23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿ ಆಯ್ಕೆ ಯಾದ ಸೇಬಾಷ್ಟಿಯನ್ ಪಿ ಸಿ ರವರಿಗೆ ಕೆ ಎಸ್ ಎಂ ಸಿ ಎ ಬೆಳ್ತಂಗಡಿ ವತಿಯಿಂದ ಅಭಿನಂದನೆ

ಬೆಳ್ತಂಗಡಿ :ಭಾರತೀಯ ಜನತಾ ಪಕ್ಷದ ಬೆಳ್ತಂಗಡಿ ತಾಲೂಕು ಅಲ್ಪಸಂಖ್ಯಾತ ಮೋರ್ಚಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸೇಬಾಷ್ಟಿಯನ್ ಪಿ ಸಿ ಯವರಿಗೆ ಬೆಳ್ತಂಗಡಿ ಧರ್ಮಪ್ರಾಂತ್ಯ ದ ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೊಸಿಯೇಷನ್ ಸಂಘಟನೆಯ ಪರವಾಗಿ ಅಭಿನಂದಿಸಿದರು.

ಸೇಬಾಷ್ಟಿಯನ್ ಪಿ ಸಿ ಅವರು ಕೆ ಎಸ್ ಎಂ ಸಿ ಎ ಬೆಳ್ತಂಗಡಿ ಧರ್ಮ ಪ್ರಾಂತ್ಯ ಇದರ ಕೇಂದ್ರ ಸಮಿತಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಬಹುಮುಖ ಚಟುವಟಿಕೆ ಗಳ ಮೂಲಕ ಹಲವಾರು ಸಾಮಾಜಿಕ, ಧಾರ್ಮಿಕ ಮತ್ತು ಕ್ರೀಡಾ ಚಟುವಟಿಕೆಗಳ ಮುಖಾಂತರ ಓರ್ವ ಉತ್ತಮ ನಾಯಕ ಮತ್ತು ಸಂಘಟಕ ಎಂಬ ಹಿರಿಮೆ ಪಡೆದಿದ್ದಾರೆ. ವಿನ್ಸೆಂಟ್ ಡಿ ಪೌಲ್ ಸೊಸೈಟಿಯ ಧರ್ಮ ಪ್ರಾಂತ್ಯ ಮಟ್ಟದ ಪದಾಧಿಕಾರಿಯಾಗಿ ಹಾಗೂ ಕೆ ಎಸ್ ಎಂ ಸಿ ಎ ಪಿ ಆರ್ ಓ ಆಗಿ ಸೇವೆ ಸಲ್ಲಿಸುತ್ತಿದ್ದಾರೆ., ಧರ್ಮ ಪ್ರಾಂತ್ಯ ರಜತ ಸಂಭ್ರಮದ ಸ್ವಾಗತ ಸಮಿತಿ, ಮತ್ತು ಆರ್ಥಿಕ ಸಮಿತಿಯಲ್ಲಿದ್ದು ಉತ್ತಮ ನಾಯಕತ್ವದ ಮುಖಾಂತರ ರಜತ ಸಂಭ್ರಮ ಯಶಸ್ವೀಗೊಳಿಸುವಲ್ಲಿ ಸೇಬಾಷ್ಟಿಯನ್ ಪಿ ಸಿ ನೀರ್ಣಾಯಕ ಕೊಡೆಗೆಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಕೆ ಎಸ್ ಎಂ ಸಿ ಎ ಇದರ ಕೇಂದ್ರೀಯ ನಿರ್ದೇಶಕರು ಆಗಿರುವ ವಂದನಿಯ ಫಾ. ಶಾಜಿ ಮಾತ್ಯು ಅವರು ಸೇಬಾಷ್ಟಿಯನ್ ಪಿ ಸಿ ಅವರ ಹೊಸ ಜವಾಬ್ದಾರಿ ಸಮಾಜಕ್ಕೆ ಹೆಚ್ಚು ಸೇವೆ ನೀಡಲು ಒಂದು ಅವಕಾಶ ವಾಗಲಿ ಎಂದು ಹಾರೈಸಿದ್ದಾರೆ.

ತಾಲೂಕು ಉಪಾಧ್ಯಕ್ಷರಾಗಿ ಆಯ್ಕೆ ಯಾದ ಉಜಿರೆ ಕೆ ಎಸ್ ಎಂ ಸಿ ಎ ಪ್ರಾಥಮಿಕ ಘಟಕದ ಅಧ್ಯಕ್ಷ ಜೋಬಿನ್ ಮುಳವನ ಮಾಚಾರು, ಹಾಗೂ ಕಾರ್ಯದರ್ಶಿ ಯಾಗಿ ಆಯ್ಕೆ ಯಾಗಿರುವ ಪ್ರಿನ್ಸ್ ತೋಮಸ್ ತೋಟತ್ತಾಡಿ ಇವರನ್ನು
ಅಧ್ಯಕ್ಷರು ಬಿಟ್ಟಿ ನೆಡುನಿಲಂ, ಸೇಬಾಷ್ಟಿಯನ್ ಎಂ ಜೆ ಪ್ರದಾನ ಕಾರ್ಯದರ್ಶಿಗಳು, ಬೆನ್ನಿ ಕೋಲಮ್ಚೇರಿ ಉಪಾಧ್ಯಕ್ಷರು, ಜಿಮ್ಮಿ ಗುಂಡ್ಯ , ಜಾರ್ಜ್ ಟಿ ವಿ, ಶ್ರೀಮತಿ ಅಲ್ಫೋನ್ಸ, ಶ್ರೀಮತಿ ರರೀನಾ ಸಿಬಿ ಧರ್ಮಸ್ಥಳ. ಕೇಂದ್ರ ಸಮಿತಿ ಸದಸ್ಯರು ಅಭಿನಂದಿಸಿದ್ದಾರೆ.

Related posts

ನಂದಿನಿ ಹಾಲಿನ ದರ 4 ರೂ. ಏರಿಕೆ

Suddi Udaya

ಬೆಳ್ತಂಗಡಿ ವಕೀಲರ ಸಂಘದ ನಿಯೋಗದಿಂದ ದ. ಕ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳ ಭೇಟಿ, ನೂತನ ನ್ಯಾಯಾಲಯ ಸಂಕೀರ್ಣ ಶಂಕು ಸ್ಥಾಪನೆ ಬಗ್ಗೆ ಚರ್ಚೆ

Suddi Udaya

ಗುರುವಾಯನಕೆರೆ: ನಿಸರ್ಗ ಆರ್ಕೇಡ್ ನ ಲೋಕಾರ್ಪಣೆ ಹಾಗೂ ಮನೆಯ ಗೃಹಪ್ರವೇಶ

Suddi Udaya

ಕಳಿಯ ಗ್ರಾ.ಪಂ. ಮಟ್ಟದ ವೈಷ್ಣವಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಇಂದಬೆಟ್ಟು ಗ್ರಾ.ಪಂ ನಲ್ಲಿ ಕಾಮಗಾರಿಗಳಲ್ಲಿ ಅವ್ಯವಹಾರ ಪ್ರಕರಣ: ಕಾಮಗಾರಿಗಳಲ್ಲಿ ಕತ೯ವ್ಯ ಲೋಪ ನಡೆದಿರುವುದು ತನಿಖೆಯಿಂದ ಬಹಿರಂಗ

Suddi Udaya

ಬೆಳ್ತಂಗಡಿ : ಸರಕಾರಿ ನಿವೃತ್ತ ನೌಕರರ ಮತ್ತು ಹಿರಿಯ ನಾಗರಿಕರ ಸೇವಾ ಸಂಸ್ಥೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ

Suddi Udaya
error: Content is protected !!