April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿ ಆಯ್ಕೆ ಯಾದ ಸೇಬಾಷ್ಟಿಯನ್ ಪಿ ಸಿ ರವರಿಗೆ ಕೆ ಎಸ್ ಎಂ ಸಿ ಎ ಬೆಳ್ತಂಗಡಿ ವತಿಯಿಂದ ಅಭಿನಂದನೆ

ಬೆಳ್ತಂಗಡಿ :ಭಾರತೀಯ ಜನತಾ ಪಕ್ಷದ ಬೆಳ್ತಂಗಡಿ ತಾಲೂಕು ಅಲ್ಪಸಂಖ್ಯಾತ ಮೋರ್ಚಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸೇಬಾಷ್ಟಿಯನ್ ಪಿ ಸಿ ಯವರಿಗೆ ಬೆಳ್ತಂಗಡಿ ಧರ್ಮಪ್ರಾಂತ್ಯ ದ ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೊಸಿಯೇಷನ್ ಸಂಘಟನೆಯ ಪರವಾಗಿ ಅಭಿನಂದಿಸಿದರು.

ಸೇಬಾಷ್ಟಿಯನ್ ಪಿ ಸಿ ಅವರು ಕೆ ಎಸ್ ಎಂ ಸಿ ಎ ಬೆಳ್ತಂಗಡಿ ಧರ್ಮ ಪ್ರಾಂತ್ಯ ಇದರ ಕೇಂದ್ರ ಸಮಿತಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಬಹುಮುಖ ಚಟುವಟಿಕೆ ಗಳ ಮೂಲಕ ಹಲವಾರು ಸಾಮಾಜಿಕ, ಧಾರ್ಮಿಕ ಮತ್ತು ಕ್ರೀಡಾ ಚಟುವಟಿಕೆಗಳ ಮುಖಾಂತರ ಓರ್ವ ಉತ್ತಮ ನಾಯಕ ಮತ್ತು ಸಂಘಟಕ ಎಂಬ ಹಿರಿಮೆ ಪಡೆದಿದ್ದಾರೆ. ವಿನ್ಸೆಂಟ್ ಡಿ ಪೌಲ್ ಸೊಸೈಟಿಯ ಧರ್ಮ ಪ್ರಾಂತ್ಯ ಮಟ್ಟದ ಪದಾಧಿಕಾರಿಯಾಗಿ ಹಾಗೂ ಕೆ ಎಸ್ ಎಂ ಸಿ ಎ ಪಿ ಆರ್ ಓ ಆಗಿ ಸೇವೆ ಸಲ್ಲಿಸುತ್ತಿದ್ದಾರೆ., ಧರ್ಮ ಪ್ರಾಂತ್ಯ ರಜತ ಸಂಭ್ರಮದ ಸ್ವಾಗತ ಸಮಿತಿ, ಮತ್ತು ಆರ್ಥಿಕ ಸಮಿತಿಯಲ್ಲಿದ್ದು ಉತ್ತಮ ನಾಯಕತ್ವದ ಮುಖಾಂತರ ರಜತ ಸಂಭ್ರಮ ಯಶಸ್ವೀಗೊಳಿಸುವಲ್ಲಿ ಸೇಬಾಷ್ಟಿಯನ್ ಪಿ ಸಿ ನೀರ್ಣಾಯಕ ಕೊಡೆಗೆಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಕೆ ಎಸ್ ಎಂ ಸಿ ಎ ಇದರ ಕೇಂದ್ರೀಯ ನಿರ್ದೇಶಕರು ಆಗಿರುವ ವಂದನಿಯ ಫಾ. ಶಾಜಿ ಮಾತ್ಯು ಅವರು ಸೇಬಾಷ್ಟಿಯನ್ ಪಿ ಸಿ ಅವರ ಹೊಸ ಜವಾಬ್ದಾರಿ ಸಮಾಜಕ್ಕೆ ಹೆಚ್ಚು ಸೇವೆ ನೀಡಲು ಒಂದು ಅವಕಾಶ ವಾಗಲಿ ಎಂದು ಹಾರೈಸಿದ್ದಾರೆ.

ತಾಲೂಕು ಉಪಾಧ್ಯಕ್ಷರಾಗಿ ಆಯ್ಕೆ ಯಾದ ಉಜಿರೆ ಕೆ ಎಸ್ ಎಂ ಸಿ ಎ ಪ್ರಾಥಮಿಕ ಘಟಕದ ಅಧ್ಯಕ್ಷ ಜೋಬಿನ್ ಮುಳವನ ಮಾಚಾರು, ಹಾಗೂ ಕಾರ್ಯದರ್ಶಿ ಯಾಗಿ ಆಯ್ಕೆ ಯಾಗಿರುವ ಪ್ರಿನ್ಸ್ ತೋಮಸ್ ತೋಟತ್ತಾಡಿ ಇವರನ್ನು
ಅಧ್ಯಕ್ಷರು ಬಿಟ್ಟಿ ನೆಡುನಿಲಂ, ಸೇಬಾಷ್ಟಿಯನ್ ಎಂ ಜೆ ಪ್ರದಾನ ಕಾರ್ಯದರ್ಶಿಗಳು, ಬೆನ್ನಿ ಕೋಲಮ್ಚೇರಿ ಉಪಾಧ್ಯಕ್ಷರು, ಜಿಮ್ಮಿ ಗುಂಡ್ಯ , ಜಾರ್ಜ್ ಟಿ ವಿ, ಶ್ರೀಮತಿ ಅಲ್ಫೋನ್ಸ, ಶ್ರೀಮತಿ ರರೀನಾ ಸಿಬಿ ಧರ್ಮಸ್ಥಳ. ಕೇಂದ್ರ ಸಮಿತಿ ಸದಸ್ಯರು ಅಭಿನಂದಿಸಿದ್ದಾರೆ.

Related posts

ಧರ್ಮಸ್ಥಳ: ಟಾಟಾ ಸುಮೋ ಹಾಗೂ ಸ್ಕೂಟಿ ನಡುವೆ ರಸ್ತೆ ಅಪಘಾತ: ಸ್ಕೂಟಿ ಸವಾರ ಗಂಭೀರ ಗಾಯ

Suddi Udaya

ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷರಾಗಿ ಜನಾರ್ದನ ಗೌಡ ಕೆ, ಉಪಾಧ್ಯಕ್ಷರಾಗಿ ಸಿರಿಲ್ ಪಿಂಟೋ

Suddi Udaya

ಹತ್ಯಡ್ಕ ಬೂತ್ 216 ರ ಬಿಜೆಪಿ ಮಹಿಳಾ ಸಂಚಾಲಕಿಯಾಗಿ ಸುಜಾತಾ ಎಸ್. ಆಯ್ಕೆ

Suddi Udaya

ಉಜಿರೆ ಶ್ರೀ ಧ.ಮಂ. ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಪ್ರಮುಖ 2025: ಜಿಲ್ಲಾಮಟ್ಟದ ವಸ್ತುಪ್ರದರ್ಶನ ಹಾಗೂ ಅಂತರ ಕಾಲೇಜು ಉತ್ಸವ

Suddi Udaya

ಸತೀಶ್ ಕುರ್ಡುಮೆ ನಿಧನಕ್ಕೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಿಂದ ಸಂತಾಪ

Suddi Udaya

ದ್ವಿತೀಯ ಪಿಯುಸಿ ಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಾಣಿ ಪ.ಪೂ. ಕಾಲೇಜಿನ ವಿದ್ಯಾರ್ಥಿ ಅನನ್ಯ ರಿಗೆ ಜೆಸಿಐ ಕೊಕ್ಕಡ ಕಪಿಲ ಘಟಕದಿಂದ ಸನ್ಮಾನ

Suddi Udaya
error: Content is protected !!