥನೆ ಯೊಂದಿಗೆ ಬೆಟ್ಟ ವನ್ನೇರಿದರು. ನಿನ್ನೆಯ ಹನ್ನೆರಡು ದಿನಗಳು ಕಠಿಣ ವ್ರತ ಆಚರಣೆಗೆ ಕ್ರೈಸ್ತರು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇಷ್ಟಾರ್ಥ ಈಡೇರಿಕೆ, ಹಾಗೂ ಪಾಪ ವಿಮೋಚನೆ ಗಾಗಿ ಕ್ರೈಸ್ತರು ಇದರಲ್ಲಿ ಭಾಗವಹಿಸಿ ಪ್ರಾರ್ಥಿಸುತ್ತಾರೆ. ಪ್ರತಿ ವರ್ಷವೂ ವಿವಿಧ ಸ್ಥಳಗಳಿಂದ ಧರ್ಮ ಗುರುಗಳೂ, ಭಗೀನಿಯರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.

Related posts

ರಾಜಕಾರಣದ ಗಂಡೆದೆಯ ನಾಯಕ ಮಾಜಿ‌ ಶಾಸಕ ಕೆ.ವಸಂತ ಬಂಗೇರರ ನಿಧನಕ್ಕೆ ಭಾರತೀಯ ಮಜ್ದೂರು ಸಂಘ ಜಿಲ್ಲಾಧ್ಯಕ್ಷ,ನ್ಯಾಯವಾದಿ ಅನಿಲ್ ಕುಮಾರ್ ರವರಿಂದ ಸಂತಾಪ

Suddi Udaya

ಲಾಯಿಲ ಶ್ರೀ ವಿಶ್ವಕರ್ಮಾಭ್ಯುದಯ ಸಭಾ ಹಾಗೂ ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದಿಂದ ನೂತನ ಸಂಸದ ಕ್ಯಾ| ಬ್ರಿಜೇಶ್ ಚೌಟ ರವರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ವಾಣಿ ಕಾಲೇಜಿನಲ್ಲಿ ಪೋಷಕರ ಸಭೆ

Suddi Udaya

ನೆರಿಯ: ಗಂಡಿಬಾಗಿಲು ನಿವಾಸಿ ಜೋಸೆಫ್ ವಿಷ ಸೇವಿಸಿ ಆತ್ಮಹತ್ಯೆ

Suddi Udaya

ಶ್ರೀ ಧ. ಮಂ. ಕಾಲೇಜಿನಲ್ಲಿ ತುಳು ಜಾನಪದ ಮಹಾಕವಿ ಮಾಚಾರ್ ಗೋಪಾಲ ನಾಯ್ಕ ಸಂಸ್ಮರಣೆ ಮತ್ತು ತುಳುವ ಮೌಖಿಕ ಪರಂಪರೆ ವಿಷಯದ ಕುರಿತು ವಿಶೇಷ ಉಪನ್ಯಾಸ

Suddi Udaya

ನಾರಾವಿ ಸಂತ ಅಂತೋನಿ ಪ.ಪೂ ಕಾಲೇಜಿನಲ್ಲಿ ಶಿಕ್ಷಕ – ರಕ್ಷಕರ ಸಭೆ

Suddi Udaya
error: Content is protected !!