ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದಿಂದ ಹೊಗೆ ಮನೆಗೆ ಬೆಂಕಿ‌ ಬಿದ್ದು ನಷ್ಟ ಅನುಭವಿಸಿದ ಕಿನ್ನಿ ಗೌಡರಿಗೆ ಪರಿಹಾರ ನಿಧಿ ಹಸ್ತಾಂತರ

Suddi Udaya

ಉಜಿರೆ: ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಸದಸ್ಯರಾದ ಕಿನ್ನಿ ಗೌಡ ಯಾನೆ ವೀರಪ್ಪ ಗೌಡ, ಚಾರ್ಮಾಡಿ ಇವರ ಹೊಗೆ ಮನೆಯು ಮಾ.16 ರಂದು ಸುಟ್ಟು ಹೋಗಿದ್ದು, ಸಂಘದ ಆಡಳಿತ ಮಂಡಳಿ ನಿರ್ಣಯದಂತೆ ರೂ.10000/- ಪರಿಹಾರದ ಚೆಕ್ಕನ್ನು ಸಂಘದ ವತಿಯಿಂದ ಮಾ. 30 ರಂದು ಸಂಘದ ಉಪಾಧ್ಯಕ್ಷರಾದ ಅನಂತ ಭಟ್ ಎಂ. ಮತ್ತು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ ಇವರು ಅವರ ಮನೆಗೆ ತೆರಳಿ ಹಸ್ತಾಂತರಿಸಿದರು.

Leave a Comment

error: Content is protected !!